ಆ್ಯಪ್ನಗರ

ಮುರಘಾಮಠ ಸಚಿವ ಜೋಶಿಗೆ ಸನ್ಮಾನ

ಧಾರವಾಡ : ಶ್ರಾವಣ ಮಾಸದ ಕಾರ್ಯಕ್ರಮಗಳನ್ನು ಆಲಿಸುವುದರಿಂದ ಮನಸಿಗೆ ನೆಮ್ಮದಿ ಸಿಗುತ್ತದೆ. ಶ್ರಾವಣದ ಅಂಗವಾಗಿ ಮುರಘಾಮಠ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Vijaya Karnataka 24 Aug 2019, 5:12 pm
ಧಾರವಾಡ : ಶ್ರಾವಣ ಮಾಸದ ಕಾರ್ಯಕ್ರಮಗಳನ್ನು ಆಲಿಸುವುದರಿಂದ ಮನಸಿಗೆ ನೆಮ್ಮದಿ ಸಿಗುತ್ತದೆ. ಶ್ರಾವಣದ ಅಂಗವಾಗಿ ಮುರಘಾಮಠ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಗರದ ಮುರಘಾಮಠದಲ್ಲಿ ಶುಕ್ರವಾರ ಸಂಜೆ ಶ್ರಾವಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
Vijaya Karnataka Web DRW-23RANGA-15
ಧಾರವಾಡ ಮುರಘಾಮಠದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಮುರಘಾಮಠದ ಮಲ್ಲಿಕಾರ್ಜುನ ಶ್ರೀಗಳು ಸನ್ಮಾನಿಸಿದರು.


ಶ್ರಾವಣ ಮಾಸವನ್ನು ಹಿಂದುಗಳು ಶ್ರದ್ಧಾ ಭಕ್ತಿಯಿಂದ ದೊಡ್ಡ ಹಬ್ಬವಾಗಿ ಆಚರಣೆ ಮಾಡುತ್ತದೆ. ಶ್ರೀಮಠದ ಕಾರ್ಯಕ್ರಮಗಳನ್ನು ಭಕ್ತರು ಉಪಯೋಗ ಪಡೆಯಬೇಕು ಎಂದ ಅವರು, ಶ್ರೀಮಠಕ್ಕೆ ಸಹಕಾರ ನೀಡಲು ಸಿದ್ಧ ಎಂದು ತಿಳಿಸಿದರು. ಇದೇ ವೇಳೆ ಮುರಘಾಮಠ ಮಲ್ಲಿಕಾರ್ಜುನ ಶ್ರೀಗಳು ಸಚಿವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಕಂಪ್ಲಿ ಶ್ರೀಗಳು, ಇಂಗಳೇಶ್ವರದ ಚೆನ್ನಬಸವ ಶ್ರೀಗಳು, ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕಿ ಸೀಮಾ ಮಸೂತಿ, ಈರೇಶ ಅಂಚಟಗೇರಿ, ಡಿ.ಬಿ.ಲಕಮನಹಳ್ಳಿ, ನಾಗರಾಜ ಪಟ್ಟಣಶೆಟ್ಟಿ, ರಾಜು ಮರಳಪ್ಪನವರ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ