ಸಚಿವ ಶೆಟ್ಟರ್ಗೆ ಮಾತೃವಿಯೋಗ
ಹುಬ್ಬಳ್ಳಿ: ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರ ಮಾತೋಶ್ರೀ ಬಸವಣ್ಣೆವ್ವ ಶಿವಪ್ಪ ಶೆಟ್ಟರ್ ಅವರು ಶುಕ್ರವಾರ ತಮ್ಮ 86ನೇ ವಯಸ್ಸಿನಲ್ಲಿಶಿವಾಧೀನರಾದರು. ಕೇಶ್ವಾಪುರ ಶಬರಿ ನಗರದ ಲಕ್ಷ್ಮಿ ಲೇಔಟ್ದಲ್ಲಿವಾಸವಾಗಿದ್ದ ಅವರು ಮಧ್ಯಾಹ್ನ 3ಕ್ಕೆ ಕೊನೆಯುಸಿರೆಳೆದರು. ಅವರಿಗೆ ಪುತ್ರರಾದ ಸಚಿವ ಜಗದೀಶ ಶೆಟ್ಟರ್,
Vijaya Karnataka 11 Jan 2020, 5:41 pm
ಹುಬ್ಬಳ್ಳಿ: ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರ ಮಾತೋಶ್ರೀ ಬಸವಣ್ಣೆವ್ವ ಶಿವಪ್ಪ ಶೆಟ್ಟರ್ ಅವರು ಶುಕ್ರವಾರ ತಮ್ಮ 86ನೇ ವಯಸ್ಸಿನಲ್ಲಿಶಿವಾಧೀನರಾದರು.
ಕೇಶ್ವಾಪುರ ಶಬರಿ ನಗರದ ಲಕ್ಷ್ಮಿ ಲೇಔಟ್ದಲ್ಲಿವಾಸವಾಗಿದ್ದ ಅವರು ಮಧ್ಯಾಹ್ನ 3ಕ್ಕೆ ಕೊನೆಯುಸಿರೆಳೆದರು. ಅವರಿಗೆ ಪುತ್ರರಾದ ಸಚಿವ ಜಗದೀಶ ಶೆಟ್ಟರ್, ಮೋಹನ, ಎಂಎಲ್ಸಿ ಪ್ರದೀಪ ಹಾಗೂ ಒಬ್ಬ ಪುತ್ರಿ ವಿಜಯಾ ಇದ್ದಾರೆ. ಬಸವಣ್ಣೆವ್ವ ಮೂಲತಃ ಬಾಗಲಕೋಟ ಜಿಲ್ಲೆಬದಾಮಿ ತಾಲೂಕು ಕೆರೂರ ಪಟ್ಟಣದವರು.
ಮೃತರ ಅಂತಿಮ ಯಾತ್ರೆಯು ಶನಿವಾರ 11 ಗಂಟೆಗೆ ಪ್ರದೀಪ್ ಶೆಟ್ಟರ್ (ಲಕ್ಷ್ಮಿ ಲೇಔಟ್, ಶಬರಿನಗರ) ಅವರ ಮನೆಯಿಂದ ಪ್ರಾರಂಭವಾಗಿ ಮಂಟೂರ ರಸ್ತೆಯ ಕಲಬುರ್ಗಿ ಮಠದ ಹತ್ತಿರ ಇರುವ ರುದ್ರಭೂಮಿಯಲ್ಲಿಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶಾಸಕರಾದ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಮಾಜಿ ಕಾರ್ಪೊರೇಟರ್ಗಳು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿ ಮಾತೋಶ್ರೀಯವರ ಅಂತಿಮ ದರ್ಶನ ಪಡೆದರು.
ಕೇಶ್ವಾಪುರ ಶಬರಿ ನಗರದ ಲಕ್ಷ್ಮಿ ಲೇಔಟ್ದಲ್ಲಿವಾಸವಾಗಿದ್ದ ಅವರು ಮಧ್ಯಾಹ್ನ 3ಕ್ಕೆ ಕೊನೆಯುಸಿರೆಳೆದರು. ಅವರಿಗೆ ಪುತ್ರರಾದ ಸಚಿವ ಜಗದೀಶ ಶೆಟ್ಟರ್, ಮೋಹನ, ಎಂಎಲ್ಸಿ ಪ್ರದೀಪ ಹಾಗೂ ಒಬ್ಬ ಪುತ್ರಿ ವಿಜಯಾ ಇದ್ದಾರೆ. ಬಸವಣ್ಣೆವ್ವ ಮೂಲತಃ ಬಾಗಲಕೋಟ ಜಿಲ್ಲೆಬದಾಮಿ ತಾಲೂಕು ಕೆರೂರ ಪಟ್ಟಣದವರು.
ಮೃತರ ಅಂತಿಮ ಯಾತ್ರೆಯು ಶನಿವಾರ 11 ಗಂಟೆಗೆ ಪ್ರದೀಪ್ ಶೆಟ್ಟರ್ (ಲಕ್ಷ್ಮಿ ಲೇಔಟ್, ಶಬರಿನಗರ) ಅವರ ಮನೆಯಿಂದ ಪ್ರಾರಂಭವಾಗಿ ಮಂಟೂರ ರಸ್ತೆಯ ಕಲಬುರ್ಗಿ ಮಠದ ಹತ್ತಿರ ಇರುವ ರುದ್ರಭೂಮಿಯಲ್ಲಿಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶಾಸಕರಾದ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಮಾಜಿ ಕಾರ್ಪೊರೇಟರ್ಗಳು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿ ಮಾತೋಶ್ರೀಯವರ ಅಂತಿಮ ದರ್ಶನ ಪಡೆದರು.