ಆ್ಯಪ್ನಗರ

ಪ್ರಿಯಕರನಿಗಾಗಿ ಕರುಳು ಕುಡಿಗಳ ಕೊಂದ ಪಾಪಿ ತಾಯಿ!

ಸದಾಶಿವ ನಗರದ ವಿರೇಶ ಗಂಗಾವತಿ ಜತೆಗೆ ಚೈತ್ರಾ ಅನೈತಿಕ ಸಂಬಂಧ ಹೊಂದಿದ್ದಳು. ಇಬ್ಬರು ಮೊಬೈಲ್‌ನಲ್ಲಿ ಬಹಳಷ್ಟು ಹೊತ್ತು ಮಾತನಾಡುತ್ತಿದ್ದರು. ಇದನ್ನು ನೋಡಿದ ಹಿರಿಯ ಮಗ ರೋಹಿತ್‌ ತಂದೆಗೆ ಹೇಳಿದ್ದನು.

Vijaya Karnataka 13 Dec 2018, 10:19 am
ಹುಬ್ಬಳ್ಳಿ : ಪ್ರಿಯಕರನಿಗಾಗಿ ಮಹಿಳೆಯೊಬ್ಬಳು ತನ್ನೆರಡು ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿದ ಅಮಾನವೀಯ ಘಟನೆ ಹಳೇ ಹುಬ್ಬಳ್ಳಿಯ ಅಯೋಧ್ಯಾನಗರದಲ್ಲಿ ಬುಧವಾರ ನಡೆದಿದೆ.
Vijaya Karnataka Web murder


ರೋಹಿತ್‌ (6) ಮತ್ತು ರೋಹಿಣಿ (4) ಎಂಬುವರೇ ಕೊಲೆಯಾದ ಮಕ್ಕಳು. ಚೈತ್ರಾ ಪರಶುರಾಮ ಹುಲಕೋಟಿ ಎಂಬುವಳೇ ಮಕ್ಕಳನ್ನು ಕೊಂದ ತಾಯಿ. ಪತಿ ಪರಶುರಾಮ ಕೆಲಸಕ್ಕೆ ಹೋದ ಸಮಯದಲ್ಲಿ ವೇಲ್‌ನಿಂದ ಮಕ್ಕಳಿಬ್ಬರ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಾಳೆ.

ಸದಾಶಿವ ನಗರದ ವಿರೇಶ ಗಂಗಾವತಿ ಜತೆಗೆ ಚೈತ್ರಾ ಅನೈತಿಕ ಸಂಬಂಧ ಹೊಂದಿದ್ದಳು. ಇಬ್ಬರು ಮೊಬೈಲ್‌ನಲ್ಲಿ ಬಹಳಷ್ಟು ಹೊತ್ತು ಮಾತನಾಡುತ್ತಿದ್ದರು. ಇದನ್ನು ನೋಡಿದ ಹಿರಿಯ ಮಗ ರೋಹಿತ್‌ ತಂದೆಗೆ ಹೇಳಿದ್ದನು. ಪತ್ನಿಯ ಅನೈತಿಕ ಸಂಬಂಧದ ವಿಷಯ ಬಹಿರಂಗವಾದ ನಂತರ ಪತಿ ಪರಶುರಾಮ ಆಕೆಯ ಜತೆ ಜಗಳವಾಡಿದ್ದನು.

ಜಗಳದ ವಿಷಯ ವಿರೇಶನಿಗೆ ತಿಳಿಸಿದಾಗ ಆತ ''ನಿನ್ನಿಬ್ಬರು ಮಕ್ಕಳನ್ನು ಕೊಂದು ನನ್ನ ಜತೆ ಬಂದರೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ'' ಎಂದು ವಾಗ್ದಾನ ಮಾಡಿದ್ದನು. ಅವನ ಜೊತೆ ಓಡಿಹೋಗುವ ಉದ್ದೇಶದಿಂದ ಬುಧವಾರ ಬೆಳಗ್ಗೆ ಪತಿ ಕೆಲಸಕ್ಕೆ ಹೋದ ಸಂದರ್ಭ ತನ್ನಿಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದಾಳೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆರೋಪಿ ಚೈತ್ರಾ ಹಾಗೂ ಆಕೆಯ ಪ್ರಿಯಕರ ವಿರೇಶನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್‌ ಆಯುಕ್ತ ಎಂ.ಎನ್‌.ನಾಗರಾಜ, ಡಿಸಿಪಿಗಳಾದ ರವೀಂದ್ರ ಗಡಾದಿ, ಬಿ.ಎಸ್‌.ನೇಮಗೌಡ, ಸಿಪಿಐ ಮಾರುತಿ ಗುಳ್ಳಾರಿ ಮತ್ತಿತರ ಪೊಲೀಸ್‌ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ