ಆ್ಯಪ್ನಗರ

ಹೆಚ್ಚು ಭಾಷೆ ಬಲ್ಲವರಿಗೆ ಹೆಚ್ಚು ಅವಕಾಶ

ಹುಬ್ಬಳ್ಳಿ: ಕೇಶ್ವಾಪೂರದ ಸೇವಾ ಭಾರತಿ ಟ್ರಸ್ಟ್‌ನಲ್ಲಿವಿದ್ಯಾ ವಿಕಾಸ ಕೇಂದ್ರದ ವಾರ್ಷಿಕೋತ್ಸವ 2020 ಸಮಾರಂಭ ಮಂಗಳವಾರ ಅದ್ಧೂರಿಯಾಗಿ ನಡೆಯಿತು. ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಕವಿವಿ ಕುಲಪತಿ ಡಾ.ಟಿ.ಎಂ. ಭಾಸ್ಕರ್‌, ಮಕ್ಕಳು ದೇವರಿದ್ದಂತೆ. ಅವರಿಗೆ ಉತ್ತಮ ಸಂಸ್ಕಾರ ನೀಡುವುದು ಸಮಾಜದ

Vijaya Karnataka 19 Feb 2020, 5:00 am
ಹುಬ್ಬಳ್ಳಿ: ಕೇಶ್ವಾಪೂರದ ಸೇವಾ ಭಾರತಿ ಟ್ರಸ್ಟ್‌ನಲ್ಲಿವಿದ್ಯಾ ವಿಕಾಸ ಕೇಂದ್ರದ ವಾರ್ಷಿಕೋತ್ಸವ 2020 ಸಮಾರಂಭ ಮಂಗಳವಾರ ಅದ್ಧೂರಿಯಾಗಿ ನಡೆಯಿತು.
Vijaya Karnataka Web more opportunity for those who know more languages
ಹೆಚ್ಚು ಭಾಷೆ ಬಲ್ಲವರಿಗೆ ಹೆಚ್ಚು ಅವಕಾಶ

ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಕವಿವಿ ಕುಲಪತಿ ಡಾ.ಟಿ.ಎಂ. ಭಾಸ್ಕರ್‌, ಮಕ್ಕಳು ದೇವರಿದ್ದಂತೆ. ಅವರಿಗೆ ಉತ್ತಮ ಸಂಸ್ಕಾರ ನೀಡುವುದು ಸಮಾಜದ ಕರ್ತವ್ಯ. ಸೇವಾ ಸದನದಲ್ಲಿರುವ ಮಕ್ಕಳು ಉನ್ನತ ವ್ಯಾಸಾಂಗ ಮಾಡಿ ದೊಡ್ಡ ಹೆಸರು ಗಳಿಸಲಿ ಎಂದು ಹಾರೈಸಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿವಿದ್ಯಾರ್ಥಿಗಳು ಕನ್ನಡದ ಜತೆ ಇಂಗ್ಲಿಷ, ಹಿಂದಿ ಭಾಷೆ ಸೇರಿದಂತೆ ಇತರೆ ಭಾಷೆ ಕಲೆಯುವುದನ್ನು ರೂಢಿಸಿಕೊಳ್ಳಬೇಕು. ಹೆಚ್ಚು ಭಾಷೆ ಬಲ್ಲವರು ಬಹುಬೇಗ ಉದ್ಯೋಗ ಪಡೆಯುತ್ತಾರೆ ಎಂದರು.

ಚಂದ್ರಶೇಖರ ಗೋಕಾಕ ಮಾತನಾಡಿ, ಸೇವಾ ಭಾರತಿ ಟ್ರಸ್ಟ್‌ ಉತ್ತರ ಕರ್ನಾಟಕದ 11 ಜಿಲ್ಲೆಗಳಲ್ಲಿಸೇವೆ ಮಾಡುತ್ತಿದೆ. ಅದರೊಂದಿಗೆ ವಿದ್ಯಾ ವಿಕಾಸ ಕೇಂದ್ರ ಕೂಡಾ 130 ಕೇಂದ್ರಗಳಲ್ಲಿಉಚಿತ ಮನೆಪಾಠ ಹಾಗೂ ಸಂಸ್ಕಾರ ನೀಡುವ ಕೆಲಸ ಮಾಡುತ್ತಿದೆ ಎಂದರು.

ಸೇವಾ ಭಾರತಿ ಟ್ರಸ್ಟ್‌ನಲ್ಲಿಇತ್ತೀಚೆಗೆ ನಾಲ್ಕು ಜನ ಹೆಣ್ಣುಮಕ್ಕಳ ಮದುವೆ ಮಾಡಲಾಯಿತು. ಈಗಲೂ ನಮ್ಮ ಸಂಸ್ಥೆಯಲ್ಲಿಬೆಳೆದ ಹೆಣ್ಣು ಮಕ್ಕಳನ್ನು ಮದುವೆಯಾಗಲು ಹೆಚ್ಚು ಜನ ಮುಂದೆ ಬರುತ್ತಿದ್ದಾರೆ. ಇಲ್ಲಿಯ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಮತ್ತು ಉನ್ನತ ವ್ಯಾಸಾಂಗ ನೀಡಲಾಗುತ್ತಿದೆ ಎಂದರು.

ಸೇವಾ ಭಾರತಿ ಟ್ರಸ್ಟ್‌ ಅಧ್ಯಕ್ಷ ಡಾ.ರಘು ಅಕಮಂಚಿ ಮಾತನಾಡಿದರು. ಇದೇ ಸಂದರ್ಭದಲ್ಲಿವಿವಿಧ ವಿದ್ಯಾ ವಿಕಾಸ ಕೇಂದ್ರದಿಂದ ಆಗಮಿಸಿದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯದರ್ಶಿ ಕೆ.ಗೋವರ್ಧನ ರಾವ್‌, ಎ.ಕೆ. ಕುಲಕರ್ಣಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ