ಹುಬ್ಬಳ್ಳಿ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ಹಾಗೂ 35ಎ ರದ್ದತಿ, ಭಯೋತ್ಪಾದನ ವಿರೋಧಿ ಮಸೂದೆ(ತಿದ್ದುಪಡಿ)ಗೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಮತ್ತು ಎಡಪಕ್ಷಗಳು ಈಗ ಭಾರತದ ಆಂತರಿಕ ಭದ್ರತಾ ಕಾನೂನುಗಳ ವಿರೋಧಿ ಕೃತ್ಯಕ್ಕೆ ಮುಂದಾಗಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿಸೋಮವಾರ ನಡೆದ ಸಿಎಎ ಜನಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿಮಾತನಾಡಿದ ಅವರು, ಬಿಜೆಪಿ ಅಧಿಕಾರದ ಅವಧಿಯಲ್ಲಿಜಗತ್ತಿನಲ್ಲಿಭಾರತದ ಕೀರ್ತಿ ದಿನದಿನಕ್ಕೆ ಹೆಚ್ಚುತ್ತಿದೆ. ಇದನ್ನು ಸಹಿಸಲಾಗದೇ ಕಾಂಗ್ರೆಸ್ ಈ ರೀತಿಯ ಕೃತ್ಯಕ್ಕೆ ಮುಂದಾಗಿದೆ. ಬಿಜೆಪಿ ಜನಜಾಗೃತಿ ಮಹಾ ಸಮಾವೇಶದ ಅಂಥವರಿಗೆ ಸೂಕ್ತ ಸಂದೇಶ ನೀಡಲಿದೆ ಎಂದರು.
ವಿಶ್ವಕ್ಕೆ ಸಂದೇಶ ಸಾರುವ ಅವಕಾಶ
ಮಂಗಳೂರಿನಲ್ಲಿನಡೆದ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲುತೂರಾಟ, ಹಲ್ಲೆನಡೆಸುವ ಮೂಲಕ ಸರಕಾರದ ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನಕ್ಕೆ ವಿರೋಧಿಗಳು ಮುಂದಾಗಿದ್ದಾರೆ. ಆದರೆ, ಜನಜಾಗೃತಿ ಸಮಾವೇಶದ ಮೂಲಕ ಶಕ್ತಿ ಪ್ರದರ್ಶಿಸಿ ಪ್ರಧಾನಿ ಮೋದಿ ಜತೆಗೆ ನಾವಿದ್ದೇವೆ ಎಂದು ಸಾರಬೇಕಿದೆ. ಭಯೋತ್ಪಾದನೆಗೆ ಆಶ್ರಯ ನೀಡುವ ಪಾಕಿಸ್ತಾನವನ್ನು ಯಾವ ರೀತಿ ಜಾಗತಿಕವಾಗಿ ಏಕಾಂಗಿಯಾಗಿ ನಿಲ್ಲಿಸಲಾಗಿದೆಯೊ ಅದೇ ರೀತಿ ಈಗಲೂ ಭಾರತಕ್ಕೆ ಇಂತಹ ಕಾನೂನು ಅನುಷ್ಠಾನ ಕೈಗೊಂಡು ವಿಶ್ವಕ್ಕೆ ಸ್ಪಷ್ಟ ಸಂದೇಶ ಸಾರುವ ಅವಕಾಶ ಭಾರತಕ್ಕಿದೆ ಎಂದರು.
ಲಕ್ಷಾಂತರ ಜನ ಸೇರಿಸಿ
ಹಿಂದೆಂದೂ ನಡೆಯದ ರೀತಿಯಲ್ಲಿಸಮಾವೇಶ ಸಂಘಟಿಸಬೇಕಿದೆ. ಸಮಾವೇಶಕ್ಕೆ ಪ್ರತಿ ಮನೆಯಿಂದ ಕನಿಷ್ಠ ಒಬ್ಬರನ್ನಾದರೂ ಕರೆದುಕೊಂಡು ಬರುವ ಹೊಣೆ ಕಾರ್ಯಕರ್ತರದ್ದು. ಲಕ್ಷಾಂತರ ಜನರನ್ನು ಸಮಾವೇಶಕ್ಕೆ ಸೇರಿಸಿ ಸರಕಾರದ ಬೆಂಬಲಕ್ಕೆ ನಿಲ್ಲಬೇಕಿದೆ. ಮೈದಾನದಲ್ಲಿನಡೆವ ಸಮಾವೇಶದ ಬಗ್ಗೆ ಲ್ಯಾಮಿಂಗ್ಟನ್ ರಸ್ತೆ ಸೇರಿ ವಿವಿಧೆಡೆ ಸ್ಕ್ರೀನ್ಗಳನ್ನು ಅಳವಡಿಸುವ ಮೂಲಕ ಜನತೆಗೆ ಶಾ ಸಂದೇಶ ತಲುಪುವಂತೆ ಮಾಡಬೇಕು ಎಂದು ಕರೆ ನೀಡಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಹಾಗೂ ಬಿಜೆಪಿ ಮಹಾನಗರ ನೂತನ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ, ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರು, ಮಾ. ನಾಗರಾಜ, ನಾಗೇಶ ಕಲಬುರ್ಗಿ, ಮೋಹನ ಲಿಂಬಿಕಾಯಿ, ಸೀಮಾ ಮಸೂತಿ ಸೇರಿದಂತೆ ಇತರರು ಇದ್ದರು.
18ಕ್ಕೆ ಬೃಹತ್ ಸಮಾವೇಶ
ಇಲ್ಲಿಯ ನೆಹರು ಮೈದಾನದಲ್ಲಿಜ.18ರಂದು ಸಂಜೆ 4ಕ್ಕೆ ನಡೆಯುವ ಜನಜಾಗೃತಿ ಮಹಾಸಮಾವೇಶದಲ್ಲಿಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಲಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಜಗದೀಶ ಶೆಟ್ಟರ್ ಸೇರಿದಂತೆ ರಾಜ್ಯ ಬಿಜೆಪಿ ಪ್ರಮುಖರು ಭಾಗವಹಿಸಲಿದ್ದಾರೆ.
ನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿಸೋಮವಾರ ನಡೆದ ಸಿಎಎ ಜನಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿಮಾತನಾಡಿದ ಅವರು, ಬಿಜೆಪಿ ಅಧಿಕಾರದ ಅವಧಿಯಲ್ಲಿಜಗತ್ತಿನಲ್ಲಿಭಾರತದ ಕೀರ್ತಿ ದಿನದಿನಕ್ಕೆ ಹೆಚ್ಚುತ್ತಿದೆ. ಇದನ್ನು ಸಹಿಸಲಾಗದೇ ಕಾಂಗ್ರೆಸ್ ಈ ರೀತಿಯ ಕೃತ್ಯಕ್ಕೆ ಮುಂದಾಗಿದೆ. ಬಿಜೆಪಿ ಜನಜಾಗೃತಿ ಮಹಾ ಸಮಾವೇಶದ ಅಂಥವರಿಗೆ ಸೂಕ್ತ ಸಂದೇಶ ನೀಡಲಿದೆ ಎಂದರು.
ವಿಶ್ವಕ್ಕೆ ಸಂದೇಶ ಸಾರುವ ಅವಕಾಶ
ಮಂಗಳೂರಿನಲ್ಲಿನಡೆದ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲುತೂರಾಟ, ಹಲ್ಲೆನಡೆಸುವ ಮೂಲಕ ಸರಕಾರದ ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನಕ್ಕೆ ವಿರೋಧಿಗಳು ಮುಂದಾಗಿದ್ದಾರೆ. ಆದರೆ, ಜನಜಾಗೃತಿ ಸಮಾವೇಶದ ಮೂಲಕ ಶಕ್ತಿ ಪ್ರದರ್ಶಿಸಿ ಪ್ರಧಾನಿ ಮೋದಿ ಜತೆಗೆ ನಾವಿದ್ದೇವೆ ಎಂದು ಸಾರಬೇಕಿದೆ. ಭಯೋತ್ಪಾದನೆಗೆ ಆಶ್ರಯ ನೀಡುವ ಪಾಕಿಸ್ತಾನವನ್ನು ಯಾವ ರೀತಿ ಜಾಗತಿಕವಾಗಿ ಏಕಾಂಗಿಯಾಗಿ ನಿಲ್ಲಿಸಲಾಗಿದೆಯೊ ಅದೇ ರೀತಿ ಈಗಲೂ ಭಾರತಕ್ಕೆ ಇಂತಹ ಕಾನೂನು ಅನುಷ್ಠಾನ ಕೈಗೊಂಡು ವಿಶ್ವಕ್ಕೆ ಸ್ಪಷ್ಟ ಸಂದೇಶ ಸಾರುವ ಅವಕಾಶ ಭಾರತಕ್ಕಿದೆ ಎಂದರು.
ಲಕ್ಷಾಂತರ ಜನ ಸೇರಿಸಿ
ಹಿಂದೆಂದೂ ನಡೆಯದ ರೀತಿಯಲ್ಲಿಸಮಾವೇಶ ಸಂಘಟಿಸಬೇಕಿದೆ. ಸಮಾವೇಶಕ್ಕೆ ಪ್ರತಿ ಮನೆಯಿಂದ ಕನಿಷ್ಠ ಒಬ್ಬರನ್ನಾದರೂ ಕರೆದುಕೊಂಡು ಬರುವ ಹೊಣೆ ಕಾರ್ಯಕರ್ತರದ್ದು. ಲಕ್ಷಾಂತರ ಜನರನ್ನು ಸಮಾವೇಶಕ್ಕೆ ಸೇರಿಸಿ ಸರಕಾರದ ಬೆಂಬಲಕ್ಕೆ ನಿಲ್ಲಬೇಕಿದೆ. ಮೈದಾನದಲ್ಲಿನಡೆವ ಸಮಾವೇಶದ ಬಗ್ಗೆ ಲ್ಯಾಮಿಂಗ್ಟನ್ ರಸ್ತೆ ಸೇರಿ ವಿವಿಧೆಡೆ ಸ್ಕ್ರೀನ್ಗಳನ್ನು ಅಳವಡಿಸುವ ಮೂಲಕ ಜನತೆಗೆ ಶಾ ಸಂದೇಶ ತಲುಪುವಂತೆ ಮಾಡಬೇಕು ಎಂದು ಕರೆ ನೀಡಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಹಾಗೂ ಬಿಜೆಪಿ ಮಹಾನಗರ ನೂತನ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ, ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರು, ಮಾ. ನಾಗರಾಜ, ನಾಗೇಶ ಕಲಬುರ್ಗಿ, ಮೋಹನ ಲಿಂಬಿಕಾಯಿ, ಸೀಮಾ ಮಸೂತಿ ಸೇರಿದಂತೆ ಇತರರು ಇದ್ದರು.
18ಕ್ಕೆ ಬೃಹತ್ ಸಮಾವೇಶ
ಇಲ್ಲಿಯ ನೆಹರು ಮೈದಾನದಲ್ಲಿಜ.18ರಂದು ಸಂಜೆ 4ಕ್ಕೆ ನಡೆಯುವ ಜನಜಾಗೃತಿ ಮಹಾಸಮಾವೇಶದಲ್ಲಿಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಲಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಜಗದೀಶ ಶೆಟ್ಟರ್ ಸೇರಿದಂತೆ ರಾಜ್ಯ ಬಿಜೆಪಿ ಪ್ರಮುಖರು ಭಾಗವಹಿಸಲಿದ್ದಾರೆ.