ಆ್ಯಪ್ನಗರ

ಮೋಟಾರು ಸೈಕಲ್‌ ರಾರ‍ಯಲಿ, ವಾಕಥಾನ್‌

ಧಾರವಾಡ: ಜಿಲ್ಲಾರಸ್ತೆ ಸುರಕ್ಷತಾ ಸಮಿತಿ, ಜಿಲ್ಲಾಡಳಿತ, ಸಾರಿಗೆ, ಪೊಲೀಸ್‌ ಇಲಾಖೆ ಹಾಗೂ ಸಮಿತಿಯ ಎಲ್ಲಪಾಲುದಾರರ ಇಲಾಖೆಗಳ ಸಹಯೋಗದೊಂದಿಗೆ ಜ. 13 ರಿಂದ 19 ರವರೆಗೆ 31 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಡೆಯುತ್ತಿದೆ. ಈ ವೇಳೆ ವಿವಿಧ ಇಲಾಖೆಗಳು ಹಲಾವಾರು ರೀತಿಯ ಜಾಗೃತಿ

Vijaya Karnataka 12 Jan 2020, 5:00 am
ಧಾರವಾಡ: ಜಿಲ್ಲಾರಸ್ತೆ ಸುರಕ್ಷತಾ ಸಮಿತಿ, ಜಿಲ್ಲಾಡಳಿತ, ಸಾರಿಗೆ, ಪೊಲೀಸ್‌ ಇಲಾಖೆ ಹಾಗೂ ಸಮಿತಿಯ ಎಲ್ಲಪಾಲುದಾರರ ಇಲಾಖೆಗಳ ಸಹಯೋಗದೊಂದಿಗೆ ಜ. 13 ರಿಂದ 19 ರವರೆಗೆ 31 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಡೆಯುತ್ತಿದೆ. ಈ ವೇಳೆ ವಿವಿಧ ಇಲಾಖೆಗಳು ಹಲಾವಾರು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
Vijaya Karnataka Web motorcycle rally walkathon
ಮೋಟಾರು ಸೈಕಲ್‌ ರಾರ‍ಯಲಿ, ವಾಕಥಾನ್‌


ಸಾರಿಗೆ ಇಲಾಖೆಯು ಸಪ್ತಾಹದ ಉದ್ಘಾಟನಾ ಸಮಾರಂಭ, ಬ್ಯಾನರ್‌, ಪೋಸ್ಟರ್‌, ಸ್ಟಿಕ್ಕರ್‌, ಕರಪತ್ರ ಮುದ್ರಣ ಮತ್ತು ಪ್ರದರ್ಶನ, ಪ್ರವರ್ತಕ ಕಾರ್ಯ, ವಿವಿಧ ರೀತಿಯ ವಾಹನಗಳ ಚಾಲಕರಿಗೆ ಪುನರ್‌ ಮನನ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪೊಲೀಸ್‌ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಮೋಟಾರು ಸೈಕಲ್‌ ರಾರ‍ಯಲಿ, ವಾಕಥಾನ್‌ ಹಾಗೂ ರಸ್ತೆ ನಿಯಮ ಉಲ್ಲಂಘಿಘಿಸುವವರಿಗೆ ಗುಲಾಬಿ ಹೂ ನೀಡಿ, ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಿದ್ದಾರೆ.

ಪ್ರಬಂಧ ಸ್ಪರ್ಧೆ, ಉಪನ್ಯಾಸ
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲೆಯ ಎಲ್ಲಶಾಲಾ ಕಾಲೇಜುಗಳಲ್ಲಿರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ರಸ್ತೆ ಸುರಕ್ಷತೆ ತಜ್ಞರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಿ ಚಿತ್ರಕಲೆ, ಪ್ರಬಂಧ, ಚರ್ಚಾಸ್ಪರ್ಧೆ ಏರ್ಪಡಿಸುವದರೊಂದಿಗೆ ವಿದ್ಯಾರ್ಥಿಗಳಲ್ಲಿಹಾಗೂ ಸಾರ್ವಜನಿಕರಲ್ಲಿಜಾಗೃತಿ ಮೂಡಿಸಲಾಗುತ್ತದೆ.

ರಾಷ್ಟಿ್ರೕಯ ಹೆದ್ದಾರಿ ಪ್ರಾಧಿಕಾರ, ಕಾರ್ಮಿಕ ಇಲಾಖೆ ಮತ್ತು ಪ್ರಾಕ್ಟರಿ ಮತ್ತು ಬಾಯ್ಲರ್‌ ಇಲಾಖೆ ಸಹಯೋಗದಲ್ಲಿಗಬ್ಬೂರು, ನರೇಂದ್ರ ಟೋಲ್‌ ಪ್ಲಾಜಾಗಳಲ್ಲಿಹಾಗೂ ಪುಮುಖ ಕೈಗಾರಿಕೆ ಪ್ರದೇಶಗಳಲ್ಲಿಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣೆ ನಡೆಸಲಾಗುತ್ತಿದೆ. ವಾಣಿಜ್ಯ ವಾಹನದ ಚಾಲಕರುಗಳಿಗೆ ಪ್ರಥಮ ಚಿಕಿತ್ಸೆಯ ಮೂಲಕ ಕಿಟ್‌ ವಿತರಣೆ ಮಾಡುವ ಕಾರ್ಯಕ್ರಮ ಸಂಘಟಿಸಲಿದೆ.

ವಾರ್ತಾ ಇಲಾಖೆಯು ಪ್ರಮುಖ ವೃತ್ತಗಳಲ್ಲಿರಸ್ತೆ ಸುರಕ್ಷತಾ ಬಗ್ಗೆ ಬೀದಿ ನಾಟಕ ಪ್ರದರ್ಶನ, ಎಲ್ಲಸಿನಿಮಾ ಮತ್ತು ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿಚಿತ್ರದ ಆರಂಭಕ್ಕೂ ಮುನ್ನವೇ ರಸ್ತೆ ಸುರಕ್ಷತಾ ಬಗ್ಗೆ ವಿಡಿಯೋ ಪ್ರದರ್ಶನ, ಎಫ್‌.ಎಂ ಮತ್ತು ಆಕಾಶವಾಣಿ ಕೇಂದ್ರಗಳ ಮೂಲಕ ರಸ್ತೆ ಸುರಕ್ಷತೆಯ ಘೋಷವಾಕ್ಯ ಬಿತ್ತರಿಸುವ ಕಾರ್ಯವನ್ನು ಕೈಗೊಳ್ಳಲಿದೆ.

ರಸ್ತೆ ಸಾರಿಗೆ ಸಂಸ್ಥೆ ಮತ್ತು ಬಿಆರ್‌ಟಿಎಸ್‌ ಸಂಸ್ಥೆಯಿಂದ ಚಾಲಕ ಮತ್ತು ನಿರ್ವಾಹಕರಿಗೆ ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಎಂ.ದೀಪಾ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ