ಪೊಲೀಸರ ನಡೆಗೆ ಸಚಿವ ಜೋಶಿ ಖಂಡನೆ
ಹುಬ್ಬಳ್ಳಿ : ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ದೇಶದ್ರೋಹಿ ವಿದ್ಯಾರ್ಥಿಗಳನ್ನು ಕೂಡಲೇ ದೇಶದ್ರೋಹ ಆಪಾದನೆ ಮೇಲೆ ಬಂಧಿಸುವಲ್ಲಿವಿಫಲರಾದ ಪೊಲೀಸರ ಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಖಂಡಿಸಿದ್ದಾರೆ. ದೇಶದ್ರೋಹ ಪ್ರಕರಣ ಅತ್ಯಂತ ಗಂಭೀರವಾಗಿದ್ದು, ಪೊಲೀಸರು ಕೂಡಲೇ ಪ್ರಕರಣ
Vijaya Karnataka 17 Feb 2020, 6:27 pm
ಹುಬ್ಬಳ್ಳಿ : ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ದೇಶದ್ರೋಹಿ ವಿದ್ಯಾರ್ಥಿಗಳನ್ನು ಕೂಡಲೇ ದೇಶದ್ರೋಹ ಆಪಾದನೆ ಮೇಲೆ ಬಂಧಿಸುವಲ್ಲಿವಿಫಲರಾದ ಪೊಲೀಸರ ಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಖಂಡಿಸಿದ್ದಾರೆ. ದೇಶದ್ರೋಹ ಪ್ರಕರಣ ಅತ್ಯಂತ ಗಂಭೀರವಾಗಿದ್ದು, ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿ ಅವರನ್ನು ಬಂಧಿಸದೇ ಗೊಂದಲಮಯವಾಗಿ ಪ್ರಕರಣ ನಿರ್ವಹಿಸಿದ್ದಾರೆ. ಇದು ಜನಸಮಾನ್ಯರಲ್ಲಿಬೇಸರ ತರಿಸಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ರಾಜ್ಯ ಸರಕಾರ ಕ್ರಮಕೈಗೊಳ್ಳಬೇಕೆಂದು ಸಚಿವ ಜೋಶಿ ಆಗ್ರಹಿಸಿದ್ದಾರೆ.