ಆ್ಯಪ್ನಗರ

ಯುವಕನ ಕೊಲೆ ಪ್ರಕರಣ: ಏಳು ಜನರ ಬಂಧನ

ಹುಬ್ಬಳ್ಳಿ: ದೇಶಪಾಂಡೆ ನಗರದ ಕೃಷ್ಣ ಮಂದಿರ ಬಳಿ ಮಂಗಳವಾರ ರಾತ್ರಿ ನಡೆದ ಯುವಕ ಲೋಕೇಶ ಕಡೇಮನಿ ಕೊಲೆಗೆ ಸಂಬಂಧಿಸಿದಂತೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.

Vijaya Karnataka 30 Jul 2020, 5:00 am
ಹುಬ್ಬಳ್ಳಿ: ದೇಶಪಾಂಡೆ ನಗರದ ಕೃಷ್ಣ ಮಂದಿರ ಬಳಿ ಮಂಗಳವಾರ ರಾತ್ರಿ ನಡೆದ ಯುವಕ ಲೋಕೇಶ ಕಡೇಮನಿ ಕೊಲೆಗೆ ಸಂಬಂಧಿಸಿದಂತೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web crime


ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ದಾಬಡೆ, ಸಿದ್ದೇಶ ಹಡಗಿ, ಶೋಯಬ ಖಾಜಾಪುರ, ಮಂಜುನಾಥ ಕೃಷ್ಣಾರೆಡ್ಡಿ, ಕಿರಣ ಹಾಗೂ ಸೈಯ್ಯದ್‌ ಖಾಜಾಪುರ ಎಂಬುವವರನ್ನು ಬಂಧಿಸಲಾಗಿದೆ. ಇವರೆಲ್ಲರೂ ಘಟನೆ ನಡೆದ ನಂತರ ಕಲಘಟಗಿ ಸಮೀಪದ ಫಾಮ್‌ರ್‍ ಹೌಸ್‌ನಲ್ಲಿತಲೆ ಮರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಿಮ್ಸ್‌ ಗುತ್ತಿಗೆದಾರನಾಗಿದ್ದ ಭವಾನಿ ನಗರದ ಯುವಕ ಲೋಕೇಶ ಕಡೇಮನಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ಕಾರಿನಲ್ಲಿಹಿಂಬಾಲಿಸಿದ ಯುವಕರ ಗುಂಪು ಮಚ್ಚು, ಚಾಕುವಿನಿಂದ ಇರಿದು ಕೊಲೆ ಮಾಡಿತ್ತು. ಲೋಕೇಶನ ಸಹೋದರ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಇದೇ ವಿಷಯಕ್ಕಾಗಿ ಯುವಕರ ಗುಂಪು ಹಾಗೂ ಲೋಕೇಶ ನಡುವೆ ಉಂಟಾದ ವೈಮನಸ್ಸಿನಿಂದ ಈ ಕೊಲೆ ನಡೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಉಪನಗರ ಪೊಲೀಸ್‌ ಠಾಣೆ ಇನ್ಸಪೆಕ್ಟರ್‌ ಹೊಳೆಣ್ಣವರ ನೇತೃತ್ವದ ತಂಡ ಘಟನೆ ನಡೆದ ಕೆಲವೆ ಗಂಟೆಗಳಲ್ಲಿಆರೋಪಿಗಳನ್ನು ಬಂಧಿಸುವಲ್ಲಿಯಶಸ್ವಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ