ಆ್ಯಪ್ನಗರ

ಪಕ್ಷ ನಿಷ್ಠರಿಗೆ ಪುರಸಭೆ ಟಿಕೆಟ್‌: ವಿನೋದ ಅಸೂಟಿ

ನವಲಗುಂದ : ಬರಲಿರುವ ಪುರಸಭೆ ಚುನಾವಣೆಯಲ್ಲಿ ಪಕ್ಷ ನಿಷ್ಠರು ಹಾಗೂ ಸಾಮಾಜಿಕ ಕಳಕಳಿ ಹೊಂದಿದ ಅಭ್ಯರ್ಥಿಗಳಿಗೆ ಪಕ್ಷ ದ ಟಿಕೆಟ್‌ ನೀಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ವಿನೋದ್‌ ಅಸೂಟಿ ಹೇಳಿದರು.

Vijaya Karnataka 8 Jan 2019, 5:00 am
ನವಲಗುಂದ : ಬರಲಿರುವ ಪುರಸಭೆ ಚುನಾವಣೆಯಲ್ಲಿ ಪಕ್ಷ ನಿಷ್ಠರು ಹಾಗೂ ಸಾಮಾಜಿಕ ಕಳಕಳಿ ಹೊಂದಿದ ಅಭ್ಯರ್ಥಿಗಳಿಗೆ ಪಕ್ಷ ದ ಟಿಕೆಟ್‌ ನೀಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ವಿನೋದ್‌ ಅಸೂಟಿ ಹೇಳಿದರು.
Vijaya Karnataka Web DRW-7-NVL-1
ನವಲಗುಂದ ಕಾಂಗ್ರೆಸ್‌ ಭವನದಲ್ಲಿ ಜರುಗಿದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ವಿನೋದ್‌ ಅಸೂಟಿ ಮಾತನಾಡಿದರು.


ಭಾನುವಾರ ಸ್ಥಳೀಯ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತಾಗಿ ಜರುಗಿದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಹಿಂದಿನ ಚುನಾವಣೆಯಲ್ಲಿ ಮುಖಂಡರ ಒತ್ತಡದಿಂದಾಗಿ ಪಕ್ಷ ದ ಟಿಕೆಟ್‌ ವಿತರಿಸಿದ್ದರಿಂದ ಕೆಲ ಚುನಾಯಿತ ಸದಸ್ಯರು ಪಕ್ಷ ದ ಸಿದ್ಧಾಂತಗಳನ್ನು ಮರೆತು ಪ್ರತಿಪಕ್ಷ ಗಳೊಂದಿಗೆ ಕೈಜೋಡಿಸಿ ಪಕ್ಷ ಕ್ಕೆ ಮುಜುಗುರ ಉಂಟುಮಾಡಿದ ಪ್ರಸಂಗಗಳು ನಡೆದಿವೆ. ಆದರೆ ಈ ಬಾರಿ ಈ ಎಲ್ಲ ಲೋಪಗಳನ್ನು ಸರಿಪಡಿಸುವ ಉದ್ದೇಶದಿಂದ ಪಕ್ಷ ದ ಸಿದ್ಧಾಂತ,ಸಾಮಾಜಿಕ ಕಾಳಜಿಗೆ ಮಣೆ ಹಾಕಲು ಪಕ್ಷ ದ ವರಿಷ್ಠರು ನಿರ್ಧರಿಸಿದ್ದು, ಬರಲಿರುವ ಚುನಾವಣೆಯಲ್ಲಿ ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಗಳಲ್ಲಿ ಆಕಾಂಕ್ಷಿಗಳಾಗಿದ್ದುದರಿಂದ ಪಕ್ಷ ದ ವರಿಷ್ಠರ ಸಮಕ್ಷ ಮ ಟಿಕೇಟ್‌ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದೂ ಅಸೂಟಿ ಹೇಳಿದರು.

ಹಿರಿಯ ಮುಖಂಡ ವಿದ್ಯಾಧರ್‌ ಪಾಟೀಲ್‌ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್‌ ಪಕ್ಷ ವೇ ಪುರಸಭೆಯಲ್ಲಿ ಆಡಳಿತ ನಡೆಸುತ್ತಿದ್ದು, ಬರುವ ದಿನಗಳಲ್ಲಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರ ಮೂಲಕ ಮತ್ತೊಮ್ಮೆ ಪುರಸಭೆ ಕೈವಶವಾಗುವಂತೆ ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮ ವಹಿಸಬೇಕೆಂದು ಸಲಹೆ ನೀಡಿದರು.

ನವಲಗುಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ ಅಧ್ಯಕ್ಷ ತೆ ವಹಿಸಿದ್ದರು. ಮುಖಂಡರಾದ ಉಸ್ಮಾನ ಬಬರ್ಚಿ,ಶಿವಾನಂದ ಪಾಚಂಗಿ, ವಿಜಯಗೌಡ ಪಾಟೀಲ್‌,ನರಸಿಂಹ ಇನಾಮತಿ ಮಾತನಾಡಿದರು. ಪುರಸಭೆ ಸದಸ್ಯರಾದ ಮಂಜುನಾಥ್‌ ಜಾಧವ್‌, ನಾಗರಾಜ ಭಜಂತ್ರಿ,ರಾಘವೇಂದ್ರ ತೇರದಾಳ,ನೀಲವ್ವ ಮುಪ್ಪಯ್ಯನವರ,ಶೋಭಾ ಗುಡಾರದ,ಹಟೇಲ್‌ಭಾಷಾ ರಾಮದುರ್ಗ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ