ಆ್ಯಪ್ನಗರ

ಗರಗ ಮಠಕ್ಕೆ ಶಾಸಕ ದೇಸಾಯಿ ಭೇಟಿ

ಧಾರವಾಡ: ಜನ್ಮದಿನದ ಅಂಗವಾಗಿ ತಾಲೂಕಿನ ಗರಗ ಗುರು ಮಡಿವಾಳೇಶ್ವರ ಮಠಕ್ಕೆ ಶಾಸಕ ಅಮೃತ ದೇಶಾಯಿ ಶನಿವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಗುರು ಮಡಿವಾಳೇಶ್ವರ ಟ್ರಸ್ಟಿನ ಮಕ್ಕಳತೋಟ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರಾಥಮಿಕ ಶಾಲೆಯಲ್ಲಿಅಮೃತ ದೇಸಾಯಿ ಗೆಳೆಯರ ಬಳಗ ವತಿಯಿಂದ ಆಯೋಜಿಸಿದ್ದÜ ಕಾರ್ಯಕ್ರಮದಲ್ಲಿಮಕ್ಕಳಿಗೆ ನೋಟಬುಕ್‌ ಹಾಗೂ ಪೆನ್‌ ನೀಡಿದರು.

Vijaya Karnataka 17 Nov 2019, 5:00 am
ಧಾರವಾಡ: ಜನ್ಮದಿನದ ಅಂಗವಾಗಿ ತಾಲೂಕಿನ ಗರಗ ಗುರು ಮಡಿವಾಳೇಶ್ವರ ಮಠಕ್ಕೆ ಶಾಸಕ ಅಮೃತ ದೇಶಾಯಿ ಶನಿವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಗುರು ಮಡಿವಾಳೇಶ್ವರ ಟ್ರಸ್ಟಿನ ಮಕ್ಕಳತೋಟ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರಾಥಮಿಕ ಶಾಲೆಯಲ್ಲಿಅಮೃತ ದೇಸಾಯಿ ಗೆಳೆಯರ ಬಳಗ ವತಿಯಿಂದ ಆಯೋಜಿಸಿದ್ದÜ ಕಾರ್ಯಕ್ರಮದಲ್ಲಿಮಕ್ಕಳಿಗೆ ನೋಟಬುಕ್‌ ಹಾಗೂ ಪೆನ್‌ ನೀಡಿದರು.
Vijaya Karnataka Web mla desais visit to gaaraga math
ಗರಗ ಮಠಕ್ಕೆ ಶಾಸಕ ದೇಸಾಯಿ ಭೇಟಿ


ಬಳಿಕ ನರೇಂದ್ರ ಗ್ರಾಮಕ್ಕೆ ತೆರಳಿದ ಶಾಸಕರು, ನರೇಂದ್ರ ಹಾಗೂ ರಾಷ್ಟೊ್ರೕತ್ಥಾನ ರಕ್ತ ನಿಧಿ ಮತ್ತು ಎಂ ಎಂ ಜೋಶಿ ಕಣ್ಣಿನ ಆಸ್ಪತ್ರೆ ವತಿಯಿಂದ ಆಯೋಜಿಸಿದ ರಕ್ತದಾನ ಶಿಬಿರ ಹಾಗೂ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.

ತದನಂತರ ಅಮೃತ ದೇಸಾಯಿ ಗೆಳೆಯರ ಬಳಗ ಹೆಬ್ಬಳ್ಳಿ ಹಾಗೂ ಮಾಧವನ ಆಸ್ಪತ್ರೆ ನವನಗರ ಅವರಿಂದ ಆಯೋಜಿಸಿದ ರಕ್ತ ತಪಾಸಣಾ ಶಿಬಿರ ಹಾಗೂ ಮಧುಮೇಹ ರೋಗ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.

ಟೀಂ ಅಮೃತ ದೇಸಾಯಿ ವತಿಯಿಂದ ಅಗಸನಹಳ್ಳಿ, ದುಬ್ಬನಮರಡಿ ಹಾಗೂ ತಿಮ್ಮಾಪುರ ಗ್ರಾಮದ ಸರಕಾರಿ ಶಾಲೆಗಳಿಗೆ ಕಂಪ್ಯೂಟರ ನೀಡುವ ಮೂಲಕ ಜನ್ಮ ದಿನ ಆಚರಿಸಿಕೊಂಡರು. ಬಿಜೆಪಿ ಕಾರ್ಯಕರ್ತರು, ಅಮೃತಿ ದೇಸಾಯಿ ಅಭಿಮಾನಿ ಬಳಗದ ಯುವಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ