ಆ್ಯಪ್ನಗರ

ಸದ್ಗುಣ ಬೆಳವಣಿಗೆಗೆ ನೈತಿಕ ಮೌಲ್ಯ ಅಗತ್ಯ

ಧಾರವಾಡ: ಸದ್ಗುಣಗಳ ಬೆಳವಣಿಗೆಗೆ ನೈತಿಕ ಮೌಲ್ಯಗಳು ಅಗತ್ಯವಾಗಿದ್ದು, ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿನಡೆಸುವ ಕೈದೀವಿಗೆಗಳಾಗಿವೆ ಎಂದು ಉಪನ್ಯಾಸಕ ವೀರಣ್ಣ ಒಡ್ಡೀನ ಹೇಳಿದರು.

Vijaya Karnataka 16 Sep 2019, 5:00 am
ಧಾರವಾಡ: ಸದ್ಗುಣಗಳ ಬೆಳವಣಿಗೆಗೆ ನೈತಿಕ ಮೌಲ್ಯಗಳು ಅಗತ್ಯವಾಗಿದ್ದು, ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿನಡೆಸುವ ಕೈದೀವಿಗೆಗಳಾಗಿವೆ ಎಂದು ಉಪನ್ಯಾಸಕ ವೀರಣ್ಣ ಒಡ್ಡೀನ ಹೇಳಿದರು.
Vijaya Karnataka Web moral value is essential for virtue development
ಸದ್ಗುಣ ಬೆಳವಣಿಗೆಗೆ ನೈತಿಕ ಮೌಲ್ಯ ಅಗತ್ಯ


ಇಲ್ಲಿನ ಸಂಪಿಗೆ ನಗರದ ಬಸವರಡ್ಡಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿಹಮ್ಮಿಕೊಂಡ ಪುನಶ್ಚೇತನ ಕಾರ್ಯಾಗಾರದಲ್ಲಿಶಿಕ್ಷಣದಲ್ಲಿನೈತಿಕ ಮೌಲ್ಯಗಳು ವಿಷಯ ಕುರಿತು ಉಪನ್ಯಾಸದಲ್ಲಿಮಾತನಾಡಿದರು.

ಕೇವಲ ಭೌತಿಕ ಪ್ರಗತಿಯೇ ಸರ್ವಸ್ವ ಅಲ್ಲ. ವಿದ್ಯಾರ್ಥಿಗಳಿಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂಸ್ಕಾರ ನೀಡಬೇಕು. ವಿದ್ಯಾರ್ಥಿಗಳು ಜೀವನದಲ್ಲಿಸಾಮರಸ್ಯದಿಂದ ಬದುಕಬೇಕಾದರೆ ಸದ್ಗುಣಗಳು ಅತ್ಯಗತ್ಯವಾಗಿವೆ. ಒಳಿತು ಕೆಡಕುಗಳನ್ನು ನಿರ್ಧರಿಸಲು, ಕೆಟ್ಟದ್ದನ್ನು ವಿರೋಧಿಸುವ ಮನೋಭಾವ ಬೆಳೆಸಿಕೊಳ್ಳಲು ನೈತಿಕ ಮೌಲ್ಯಗಳೇ ಆಧಾರ. ವಿದ್ಯಾರ್ಥಿಗಳು ಎಲ್ಲಾಧರ್ಮದ ಸರ್ವಕಾಲಿಕ ಸತ್ಯಗಳನ್ನು ಅರಿತಾಗ ವಿದ್ಯಾರ್ಥಿ ಜೀವನ ಸಾರ್ಥಕವಾಗಲಿದೆ ಎಂದರು.

ಬಸವರಡ್ಡಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶಂಕರ ಬಸವರಡ್ಡಿ ಮಾತನಾಡಿ, ನೈತಿಕ ಮೌಲ್ಯಗಳಿಲ್ಲದ ವಿದ್ಯಾರ್ಥಿ ಜೀವನ ಬರಡು ಹಾಗೂ ಅಪರಿಪೂರ್ಣ. ದ್ವೇಷ ಅಸೂಯೆಯಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ಪ್ರೀತಿಯೇ ಸಾಧನೆಗೆ ದಾರಿದೀಪ. ಜೀವನದಲ್ಲಿಸುಖ, ಶಾಂತಿ, ಸಮೃದ್ಧತೆಗೆ ನೈತಿಕ ಮಾರ್ಗ ಅನುಸರಿಸಿ ಸತ್ಯ ಶೋಧನೆ ನಿಮ್ಮ ಬದುಕಿನ ಮೂಲ ತಿರುಳಾಗಬೇಕು ಎಂದರು.

ಬಸವರಡ್ಡಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶಶಿಕಲಾ ಬಸವರಡ್ಡಿ, ಸಚ್ಚಿದಾನಂದ, ಅನಿತಾ, ಶ್ವೇತಾ, ಭಾವನಾ, ಜಯಸುಧಾ ಇತರರು ಇದ್ದರು. ಮಮತಾ ಬಾಸೂರ ಸ್ವಾಗತಿಸಿದರು. ಪ್ರಾ.ವೈ.ಐ.ಗಡೆಣ್ಣವರ್‌ ಪ್ರಾಸ್ತಾವಿಕ ಮಾತನಾಡಿದರು. ಶಿವಕ್ಕ ಲಕ್ಕುಂಡಿ ನಿರೂಪಿಸಿದರು. ರವಿರಾಜ ಹತ್ತಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ