ಧಾರವಾಡ: ಧಾರವಾಡದಲ್ಲಿ ಕುಸಿದು ಬಿದ್ದ ನಿರ್ಮಾಣ ಹಂತದ ಬಹುಮಹಡಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದವರ ರಕ್ಷಣಾ ಕಾರ್ಯಾಚರಣೆ ಎರಡನೆ ದಿನವಾದ ಇಂದೂ ಮುಂದುವರಿದಿದೆ. ಘಾಜಿಯಾಬಾದ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ (NDRF) 78 ಸಿಬ್ಬಂದಿಯ ಮತ್ತೊಂದು ರಕ್ಷಣಾ ತಂಡ ಧಾರವಾಡ ತಲುಪಿದೆ. ಘಟನಾ ಸ್ಥಳದಲ್ಲಿ ಕಾರ್ಯಾಚರಣೆಗೆ ಈ ತಂಡವೂ ಕೈಜೋಡಿಸಿದೆ. ಎನ್ಡಿಆರ್ಎಫ್ 35 ಸಿಬ್ಬಂದಿ ತಂಡ ಮಂಗಳವಾರ ರಾತ್ರಿಯೇ ನಗರಕ್ಕೆ ಬಂದಿತ್ತು. ರಾತ್ರಿ ಪೂರ್ತಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇಬ್ಬರು ಮೃತಪಟ್ಟಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದು, ಈವರೆಗೆ 53 ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಾಯದ ಸ್ಥಿತಿಯಲ್ಲೂ ಕಿರಣ ಕಣವಿ ಎಂಬ ಯುವಕ ಕುಸಿದ ಕಟ್ಟಡದ ಅವಶೇಷದಡಿ ನುಸುಳಿ ಹೋಗಿ ಅಲ್ಲಿ ಸಿಲುಕಿದವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಳಗಡೆ ಅಲ್ತಾಫ್ ಹಾಗೂ ಮಹಿಳೆಯೊಬ್ಬರು ಇದ್ದಾರೆ. ಅವರಿಗೆ ಧೈರ್ಯ ತುಂಬಿದ್ದೇನೆ. ಮುಂದೆ ಹೋಗಲು ದಾರಿ ಕಾಣದೆ ವಾಪಸ್ ಬಂದಿದ್ದೇನೆ. ಅಲ್ಲಿದ್ದ ಬೇರೊಬ್ಬರನ್ನು ಕರೆದು ತಂದಿದ್ದೇನೆ ಎಂದು ಕಣವಿ ಬುಧವಾರ ವಿಕ ಕ್ಕೆ ತಿಳಿಸಿದ್ದಾರೆ.
ದೂರು ದಾಖಲು:
ಕಳಪೆ ಕಾಮಗಾರಿ ಹಾಗೂ ನಿಯಮ ಉಲ್ಲಂಘನೆಯಿಂದಾಗಿ ಈ ಅವಘಡ ಸಂಭವಿಸಿದೆ. ಇದಕ್ಕೆ ಕಟ್ಟಡ ಪಾಲುದಾರ ಮಾಲೀಕರಾದ ಗಂಗಣ್ಣ ಶಿಂತ್ರಿ, ರವಿ ಸಬರದ, ಬಸವರಾಜ ನಿಗದಿ, ಮಹಾಬಳೆಶ್ವರ ಕುರಬಗುಡಿ, ರಾಜು ಘಾಟೀನ ಹಾಗೂ ವಿನ್ಯಾಸಕಾರ ವಿವೇಕ ಪವಾರ ಹೊಣೆಗಾರರು ಎಂದು ಪಾಲಿಕೆ ದೂರಿದೆ. ಅಲ್ಲದೇ ಇವರ ವಿರುದ್ಧ ಉಪನಗರ ಠಾಣೆಯಲ್ಲಿ ಪಾಲಿಕೆ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್ ಉಪನಗರ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ಸಿಕ್ಕಿ ಹಾಕಿಕೊಂಡಿರುವ ಕಾಲೇಜು ವಿದ್ಯಾರ್ಥಿನಿಯರು:
ಅವಶೇಷಗಳಡಿ 15 ಜನ ಕಾಲೇಜು ವಿದ್ಯಾರ್ಥಿನಿಯರು ಸಿಲುಕಿಕೊಂಡಿದ್ದಾರೆ. ಆದರೆ ಅವರ ರಕ್ಷಣೆಗೆ ತಾಂತ್ರಿಕ ಅಡಚಣೆಗಳು ಎದುರಾಗಿವೆ. ಅವಶೇಷಗಳಡಿ ಎನ್ ಡಿ ಆರ್ ಎಫ್ ಸಿಬ್ಬಂದಿ ತೆರಳಿ ಕಾರ್ಯಾಚರಣೆ ನಡೆಸಲು ಮುಂದಾದಾಗ ಕಟ್ಟಡ ಕುಸಿಯುತ್ತಿದ್ದರಿಂದ ವಿದ್ಯಾರ್ಥಿನಿರು ಇರುವ ಕಂಪ್ಯೂಟರ್ ಕೇಂದ್ರದಲ್ಲಿನವರ ರಕ್ಷಣೆ ಕಾರ್ಯವನ್ನು ಅಧಿಕಾರಿಗಳು ಸ್ಥಗಿತಗೊಳಿಸಿದರು. ಬೆಳಗ್ಗೆ 8 ಗಂಟೆ ನಂತರ ಇಲ್ಲಿ ಕಾರ್ಯಾಚರಣೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗಿನ 5 ಗಂಟೆಯ ವರೆಗೂ ಮಾಜಿ ಸಚಿವ ವಿನಯ ಕುಲಕರ್ಣಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಂದೆ ಕ್ಷೇಮವಾಗಿ ಬರುತ್ತಾನೆ ಎನ್ನುವ ಆತಂಕದಲ್ಲಿ ಮಗ. ಮಗನ ನೀರಿಕ್ಷೆಯಲ್ಲಿ ತಾಯಿ. ಏನು ತಿಳಿಯದ ಮುಗ್ಧ ಕಂದ ಅಪ್ಪ ಎಲ್ಲಿ ಇದ್ದಾನೆ ಅಮ್ಮಾ ಎನ್ನುವ ಮಾತು. ಇನ್ನು ಗೆಳೆತಿಯರು ಒಳಗೆ ಸಿಲುಕ್ಕಿದ್ದಾರೆ ಎಂದು ತಿಳಿದ ಕೆಲವು ವಿದ್ಯಾರ್ಥಿಗಳು ರಾತ್ರಿಯಾದರು ಅವರು ಕ್ಷೇಮವಾಗಿ ಬರಲಿ ಎಂದು ನೋಡಲಿಕ್ಕೆ ಬಂದು ಕುಳಿತಿದ್ದರು. ಮತ್ತೊಂದೆಡೆ ಕಟ್ಟಡ ಕೆಳಗೆ ಸಿಲುಕಿದವರು ಕ್ಷೇಮವಾಗಿ ಹೊರ ಬರುತ್ತಾರೆ ಇಲ್ಲವೋ ಎನ್ನುವ ಚಿಂತೆಯಲ್ಲಿ ಕುಟುಂಬದವರು ರಾತ್ರಿ ಪೂರ್ತಿ ಕುಸಿದ ಕಟ್ಟಡವನ್ನು ಬಿಟ್ಟು ಕದಲದಿರುವುದು ಮನ ಕಲಕುವಂತಿತ್ತು.
ಹುಬ್ಬಳ್ಳಿ ಕಿಮ್ಸ್ಗೆ ಚಿಕಿತ್ಸೆಗಾಗಿ ಒಟ್ಟು 7 ಜನ, 6 ಜನರನ್ನು ಎಸ್ ಡಿ ಎಂ ಹಾಗೂ 46 ಜನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಗಿರಿಧರ ಕುಕನೂರ ಮಾಹಿತಿ ನೀಡಿದ್ದಾರೆ.
11 ಗಂಟೆಗಳ ಕಾಲ ಕಟ್ಟಡ ಅವಶೇಷದಡಿ ಸಿಲುಕಿದ್ದ ಶ್ವಾನವನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಯಿತು. ಕಾರ್ಯಾಚರಣೆಗೆ ತರಬೇತಿ ಹೊಂದಿದ ಶ್ಚಾನ, ಕಟ್ಟಡದ ಮ್ಯಾಪ್ ಬಳಸಲಾಗುತ್ತಿದೆ. ಬೆಳಗ್ಗೆ 6.15ಕ್ಕೆ ಬಿಎಸ್ಎಫ್ ನಿಂದ ಮತ್ತೆ ಭದ್ರತೆ ಮಾಡಲಾಗಿದೆ. ಬೆಳಗ್ಗೆಯಿಂದಲೇ ಘಟನೆ ಸ್ಥಳಕ್ಕೆ ಜನಸಾಗರ ಹರಿದು ಬರುತ್ತಿದೆ.
ಮೂರು ವರ್ಷದ ಹಿಂದೆಯೂ ನಡೆದಿತ್ತು ಘೋರ ಘಟನೆ
ಧಾರವಾಡ ದುರಂತ: 70 ಜನರು ಅವಶೇಷದಡಿ ಸಿಲುಕಿರುವ ಶಂಕೆ
'ಪಾಪ ಕಟ್ಟಡದಡಿ ಸಿಕ್ಕವರು ಬದುಕಿ ಬರಲಿ'
ಹೊಣೆಗಾರರು ಯಾರು..?
ತಮ್ಮನಿಗಾಗಿ ಕಣ್ಣೀರಿಟ್ಟ ಅಣ್ಣ....
ಅಪಾಯದ ಸ್ಥಿತಿಯಲ್ಲೂ ಕಿರಣ ಕಣವಿ ಎಂಬ ಯುವಕ ಕುಸಿದ ಕಟ್ಟಡದ ಅವಶೇಷದಡಿ ನುಸುಳಿ ಹೋಗಿ ಅಲ್ಲಿ ಸಿಲುಕಿದವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಳಗಡೆ ಅಲ್ತಾಫ್ ಹಾಗೂ ಮಹಿಳೆಯೊಬ್ಬರು ಇದ್ದಾರೆ. ಅವರಿಗೆ ಧೈರ್ಯ ತುಂಬಿದ್ದೇನೆ. ಮುಂದೆ ಹೋಗಲು ದಾರಿ ಕಾಣದೆ ವಾಪಸ್ ಬಂದಿದ್ದೇನೆ. ಅಲ್ಲಿದ್ದ ಬೇರೊಬ್ಬರನ್ನು ಕರೆದು ತಂದಿದ್ದೇನೆ ಎಂದು ಕಣವಿ ಬುಧವಾರ ವಿಕ ಕ್ಕೆ ತಿಳಿಸಿದ್ದಾರೆ.
ದೂರು ದಾಖಲು:
ಕಳಪೆ ಕಾಮಗಾರಿ ಹಾಗೂ ನಿಯಮ ಉಲ್ಲಂಘನೆಯಿಂದಾಗಿ ಈ ಅವಘಡ ಸಂಭವಿಸಿದೆ. ಇದಕ್ಕೆ ಕಟ್ಟಡ ಪಾಲುದಾರ ಮಾಲೀಕರಾದ ಗಂಗಣ್ಣ ಶಿಂತ್ರಿ, ರವಿ ಸಬರದ, ಬಸವರಾಜ ನಿಗದಿ, ಮಹಾಬಳೆಶ್ವರ ಕುರಬಗುಡಿ, ರಾಜು ಘಾಟೀನ ಹಾಗೂ ವಿನ್ಯಾಸಕಾರ ವಿವೇಕ ಪವಾರ ಹೊಣೆಗಾರರು ಎಂದು ಪಾಲಿಕೆ ದೂರಿದೆ. ಅಲ್ಲದೇ ಇವರ ವಿರುದ್ಧ ಉಪನಗರ ಠಾಣೆಯಲ್ಲಿ ಪಾಲಿಕೆ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್ ಉಪನಗರ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ಸಿಕ್ಕಿ ಹಾಕಿಕೊಂಡಿರುವ ಕಾಲೇಜು ವಿದ್ಯಾರ್ಥಿನಿಯರು:
ಅವಶೇಷಗಳಡಿ 15 ಜನ ಕಾಲೇಜು ವಿದ್ಯಾರ್ಥಿನಿಯರು ಸಿಲುಕಿಕೊಂಡಿದ್ದಾರೆ. ಆದರೆ ಅವರ ರಕ್ಷಣೆಗೆ ತಾಂತ್ರಿಕ ಅಡಚಣೆಗಳು ಎದುರಾಗಿವೆ. ಅವಶೇಷಗಳಡಿ ಎನ್ ಡಿ ಆರ್ ಎಫ್ ಸಿಬ್ಬಂದಿ ತೆರಳಿ ಕಾರ್ಯಾಚರಣೆ ನಡೆಸಲು ಮುಂದಾದಾಗ ಕಟ್ಟಡ ಕುಸಿಯುತ್ತಿದ್ದರಿಂದ ವಿದ್ಯಾರ್ಥಿನಿರು ಇರುವ ಕಂಪ್ಯೂಟರ್ ಕೇಂದ್ರದಲ್ಲಿನವರ ರಕ್ಷಣೆ ಕಾರ್ಯವನ್ನು ಅಧಿಕಾರಿಗಳು ಸ್ಥಗಿತಗೊಳಿಸಿದರು. ಬೆಳಗ್ಗೆ 8 ಗಂಟೆ ನಂತರ ಇಲ್ಲಿ ಕಾರ್ಯಾಚರಣೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗಿನ 5 ಗಂಟೆಯ ವರೆಗೂ ಮಾಜಿ ಸಚಿವ ವಿನಯ ಕುಲಕರ್ಣಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಂದೆ ಕ್ಷೇಮವಾಗಿ ಬರುತ್ತಾನೆ ಎನ್ನುವ ಆತಂಕದಲ್ಲಿ ಮಗ. ಮಗನ ನೀರಿಕ್ಷೆಯಲ್ಲಿ ತಾಯಿ. ಏನು ತಿಳಿಯದ ಮುಗ್ಧ ಕಂದ ಅಪ್ಪ ಎಲ್ಲಿ ಇದ್ದಾನೆ ಅಮ್ಮಾ ಎನ್ನುವ ಮಾತು. ಇನ್ನು ಗೆಳೆತಿಯರು ಒಳಗೆ ಸಿಲುಕ್ಕಿದ್ದಾರೆ ಎಂದು ತಿಳಿದ ಕೆಲವು ವಿದ್ಯಾರ್ಥಿಗಳು ರಾತ್ರಿಯಾದರು ಅವರು ಕ್ಷೇಮವಾಗಿ ಬರಲಿ ಎಂದು ನೋಡಲಿಕ್ಕೆ ಬಂದು ಕುಳಿತಿದ್ದರು. ಮತ್ತೊಂದೆಡೆ ಕಟ್ಟಡ ಕೆಳಗೆ ಸಿಲುಕಿದವರು ಕ್ಷೇಮವಾಗಿ ಹೊರ ಬರುತ್ತಾರೆ ಇಲ್ಲವೋ ಎನ್ನುವ ಚಿಂತೆಯಲ್ಲಿ ಕುಟುಂಬದವರು ರಾತ್ರಿ ಪೂರ್ತಿ ಕುಸಿದ ಕಟ್ಟಡವನ್ನು ಬಿಟ್ಟು ಕದಲದಿರುವುದು ಮನ ಕಲಕುವಂತಿತ್ತು.
ಹುಬ್ಬಳ್ಳಿ ಕಿಮ್ಸ್ಗೆ ಚಿಕಿತ್ಸೆಗಾಗಿ ಒಟ್ಟು 7 ಜನ, 6 ಜನರನ್ನು ಎಸ್ ಡಿ ಎಂ ಹಾಗೂ 46 ಜನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಗಿರಿಧರ ಕುಕನೂರ ಮಾಹಿತಿ ನೀಡಿದ್ದಾರೆ.
11 ಗಂಟೆಗಳ ಕಾಲ ಕಟ್ಟಡ ಅವಶೇಷದಡಿ ಸಿಲುಕಿದ್ದ ಶ್ವಾನವನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಯಿತು. ಕಾರ್ಯಾಚರಣೆಗೆ ತರಬೇತಿ ಹೊಂದಿದ ಶ್ಚಾನ, ಕಟ್ಟಡದ ಮ್ಯಾಪ್ ಬಳಸಲಾಗುತ್ತಿದೆ. ಬೆಳಗ್ಗೆ 6.15ಕ್ಕೆ ಬಿಎಸ್ಎಫ್ ನಿಂದ ಮತ್ತೆ ಭದ್ರತೆ ಮಾಡಲಾಗಿದೆ. ಬೆಳಗ್ಗೆಯಿಂದಲೇ ಘಟನೆ ಸ್ಥಳಕ್ಕೆ ಜನಸಾಗರ ಹರಿದು ಬರುತ್ತಿದೆ.
ಮೂರು ವರ್ಷದ ಹಿಂದೆಯೂ ನಡೆದಿತ್ತು ಘೋರ ಘಟನೆ
ಧಾರವಾಡ ದುರಂತ: 70 ಜನರು ಅವಶೇಷದಡಿ ಸಿಲುಕಿರುವ ಶಂಕೆ
'ಪಾಪ ಕಟ್ಟಡದಡಿ ಸಿಕ್ಕವರು ಬದುಕಿ ಬರಲಿ'
ಹೊಣೆಗಾರರು ಯಾರು..?
ತಮ್ಮನಿಗಾಗಿ ಕಣ್ಣೀರಿಟ್ಟ ಅಣ್ಣ....