ಆ್ಯಪ್ನಗರ

ಸಚಿವ ಶೆಟ್ಟರ್‌ಗೆ ನೀತಿ, ಸಿದ್ಧಾಂತ ವಿಲ್ಲ: ಕೌಲಗಿ

ಹುಬ್ಬಳ್ಳಿ : ಸಚಿವ ಜಗದೀಶ ಶೆಟ್ಟರ್‌ ಅವರು ಯಾವಾಗಲೂ ಆಧಾರ ರಹಿತ ಆರೋಪ ಮಾಡುವ ಚಾಳಿ ಮೈಗೂಡಿಸಿಕೊಂಡಿದ್ದಾರೆ. ಶೆಟ್ಟರ್‌ ಅವರಿಗೆ ಯಾವುದೇ ನೀತಿ ಮತ್ತು ಸಿದ್ಧಾಂತವಿಲ್ಲ. ಕೇವಲ ಅಧಿಕಾರ ಪಡೆಯುವುದೇ ಅವರ ಮುಖ್ಯ ಗುರಿ ಎಂದು ಜಿಲ್ಲಾ ಕಾಂಗ್ರೆಸ್‌ ವಕ್ತಾರ ವೇದವ್ಯಾಸ ಕೌಲಗಿ ಟೀಕಿಸಿದ್ದಾರೆ.

Vijaya Karnataka 28 Aug 2019, 5:00 am
ಹುಬ್ಬಳ್ಳಿ : ಸಚಿವ ಜಗದೀಶ ಶೆಟ್ಟರ್‌ ಅವರು ಯಾವಾಗಲೂ ಆಧಾರ ರಹಿತ ಆರೋಪ ಮಾಡುವ ಚಾಳಿ ಮೈಗೂಡಿಸಿಕೊಂಡಿದ್ದಾರೆ. ಶೆಟ್ಟರ್‌ ಅವರಿಗೆ ಯಾವುದೇ ನೀತಿ ಮತ್ತು ಸಿದ್ಧಾಂತವಿಲ್ಲ. ಕೇವಲ ಅಧಿಕಾರ ಪಡೆಯುವುದೇ ಅವರ ಮುಖ್ಯ ಗುರಿ ಎಂದು ಜಿಲ್ಲಾ ಕಾಂಗ್ರೆಸ್‌ ವಕ್ತಾರ ವೇದವ್ಯಾಸ ಕೌಲಗಿ ಟೀಕಿಸಿದ್ದಾರೆ.
Vijaya Karnataka Web minister shutter has no policy no doctrine koulagi
ಸಚಿವ ಶೆಟ್ಟರ್‌ಗೆ ನೀತಿ, ಸಿದ್ಧಾಂತ ವಿಲ್ಲ: ಕೌಲಗಿ


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅತೃಪ್ತ ಕಾಂಗ್ರೆಸ್‌ ಶಾಸಕರನ್ನು ಮುಂಬೈಗೆ ಕಳಿಸಿದ್ದು ಸಿದ್ಧರಾಮಯ್ಯ ಎಂದು ಸುಳ್ಳು ಆರೋಪ ಮಾಡುವ ಮೂಲಕ ರಾಜಕೀಯ ಅಪ್ರಬುದ್ಧತೆ ಪ್ರದರ್ಶಿಸಿದ್ದಾರೆ.

ಆಪರೇಶನ್‌ ಕಮಲ ಮಾಡಿ ಅತೃಪ್ತ ಶಾಸಕರನ್ನು ವಿಶೇಷ ವಿಮಾನದಲ್ಲಿ ಮುಂಬೈಯ ಪಂಚತಾರಾ ಹೊಟೇಲ್‌ನಲ್ಲಿ ವಾಸ್ತವ್ಯ ಮಾಡಿಸಿದ್ದು, ಸಿದ್ಧರಾಮಯ್ಯನವರೇ? ಪ್ರತಿಯೊಬ್ಬರಿಗೂ ವಿಶೇಷ ವಿಮಾನದೊಂದಿಗೆ ಬಿಜೆಪಿ ಶಾಸಕ ಆರ್‌.ಅಶೋಕ, ಮಾಜಿ ಸಚಿವ ಲಕ್ಷ ್ಮಣ ಸವದಿಯವರನ್ನು ಕಳುಹಿಸಿದವರು ಸಿದ್ಧರಾಮಯ್ಯನವರೇ? ಯಡಿಯೂರಪ್ಪನವರ ಆಪ್ತ-ಸಹಾಯಕ ಸಂತೋಷ ಯಾರ ಅಣತಿ ಮೇಲೆ ಅತೃಪ್ತ ಶಾಸಕರೊಂದಿಗೆ ಪ್ರಯಾಣ ಮಾಡಿದರು ? ಸಂತೋಷರನ್ನು ಕಳಿಸಿದವರು ಯಡಿಯೂರಪ್ಪನವರೋ? ಸಿದ್ಧರಾಮಯ್ಯನವರೋ? ಎಂದು ಸಚಿವ ಶೆಟ್ಟರ್‌ ಅವರನ್ನು ಕೌಲಗಿ ಪ್ರಶ್ನಿಸಿದ್ದಾರೆ.

ಸಚಿವ ಶೆಟ್ಟರ್‌ರು ದೇವೇಗೌಡರು ಮತ್ತು ಸಿದ್ಧರಾಮಯ್ಯನವರ ಮಧ್ಯೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ಶೆಟ್ಟರ ರಾಜಕೀಯವಾಗಿ ಇನ್ನೂ ಅಪ್ರಬುದ್ಧರು ಎಂದು ಜಿಲ್ಲಾ ಕಾಂಗ್ರೆಸ್‌ ವಕ್ತಾರ ಕೌಲಗಿ ಕುಟುಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ