ಆ್ಯಪ್ನಗರ

ಸಿ.ಡಿ. ಮುಂದಿಟ್ಟುಕೊಂಡು ಯಡಿಯೂರಪ್ಪರನ್ನು ಹೆದರಿಸುವ ತಂತ್ರ ಸರಿಯಲ್ಲ: ಪ್ರಹ್ಲಾದ್ ಜೋಶಿ

ಯಾವ ಸಿ.ಡಿ. ಇಲ್ಲದಿದ್ದರೂ ಇದನ್ನೇ ಮುಂದಿಟ್ಟುಕೊಂಡು ಯಡಿಯೂರಪ್ಪ ಅವರನ್ನು ಹೆದರಿಸುವ ತಂತ್ರವನ್ನು ಪಕ್ಷದ ಅತೃಪ್ತ ಶಾಸಕರು ಮಾಡುತ್ತಿರುವುದು ಸರಿಯಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

Vijaya Karnataka Web 15 Jan 2021, 4:22 pm
ಹುಬ್ಬಳ್ಳಿ: ಸಿಡಿ ವಿಚಾರ ಇಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹೆದರಿಸುವುದು ಸರಿಯಲ್ಲ.‌ ಅವರಲ್ಲಿ ಸಿಡಿ ಇಲ್ಲ‌. ಸುಖಾ ಸುಮ್ಮನೆ ಬೆದರಿಕೆ ಹಾಕುತ್ತಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
Vijaya Karnataka Web Pralhad Joshi


ನಗರದಲ್ಲಿ ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ ಸಚಿವ ಸ್ಥಾನ ಸಿಗದೆ ಇರುವವರು ತಮ್ಮ ಅಭಿಪ್ರಾಯವನ್ನು ಪಕ್ಷದ ಉಸ್ತುವಾರಿ, ಹೈಕಮಾಂಡ್ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಬಹುದು. ಇದನ್ನು ಸಿಎಂ‌ ಕೂಡ ಸ್ಪಷ್ಡಪಡಿಸಿದ್ದಾರೆ ಎಂದರು.

ಸಿ.ಡಿ. ಎಂಬುದು ಇಲ್ಲವೇ ಇಲ್ಲ. ಇರುವುದು ನಿಜವೇ ಆದರೆ ಅದನ್ನು ಇಟ್ಟುಕೊಂಡು ಬೆದರಿಸುವ ತಂತ್ರ ಯಾಕೆ? ಧೈರ್ಯ ಇದ್ದರೆ ಸಿಡಿ ಬಿಡುಗಡೆ ಮಾಡಿ. ಸಿಡಿ ಕೊಡಿ ಎಂದು ಮುಖ್ಯಮಂತ್ರಿ ಕೂಡ ಇಷ್ಟು ಧೈರ್ಯದಿಂದ ಹೇಳಿದ್ದಾರೆ ಅಂದರೆ ಸಿಡಿ‌ ಬಗ್ಗೆ ಹೇಳುವವರಲ್ಲಿ ಸಿಡಿ‌ ಇಲ್ಲವೇ ಇಲ್ಲ. ರಾಜಕಾರಣ ದಲ್ಲಿ ನಾಯಕರಿಗೆ ಮಹತ್ವಾಕಾಂಕ್ಷೆ ಇರುವುದು ತಪ್ಪಲ್ಲ. ಆದರೆ ಬಹಿರಂಗವಾಗಿ ಹೇಳಿಕೆ ನೀಡೊದು ತಪ್ಪು ಎಂದು ಜೋಶಿ ಹೇಳಿದರು.

‘ಯಾರ ಹತ್ರ ಇರದಿದ್ರೂ ನಮ್ಮ ಸ್ನೇಹಿತ ವಿಶ್ವನಾಥ್ ಹತ್ರ ಸಿ.ಡಿ ಇದ್ದೇ ಇರುತ್ತೆ’; ಟಿಬಿ ಜಯಚಂದ್ರ

ಸರಕಾರ ಸಾಲ ಪಡೆದು ಹಣ ಕೊಡಲಿ:
ಭಾರತ ಸರಕಾರ‌ ತನ್ನ ಪಾಲಿನ 435 ಕೋಟಿ ಕೊಡುತ್ತದೆ. ಇದನ್ನು ಇನ್ನೂ ಹೆಚ್ಚಿಸುತ್ತದೆ. ಸಿಆರ್ ಎಫ್ ಫಂಡ್ ಬಿಡುಗಡೆ ತಡವಾಗುತ್ತದೆ ಎನ್ನುವ ಕಾರಣಕ್ಕೆ ರಾಜ್ಯ ಸರಕಾರಗಳು ಪ್ರಸ್ತಾವನೆ ಸಲ್ಲಿಸುವುದಿಲ್ಲ.ರಾಜ್ಯ ಸರಕಾರ ವಿಶ್ವ ಬ್ಯಾಂಕ್ ನಲ್ಲಿ 3-4 ಸಾವಿರ ಕೋಟಿ ಸಾಲ ಪಡೆದು ರಸ್ತೆ ಯೋಜನೆಗಳಿಗೆ ಹಣ ಬಿಡುಗಡೆ ಮಾಡಬೇಕು. ನಂತರ ಕೇಂದ್ರ ಸರಕಾರ ಹಣ ಕೊಟ್ಟೆ ಕೊಡುತ್ತದೆ. ‌ಮಂಜೂರು ಮಾಡಿಸಿಕೊಡುವ ಜವಾಬ್ದಾರಿ ನಮ್ಮದು. ಕೇಂದ್ರ ಬಿಡುಗಡೆ ಮಾಡಿದ ತಕ್ಷಣ
ಆ ಹಣವನ್ನು ಸಾಲ ಮರು ಪಾವತಿ ಮಾಡಬಹುದಾಗಿದೆ. ಬಹಳಷ್ಟು ರಾಜ್ಯ ಸರಕಾರಗಳು ಹೀಗೆ ಮಾಡುತ್ತಿವೆ. ನಮ್ಮ ರಾಜ್ಯದಲ್ಲಿ ಸಿಎಂ ಜತೆ ಚರ್ಚೆ ಮಾಡಿದ್ದು, ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದ್ದಾರೆ ಎಂದು ಈ ವೇಳೆ ಜೋಶಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ