ಆ್ಯಪ್ನಗರ

ಚಾಕು ಇರಿತ ಗಾಯಾಳುಗಳಿಗೆ ಸಚಿವ ಶೆಟ್ಟರ್‌ ಸಾಂತ್ವನ

ಹುಬ್ಬಳ್ಳಿ: ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿಚಾಕು ಇರಿತಕ್ಕೆ ಒಳಗಾಗಿದ್ದ ಗಾಯಾಳುಗಳನ್ನು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಕಿಮ್ಸ್‌ನಲ್ಲಿಭಾನುವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

Vijaya Karnataka 16 Sep 2019, 5:00 am
ಹುಬ್ಬಳ್ಳಿ: ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿಚಾಕು ಇರಿತಕ್ಕೆ ಒಳಗಾಗಿದ್ದ ಗಾಯಾಳುಗಳನ್ನು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಕಿಮ್ಸ್‌ನಲ್ಲಿಭಾನುವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
Vijaya Karnataka Web minister shetter commemorates knife stabbing victims
ಚಾಕು ಇರಿತ ಗಾಯಾಳುಗಳಿಗೆ ಸಚಿವ ಶೆಟ್ಟರ್‌ ಸಾಂತ್ವನ


ಚಾಕು ಇರಿತ ಗಲಾಟೆಯಲ್ಲಿಒಂಬತ್ತು ಗಾಯಾಳುಗಳು ಆಸ್ಪತ್ರೆಯಲ್ಲಿದಾಖಲಾಗಿದ್ದು ಒಬ್ಬ ಮೃತಪಟ್ಟಿದ್ದಾನೆ. ಇನ್ನು ಐದು ಜನ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಉಳಿದ ಮೂವರು ಗಾಯಾಳುಗಳಾದ ಮಹಾಂತೇಶ ಹೊಸಮನಿ, ಅನಿಲ ಹಾಗೂ ವಿನಾಯಕ ಭಜಂತ್ರಿ ಅವರನ್ನು ಭೇಟಿ ಮಾಡಿದ ಸಚಿವ ಶೆಟ್ಟರ್‌, ಕಿಮ್ಸ್‌ನಲ್ಲಿನಿಮಗೆ ಬೇಕಾದ ಚಿಕಿತ್ಸೆ ದೊರೆಯಲಿದೆ ಎಂದು ಭರವಸೆ ನೀಡಿದರು.

ಇದೇ ವೇಳೆ ಮಹಾಂತೇಶ ಅವರ ತಂದೆ ಬಸವನಗೌಡ ಮತ್ತು ತಾಯಿ ಶಿವಲೀಲಾ ಅವರು ಶೆಟ್ಟರ್‌ ಮುಂದೆ ಕಣ್ಣೀರು ಸುರಿಸಿದರು. ನಿಮ್ಮ ಮಗನಿಗೆ ಪ್ರಾಣಪಾಯ ಇಲ್ಲ. ಭಯಪಡಬೇಡಿ ಎಂದು ಶೆಟ್ಟರ್‌ ಸಮಾಧಾನ ಪಡಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ನಡೆದ ದಿನದಂದೇ ಪೊಲೀಸ್‌ ಕಮಿಷನರ್‌ ಜತೆ ಮಾತನಾಡಿದ್ದೇನೆ. ಗಣೇಶೋತ್ಸವ ಅಲ್ಲದೇ ಧಾರ್ಮಿಕ ಕಾರ್ಯಕ್ರಮಗಳು ನಡೆದಾಗ ಮುನ್ನೆಚ್ಚರಿಕೆಯಾಗಿ ಕಟ್ಟೆಚ್ಚರ ವಹಿಸಬೇಕು. ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದೇನೆ ಮತ್ತು ಗೃಹ ಸಚಿವರ ಜತೆ ಮಾತನಾಡುತ್ತೇನೆ ಎಂದು ಹೇಳಿದರು.

ಘಟನೆ ಬಗ್ಗೆ ತೀವ್ರವಾಗಿ ತನಿಖೆ ನಡೆಯುತ್ತಿದ್ದು, ಈಗಾಗಲೇ ಆರೋಪಿಗಳನ್ನೂ ಬಂಧಿಸಲಾಗಿದೆ. ಈ ಘಟನೆ ವೈಯಕ್ತಿಕ ದ್ವೇಷದಿಂದ ನಡೆದಿದ್ದು ಎನಿಸುತ್ತದೆ. ತನಿಖೆ ಪೂರ್ಣವಾದ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದರು.

ದುಬಾರಿ ದಂಡ:
ಕೇಂದ್ರ ಸರಕಾರ ಜನರಲ್ಲಿಜಾಗೃತಿ ಮೂಡಿಸುವ ಉದ್ದೇಶದಿಂದ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ತಂದಿದೆ. ಸಿಂಗಪುರ ಮತ್ತು ಅರಬ್‌ ರಾಷ್ಟ್ರಗಳಲ್ಲಿಇರುವಷ್ಟು ದಂಡ ನಮ್ಮಲ್ಲಿಇಲ್ಲ. ಹೊಸ ನಿಯಮವನ್ನು ಹಂತಹಂತವಾಗಿ ಸುಧಾರಣೆ ಮಾಡಬೇಕು ಎಂದು ಶೆಟ್ಟರ್‌ ಸಮರ್ಥನೆ ಮಾಡಿಕೊಂಡರು.

ಈ ಸಂದರ್ಭದಲ್ಲಿಕಿಮ್ಸ… ವೈದ್ಯಕೀಯ ಅಧೀಕ್ಷಕ ಸಿ. ಅರುಣ ಕುಮಾರ್‌, ಬಿಜೆಪಿ ಮುಖಂಡರಾದ ಮಹೇಶ ಟೆಂಗಿನಕಾಯಿ, ನಾಗೇಶ ಕಲಬುರ್ಗಿ, ರವಿ ನಾಯಕ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ