ಆ್ಯಪ್ನಗರ

ಮಳೆಗಾಲ ಆರಂಭವಾಗಿದೆ, ಸಮಸ್ಯೆಗೆ ಸ್ಪಂದಿಸಿ

ಹುಬ್ಬಳ್ಳಿ :ಹು-ಧಾ ಮಹಾನಗರದಲ್ಲಿ ಕಸ ವಿಲೇವಾರಿ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಳೆಗಾಲ ಆರಂಭವಾಗಿದೆ. ಸಾರ್ವಜನಿಕರ ಸಮಸ್ಯೆಗೆ ಸರಿಯಾಗಿ ಸ್ಪಂದಿಸಿ, ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ಸುಧೀರ್‌ ಸರಾಫ್‌ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Vijaya Karnataka 24 May 2018, 5:00 am
ಹುಬ್ಬಳ್ಳಿ :ಹು-ಧಾ ಮಹಾನಗರದಲ್ಲಿ ಕಸ ವಿಲೇವಾರಿ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಳೆಗಾಲ ಆರಂಭವಾಗಿದೆ. ಸಾರ್ವಜನಿಕರ ಸಮಸ್ಯೆಗೆ ಸರಿಯಾಗಿ ಸ್ಪಂದಿಸಿ, ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ಸುಧೀರ್‌ ಸರಾಫ್‌ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
Vijaya Karnataka Web monsoon has begun respond to the problem
ಮಳೆಗಾಲ ಆರಂಭವಾಗಿದೆ, ಸಮಸ್ಯೆಗೆ ಸ್ಪಂದಿಸಿ


ಪಾಲಿಕೆ ಸಭಾಭವನದಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸ್ವಚ್ಛತೆಗೆ ಆದ್ಯತೆ ನೀಡಿ, ಅವಳಿನಗರದಲ್ಲಿ ಅಭಿವೃದ್ಧಿ ಕುಂಠಿತಗೊಳಿಸಬೇಡಿ ಎಂದು ಹೇಳಿದರೆ ಪಾಲಿಕೆ ಆಯುಕ್ತರು ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡಿದ್ದಾರೆ. ನೂತನ ಆಯುಕ್ತರು ಬರಲಿ ಎಂದು ಹರಕೆ ಉತ್ತರ ನೀಡುತ್ತಿರಿ. ನಿಂತಿ ಸಂಹಿತೆ ಮುಕ್ತಾಯವಾಗಿದೆ ಕೆಲಸ ಆರಂಭಿಸಿ ಎಂದು ಸೂಚಿಸಿದರು.

ಕಸ ಸಮಸ್ಯೆಗೆ ಕಡಿವಾಣ:

ನಗರದ ಎಲ್ಲೆಂದರಲ್ಲಿ ಕಸ ಬಿದ್ದಿದ್ದು, ಸರಿಯಾಗಿ ವಿಲೇವಾರಿ ಆಗುತ್ತಿಲ್ಲ ಎಂದು ದೂರುಗಳು ಕೇಳಿಬರುತ್ತಿವೆ. ಅಧಿಕಾರಿಗಳು ಕಾರ್ಮಿಕರಿಂದ ಸರಿಯಾಗಿ ಕೆಲಸ ಮಾಡಿಸಬೇಕು. ಮೊದಲ ಸ್ವಚ್ಛತೆಗೆ ಆದ್ಯತೆ ನೀಡಿ ಕಸ ಸಮಸ್ಯೆಗೆ ಕಡಿವಾಣ ಹಾಕಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಉಪಮೇಯರ್‌ ಮೇನಕಾ ಹುರಳಿ, ಪಾಲಿಕೆ ಆಯುಕ್ತ ಇಬ್ರಾಹಿಮ್‌ ಮೈಗೂರ, ಪಾಲಿಕೆ ಸದಸ್ಯರಾದ ಗಣೇಶ ಟಗರಗುಂಟಿ, ಶಿವು ಹಿರೇಮಠ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಅಧಿಕಾರಿಗಳ ತಂಡ ರಚನೆ

ಮಳೆಯಿಂದಾಗುವ ಅನಾಹುತದ ಮುಂಜಾಗ್ರತ ಕ್ರಮವಾಗಿ ಹುಬ್ಬಳ್ಳಿಯಲ್ಲಿ 2, ಧಾರವಾಡದಲ್ಲಿ 1 ಅಧಿಕಾರಿಗಳ ವಿಶೇಷ ತಂಡ ರಚನೆ ಮಾಡಲಾಯಿತು. ಒಂದೊಂದು ತಂಡ 10-12 ಕಾರ್ಮಿಕರನ್ನು ಹೊಂದಿದ್ದು, ಈ ತಂಡ ತುರ್ತು ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಮಳೆಯಿಂದ ಮರ ಬಿದ್ದರೆ, ವಿದ್ಯುತ್‌ ಕಂಬ ಬಿದ್ದರೆ, ರಸ್ತೆ ಕುಸಿದರೆ ಪಾಲಿಕೆ ಸಹಾಯವಾಣಿಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಬೇಕು. ತಕ್ಷಣ ಈ ತಂಡ ಸಾರ್ವಜನಿಕರ ನೆರವಿಗೆ ಬರಲಿದೆ ಎಂದು ಮೇಯರ್‌ ಸುಧೀರ್‌ ಸರಾಫ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ