ಆ್ಯಪ್ನಗರ

ಕೇಂದ್ರದಿಂದ ಹೆಚ್ಚಿನ ಪರಿಹಾರ: ಜೋಶಿ ಭರವಸೆ

ನವಲಗುಂದ: ಆ. 14ರಂದು ಸಿಎಂ ಯಡಿಯೂರಪ್ಪನವರು ದೆಹಲಿಗೆ ಬರಲಿದ್ದು ಆ ಸಂದರ್ಭದಲ್ಲಿ ರಾಜ್ಯದ ಕೇಂದ್ರ ಸಚಿವರೂ ಸೇರಿ ಸಂಬಂಧಿಸಿದ ಮಂತ್ರಿಗಳನ್ನು ಭೇಟಿ ಮಾಡಿ ಹೆಚ್ಚಿನ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದೆಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋ‚ಶಿ ಹೇಳಿದರು.

Vijaya Karnataka 13 Aug 2019, 5:00 am
ನವಲಗುಂದ: ಆ. 14ರಂದು ಸಿಎಂ ಯಡಿಯೂರಪ್ಪನವರು ದೆಹಲಿಗೆ ಬರಲಿದ್ದು ಆ ಸಂದರ್ಭದಲ್ಲಿ ರಾಜ್ಯದ ಕೇಂದ್ರ ಸಚಿವರೂ ಸೇರಿ ಸಂಬಂಧಿಸಿದ ಮಂತ್ರಿಗಳನ್ನು ಭೇಟಿ ಮಾಡಿ ಹೆಚ್ಚಿನ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದೆಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.
Vijaya Karnataka Web DRW-12-NVL-1
ನವಲಗುಂದ ತಾಲೂಕಿನ ಯಮನೂರು ಗ್ರಾಮದಲ್ಲಿ ಬೆಣ್ಣಿಹಳ್ಳ ವೀಕ್ಷಿಸುತ್ತಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ,ಶಾಸಕ ಶಂಕರ ಪಾಟೀಲ್‌ ಮುನೇನಕೊಪ್ಪ ಮತ್ತಿತರರು.


ಭಾನುವಾರ ಸಂಜೆ ತಾಲೂಕಿನ ಯಮನೂರು ಗ್ರಾಮದಲ್ಲಿ ಶಾಸಕ ಶಂಕರ ಪಾಟೀಲ್‌ ಮುನೇನಕೊಪ್ಪ ಅವರೊಂದಿಗೆ ಬೆಣ್ಣಿಹಳ್ಳವನ್ನು ವೀಕ್ಷಿಸಿ ನಂತರ ಮಾತನಾಡಿದ ಅವರು 4-6 ರಾಜ್ಯಗಳಲ್ಲಿ ಇದೇ ಮಾದರಿ ಮಳೆ ಹಾನಿಯಾಗಿದ್ದು ಈ ಎಲ್ಲ ವಿಷಯವ®ನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರದ ಗಮನಕ್ಕೆ ತಂದು ಹೆಚ್ಚಿನ ಪರಿಹಾರ ವಿತರಣೆಗೆ ಕ್ರಮ ಜರುಗಿಸಲಾಗುವು ಎಂದು ಭರವಸೆ ನೀಡಿದರು.

ಬೆಳೆ ಸಮೀಕ್ಷೆ ನಡೆದ ನಂತರ ರೈತರಿಗೂ ಶೀಘ್ರದಲ್ಲಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಎನ್‌ಡಿಎಫ್‌ಆರ್‌ ಮಾರ್ಗದರ್ಶಿಯನ್ವಯ ಕಡಿಮೆ ಪರಿಹಾರ ದೊರಕು ಆತಂಕ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತಾಗಿಯೂ ಕೇಂದ್ರದೊಂದಿಗೆ ಚರ್ಚಿಸಲಾಗುವುದೆಂದರು. ನಂತರ ಕಳಸಾ,ಬಂಡೂರಿ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ರೈತರಿಂದ ಮನವಿ ಸ್ವೀಕರಿಸಿದ ಜೋಶಿ ಅವರು ಕಳಸಾ,ಬಂಡೂರಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಶಾಸಕ ಶಂಕರ ಪಾಟೀಲ್‌ ಮಾತನಾಡಿ ಅಧಿಕಾರಿಗಳ ಸಭೆ ನಡೆಸಿ ನೆರೆಪೀಡಿತ ಗ್ರಾಮಗಳಲ್ಲಿ ಮೂಲ ಸೌಕರ್ಯ ಒದಗಿಸಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.

ತಹಶೀಲ್ದಾರ ನವೀನ್‌ ಹುಲ್ಲೂರ,ಸಿದ್ದನಗೌಡ ಪಾಟೀಲ್‌,ಎಸ್‌.ಬಿ.ದಾನಪ್ಪಗೌಡರ,ಬಸಣ್ಣ ಬೆಳವಣಕಿ,ಸಿದ್ದಣ್ಣ ಕಿಟಗೇರಿ,ಬಸವರಾಜ ಉಳ್ಳಾಗಡ್ಡಿ,ಷಣ್ಮುಖ ಗುರಿಕಾರ,ವೀರಣ್ಣ ಚವಡಿ,ಎಮ್‌.ಆರ್‌.ಪಾಟೀಲ್‌, ಬಸಪ್ಪ ಬೀರಣ್ಣವರ,ಸುಭಾಸಚಂದ್ರಗೌಡ ಪಾಟೀಲ್‌, ಜಯಪ್ರಕಾಶ ಬದಾಮಿ,ಬಸವರಾಜ ಕಾತರಕಿ,ಶರಣಪ್ಪ ಹಕ್ಕರಕಿ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ