ಆ್ಯಪ್ನಗರ

ಕೊಲೆ ಪ್ರಕರಣ: ನ್ಯಾಯಾಲಯ ಕಾಯ್ದಿರಿಸಿದ ತೀರ್ಪು

ಹುಬ್ಬಳ್ಳಿ : ಮೂರು ವರ್ಷದ ಹಿಂದೆ ತಾಲೂಕಿನ ಅಂಚಟಗೇರಿ ಗ್ರಾಮದ ಹೊರವಲಯದ ಬಳಿ ನಡೆದಿದ್ದ ಕೊಲೆ ಪ್ರಕರಣದಲ್ಲಿಇಬ್ಬರು ಆರೋಪಿಗಳ ಕೃತ್ಯ ಸಾಬೀತಾಗಿದ್ದು, 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ.

Vijaya Karnataka 15 Jan 2020, 5:57 pm
ಹುಬ್ಬಳ್ಳಿ : ಮೂರು ವರ್ಷದ ಹಿಂದೆ ತಾಲೂಕಿನ ಅಂಚಟಗೇರಿ ಗ್ರಾಮದ ಹೊರವಲಯದ ಬಳಿ ನಡೆದಿದ್ದ ಕೊಲೆ ಪ್ರಕರಣದಲ್ಲಿಇಬ್ಬರು ಆರೋಪಿಗಳ ಕೃತ್ಯ ಸಾಬೀತಾಗಿದ್ದು, 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ.
Vijaya Karnataka Web murder case court reserved verdict
ಕೊಲೆ ಪ್ರಕರಣ: ನ್ಯಾಯಾಲಯ ಕಾಯ್ದಿರಿಸಿದ ತೀರ್ಪು


2016ರ ಜುಲೈ 1ರಂದು ಕುಂದಗೋಳ ತಾಲೂಕಿನ ಕುಂಕೂರ ಗ್ರಾಮದ ಮೌಲಾಸಾಬ ಚಂದರಕಿ ಬಳಿಯಿದ್ದ ಹಣ ದೋಚಿ ಕೊಲೆ ಮಾಡಲಾಗಿತ್ತು. ಅರ್ಜುನ ಪರಶುರಾಮ ಬಗಡಿ ಹಾಗೂ ಅಪ್ರಾಪ್ತ ಪ್ರಕರಣದಲ್ಲಿಆರೋಪಿಗಳಾಗಿದ್ದರು. ಈ ಬಗ್ಗೆ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು.

ಅಂದು ಮೌಲಾಸಾಬ ತನ್ನ ಗರ್ಭಿಣಿ ಪತ್ನಿಯನ್ನು ಕಿಮ್ಸ… ಗೆ ಕರೆತಂದಿದ್ದ. ಬಳಿಕ ಹಣದ ಅವಶ್ಯಕತೆ ಉಂಟಾದ ಕಾರಣಕ್ಕೆ ಬಂಗಾರ ಅಡವಿಟ್ಟು ಹಣ ತೆಗೆದುಕೊಂಡು ಬರಲು ನಗರಕ್ಕೆ ಬಂದಿದ್ದ. ಚಿನ್ನ ಅಡವಿಟ್ಟು 17ಸಾವಿರ ತೆಗೆದುಕೊಂಡು ಮದ್ಯ ಸೇವಿಸಿದ್ದ ಮೌಲಾಸಾಬಗೆ ಹಳೆ ಬಸ್‌ ನಿಲ್ದಾಣದ ಬಳಿ ಅನ್ಯರೊಂದಿಗೆ ವಿನಾಕಾರಣ ವಾಗ್ವಾದ ಉಂಟಾಗಿತ್ತು. ಈ ವೇಳೆ ಈತನ ಬಳಿ ಹಣ ಇದ್ದುದನ್ನು ಅರ್ಜುನ ಹಾಗೂ ಅಪ್ರಾಪ್ತನು ಗಮನಿಸಿದ್ದರು. ಗಲಾಟೆಯಲ್ಲಿಮೌಲಾಸಾಬ ಪರ ವಹಿಸಿದ ಇಬ್ಬರೂ ಆತನನ್ನು ಪುಸಲಾಯಿಸಿ ಅಂಚಟಗೇರಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಣ ನೀಡುವಂತೆ ಬೆದರಿಸುತ್ತಾರೆ. ಇದಕ್ಕೆ ಒಪ್ಪದಿದ್ದಾಗ ಮೌಲಾಸಾಬ ಕುತ್ತಿಗೆ, ಭುಜದ ಭಾಗಕ್ಕೆ ಚಾಕು ಇರಿದು ಮಾಡಿ ಪರಾರಿ ಆಗಿದ್ದರು.

ಗಂಭೀರ ಗಾಯಗೊಂಡ ಮೌಲಾಸಾಬನನ್ನು ಸ್ಥಳೀಯರು ಗಮನಿಸಿ ಕಿಮ್ಸ… ಗೆ ಕರೆತಂದು ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದ. 2016ರ ಜು. 28 ರಂದು ಹಳೇ ಹುಬ್ಬಳ್ಳಿ ಪೊಲೀಸರು ಗಸ್ತಿನಲ್ಲಿದ್ದ ವೇಳೆ ಕಾರವಾರ ರಸ್ತೆ ಬಳಿ ಅನುಮಾನಾಸ್ಪದವಾಗಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕೊಲೆಯಲ್ಲಿಭಾಗಿಯಾಗಿದ್ದನ್ನು ಅರ್ಜುನ ಹಾಗೂ ಅಪ್ರಾಪ್ತ ಒಪ್ಪಿಕೊಂಡಿದ್ದಾರೆ. ಬಳಿಕ ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಮುಂದುವರಿಸಿದ್ದರು. ಇನ್ಸಪೆಕ್ಟರ್‌ ಶ್ರೀಪಾದ ಜಲ್ದೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರಕಾರಿ ಅಭಿಯೋಜಕ ಡಿ.ಎ. ಬಾಂದೇಕರ ವಾದ ಮಂಡಿಸಿದ್ದರು. ನ್ಯಾಯಾಧೀಶ ಕೆ. ಎನ್‌. ಗಂಗಾಧರ ವಿಚಾರಣೆ ನಡೆಸಿ ಮಂಗಳವಾರ ಅಪರಾಧಿಗಳು ಎಂದು ಪ್ರಕಟಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ