ಆ್ಯಪ್ನಗರ

ಭಯ ಇದ್ದದ್ದಕ್ಕೆ ಶಾಸಕರು ರೆಸಾರ್ಟ್‌ಗೆ: ದೇಶಪಾಂಡೆ

ಧಾರವಾಡ : ನಮ್ಮ ಶಾಸಕರು ಭಯ ಇದೆ ಎಂದು ದೂರು ನೀಡಿದ್ದರಿಂದ ಅವರನ್ನು ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.

Vijaya Karnataka 20 Jan 2019, 5:00 am
ಧಾರವಾಡ : ನಮ್ಮ ಶಾಸಕರು ಭಯ ಇದೆ ಎಂದು ದೂರು ನೀಡಿದ್ದರಿಂದ ಅವರನ್ನು ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.
Vijaya Karnataka Web mlas to resort to fear deshpande
ಭಯ ಇದ್ದದ್ದಕ್ಕೆ ಶಾಸಕರು ರೆಸಾರ್ಟ್‌ಗೆ: ದೇಶಪಾಂಡೆ


ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಮ್ಮ ಸರಕಾರದ ಆಡಳಿತ ಸರಿಯಾಗಿ ನಡೆಯುತ್ತಿದೆ. ಸ್ಥಿರವಾಗಿ ಇದೆ ಕೂಡ. ಆದರೆ ನಮ್ಮ ಶಾಸಕರು ಒತ್ತಡ ಇದೆ ಎಂದು ಅಳಲು ತೋಡಿಕೊಂಡಿದ್ದಕ್ಕೆ ಶುಕ್ರವಾರ ಅವರನ್ನು ರೆಸಾರ್ಟ್‌ಗೆ ಕರೆದೊಯ್ಯಲಾಯಿತು'' ಎಂದರು.

''ನಮ್ಮ ಶಾಸಕರು ಯಾರೂ ಪಕ್ಷ ಬಿಡುವುದಿಲ್ಲ. ಯಾವುದೇ ಸರಕಾರ ಇರಲಿ. ಅತೃಪ್ತರು ಇರುವುದು ಸಹಜ. ಹಾಗಂತ ನಮ್ಮವರಾರೂ ಪಕ್ಷ ಬಿಡುವುದಿಲ್ಲ. ಸಿಎಲ್‌ಪಿ ಮೀಟಿಂಗ್‌ಗೆ ಹಾಜರಾಗಲು ಆಗಲ್ಲ ಎಂದು ಶಾಸಕ ಜಾಧವ ಪತ್ರ ಬರೆದು ತಿಳಿಸಿದ್ದಾರೆ. ಇನ್ನು ರಮೇಶ ಜಾರಕಿಹೊಳಿ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಬಿಜೆಪಿಯವರ ಕ್ಷೇತ್ರದಲ್ಲಿ ಬರಗಾಲವಿದೆ. ಆ ಶಾಸಕರೂ ಜನರ ಸಂಪರ್ಕಕ್ಕೆ ಸಿಗಬೇಕು'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

''ರೆಸಾರ್ಟ್‌ ರಾಜಕಾರಣ ಹಾಗೂ ಸರಕಾರ ಅಸ್ಥಿರಗೊಳಿಸುವವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಸರಕಾರ ಅಭಿವೃದ್ಧಿ ಕಡೆಗೆ ಹೆಚ್ಚು ಗಮನಹರಿಸುತ್ತದೆ. ನಾನೂ ಕೂಡ ಬರ ಪರಿಸ್ಥಿತಿ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ. ಈಗಾಗಲೇ ನಮ್ಮ ಸರಕಾರ ಕೆಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ. ಆ ತಾಲೂಕುಗಳ ಜನತೆಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು'' ಎಂದು ದೇಶಪಾಂಡೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ