ಆ್ಯಪ್ನಗರ

ಸಚಿವ ಜೋಶಿ ಹೇಳಿಕೆ ಸ್ವಾಗತಾರ್ಹ: ಅಂಬಲಿ

ಧಾರವಾಡ : ಹಲವು ದಶಕಗಳಿಂದ ನಡೆದಿರುವ ಮಹದಾಯಿ ನೀರಿನ ಹೋರಾಟ ಅಂತಿಮ ಹಂತಕ್ಕೆ ತಲುಪಿದ್ದು, ಈ ವಿವಾದ ಇತ್ಯರ್ಥಕ್ಕೆ ಮೂರು ರಾಜ್ಯದ ಪ್ರತಿನಿಧಿಗಳ ಸಭೆ ನಡೆಸುವುದಾಗಿ ಹೇಳಿರುವ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರ ಹೇಳಿಕೆ ಸ್ವಾಗತಾರ್ಹ ಎಂದು ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಶಂಕ್ರಪ್ಪ ಅಂಬಲಿ ತಿಳಿಸಿದ್ದಾರೆ.

Vijaya Karnataka 25 Jun 2019, 5:00 am
ಧಾರವಾಡ : ಹಲವು ದಶಕಗಳಿಂದ ನಡೆದಿರುವ ಮಹದಾಯಿ ನೀರಿನ ಹೋರಾಟ ಅಂತಿಮ ಹಂತಕ್ಕೆ ತಲುಪಿದ್ದು, ಈ ವಿವಾದ ಇತ್ಯರ್ಥಕ್ಕೆ ಮೂರು ರಾಜ್ಯದ ಪ್ರತಿನಿಧಿಗಳ ಸಭೆ ನಡೆಸುವುದಾಗಿ ಹೇಳಿರುವ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರ ಹೇಳಿಕೆ ಸ್ವಾಗತಾರ್ಹ ಎಂದು ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಶಂಕ್ರಪ್ಪ ಅಂಬಲಿ ತಿಳಿಸಿದ್ದಾರೆ.
Vijaya Karnataka Web minister joshis statement is welcome ambali
ಸಚಿವ ಜೋಶಿ ಹೇಳಿಕೆ ಸ್ವಾಗತಾರ್ಹ: ಅಂಬಲಿ


ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಮಹದಾಯಿ ವಿವಾದ ಅಂತಿಮ ಘಟ್ಟಕ್ಕೆ ತಲುಪಿದ್ದರೂ ಸದ್ಯ ಕಾನೂನು ತೊಡಕುಗಳಿಂದ ವಿಳಂಬವಾಗುತ್ತಿದೆ. ಇದರಿಂದ ರೈತರು ಆತಂಕ ಪಡುವಂತಾಗಿದೆ'' ಎಂದರು.

''ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರದ ಜಲಸಂಪನ್ಮೂಲ ಸಚಿವರಿಗೆ, ಕೇಂದ್ರ ಕಲ್ಲಿದಲ್ಲು ಸಚಿವ ಪ್ರಹ್ಲಾದ ಜೋಶಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಹದಾಯಿ ಪ್ರಾಂತದ ಜನರ ಸಮಸ್ಯೆ ಬಗೆಹರಿಸಲು ಯೋಜನೆ ಜಾರಿಗೊಳಿಸಲು ಮನವಿ ಮಾಡಲಾಗಿತ್ತು'' ಎಂದರು.

''ನಮ್ಮ ಮನವಿಗೆ ಸ್ಪಂದಿಸಿರುವ ಕೇಂದ್ರದ ಉಭಯ ಸಚಿವರು ವಾರದಲ್ಲಿ ಮೂರು ರಾಜ್ಯದ ಪ್ರತಿನಿಧಿಗಳ ಸಭೆ ಜರುಗಿಸಲು ಮುಂದಾಗಿರುವ ಕ್ರಮವನ್ನು ಸ್ವಾಗತಿಸುತ್ತೇವೆ. ಜತೆಗೆ ಕೇಂದ್ರ ಸರಕಾರದ ಸಕಾರಾತ್ಮಕ ನಡೆಗೆ ಸ್ಪಂದಿಸಲು ರಾಜ್ಯ ಜಲಸಂಪನ್ಮೂಲ ಸಚಿವರಿಗೂ ಮನವಿ ಮಾಡಿಕೊಳ್ಳಲಾಗಿದೆ'' ಎಂದರು.

ಪರಿಹಾರಕ್ಕೆ ಆಗ್ರಹ:
''ಈ ಸಾಲಿನ ಮುಂಗಾರು ಸಂಪೂರ್ಣ ವಿಫಲವಾಗಿದೆ. ಬಿತ್ತನೆಗೆ ರೈತರು ಸಾಕಷ್ಟು ಸಾಲ ಮಾಡಿಕೊಂಡು ಅರ್ಥಿಕ ತೊಂದರೆಯಲ್ಲಿದ್ದಾರೆ. ರಾಜ್ಯ ಹಾಗೂ ಕೇಂದ್ರ ತಕ್ಷಣ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಿ ರೈತರ ನೆರವಿಗೆ ಬರಬೇಕು. ಉಚಿತ ಬೀಜ, ಗೊಬ್ಬರ ನೀಡಬೇಕು. ಅಲ್ಲದೇ 2018-19ನೇ ಸಾಲಿನ ಮುಂಗಾರಿ ಮತ್ತು ಹಿಂಗಾರಿ ಬೆಳೆ ವಿಮೆ ತ್ವರಿತವಾಗಿ ತಲುಪಿಸಬೇಕು. ಮಹದಾಯಿ ಹೋರಾಟದಲ್ಲಿ ತೊಡಗಿದ ಎಲ್ಲ ರೈತರ ಮೇಲಿನ ಕೇಸ್‌ಗಳನ್ನು ಹಿಂಪಡೆಯಬೇಕು'' ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಶಂಕರಗೌಡ ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಸುರಪೂರ, ಕಾನೂನು ಸಲಹೆಗಾರ ಲಕ್ಷ ್ಮಣ್‌ ಬಕ್ಕಾಯಿ, ಎಸ್‌.ಜಿ.ಪಾಟೀಲ ಸೇರಿದಂತೆ ಇತರರು ಇದ್ದರು.

ಸಾಲ ಮನ್ನಾ ಇನ್ನೂ ಗೊಂದಲ
ರಾಜ್ಯ ಸರಕಾರದ ಸಾಲ ಮನ್ನಾದ ನಿಯಮಗಳಿಂದಲೇ ಸಾಕಷ್ಟು ರೈತರು ಗೊಂದಲದಲ್ಲಿದ್ದಾರೆ. ಸಾಲ ಮನ್ನಾ ಯೋಜನೆಯಡಿ ಬ್ಯಾಂಕವೊಂದರಲ್ಲಿ ಕಡಿಮೆ ಬೆಳಸಾಲ ಮನ್ನಾ ಮಾಡಿ ಋುಣಪತ್ರ ನೀಡಿದ್ದಾರೆ. ಆದರೆ, ಸರಕಾರ ಋುಣ ಪತ್ರ ನೀಡಿದ ಬೆನ್ನಲ್ಲೇ ಮತ್ತೊಂದು ಬ್ಯಾಂಕ್‌ನಿಂದ ರೈತನಿಗೆ ನೋಟೀಸ್‌ ನೀಡಲಾಗುತ್ತಿದೆ. ಇದಕ್ಕೆ ಉದಾಹರಣೆ ನಾನೇ (ಶಂಕ್ರಪ್ಪ ಅಂಬಲಿ) ಈ ಕುರಿತು ಸರಕಾರ ಗಮನಹರಿಸಬೇಕು. ಅಲ್ಲದೇ ರಾಷ್ಟ್ರೀಯ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿನ ಅರ್ಹ ರೈತರ ಸಂಬಂಧಿತ ದಾಖಲೆಗಳನ್ನು ಪರಿಗಣಿಸಿ ಎರಡು ಕಡೆಗೆ ಇರುವ ಸಾಲ ಮನ್ನಾ ಮಾಡಬೇಕು ಎಂದು ಶಂಕ್ರಪ್ಪ ಅಂಬಲಿ ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ