ಆ್ಯಪ್ನಗರ

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ಹುಬ್ಬಳ್ಳಿ: ವ್ಯಕ್ತಿಯೊಬ್ಬರ ಮೇಲಿದ್ದ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿಇಲ್ಲಿಯ 1ನೇ ಅಪರ ಮತ್ತು ಜಿಲ್ಲಾಸತ್ರ ನ್ಯಾಯಾಲಯ ಸೋಮವಾರ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 75 ಸಾವಿರ ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ.

Vijaya Karnataka 26 Nov 2019, 5:00 am
ಹುಬ್ಬಳ್ಳಿ: ವ್ಯಕ್ತಿಯೊಬ್ಬರ ಮೇಲಿದ್ದ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿಇಲ್ಲಿಯ 1ನೇ ಅಪರ ಮತ್ತು ಜಿಲ್ಲಾಸತ್ರ ನ್ಯಾಯಾಲಯ ಸೋಮವಾರ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 75 ಸಾವಿರ ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ.
Vijaya Karnataka Web murder accused sentenced to life imprisonment
ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ


ಇಲ್ಲಿಯ ಅಧ್ಯಾಪಕನಗರದ ಸಂತೋಷ ದಿನಕರ ಆಚಾರಿ ಶಿಕ್ಷೆಗೆ ಗುರಿಯಾದ ಆರೋಪಿ. 1ನೇ ಅಪರ ಮತ್ತು ಜಿಲ್ಲಾಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಬಿರಾದಾರ್‌ ದೇವೇಂದ್ರಪ್ಪ ಎನ್‌ ವಾದ-ಪ್ರತಿವಾದ ಆಲಿಸಿ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದಾರೆ. ಸರಕಾರಿ ಅಭಿಯೋಜಕರಾದ ಸರೋಜಾ ಜಿ. ಹೊಸಮನಿ ವಾದ ಮಂಡನೆ ಮಾಡಿದ್ದರು.

ಏನಿದು ಪ್ರಕರಣ?
ಇಲ್ಲಿಯ ಭವಾನಿನಗರದ ಪ್ರಭು ಕಾಂಪ್ಲೆಕ್ಸ್‌ನಲ್ಲಿರುವ ಲಕ್ಷ್ಮೇ ಜುವೇಲರಿ ಅಂಗಡಿಯ ಮಾಲೀಕ ರಾಮದಾಸ ಭಗವಂತ ಕುಡಾಳಕರ ಎಂಬುವರ ಕೊಲೆ ನಡೆದಿತ್ತು. ಕೊಲೆಯಾದ ರಾಮದಾಸ ಆರೋಪಿ ಸಂತೋಷಗೆ ಸಾಲದ ರೂಪದಲ್ಲಿಹಣ ನೀಡಿದ್ದರು. ಈ ಹಣ ವಾಪಸ್‌ ಕೇಳಿದ್ದಕ್ಕಾಗಿ ಕೊಯ್ತಾದಿಂದ ಹೊಡೆದು 2015 ಮಾರ್ಚ್ 7ರಂದು ಕೊಲೆ ಮಾಡಿದ್ದನು. ಈ ಸಂಬಂಧ ಅಶೋಕನಗರ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್‌.ವೈ. ಶಿರಕೋಳ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ