ಆ್ಯಪ್ನಗರ

ಸಂಗೀತ ದೊಡ್ಡ ಕಲೆ ಶಾಸ್ತ್ರೀಯ ವಾದ್ಯ

ಧಾರವಾಡ: ಶಾಸ್ತ್ರೀಯ ವಾದ್ಯ ಸಂಗೀತ ಬಹಳ ದೊಡ್ಡ ಕಲೆಯಾಗಿದ್ದು, ತಬಲಾ ಕಲಾವಿದರಾದ ಪಂ.ರಾಮದಾಸ್‌ ಪಲ್‌ಸುಳೆ ತಬಲಾ ಕೌಶಲದ ಕಾರ್ಯಾಗಾರದಲ್ಲಿಭಾಗಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಡಾ.ಕೆ.ವಿ.ಸತ್ಯಮೂರ್ತಿ ಹೇಳಿದರು.

Vijaya Karnataka 6 Oct 2019, 5:00 am
ಧಾರವಾಡ: ಶಾಸ್ತ್ರೀಯ ವಾದ್ಯ ಸಂಗೀತ ಬಹಳ ದೊಡ್ಡ ಕಲೆಯಾಗಿದ್ದು, ತಬಲಾ ಕಲಾವಿದರಾದ ಪಂ.ರಾಮದಾಸ್‌ ಪಲ್‌ಸುಳೆ ತಬಲಾ ಕೌಶಲದ ಕಾರ್ಯಾಗಾರದಲ್ಲಿಭಾಗಿಯಾಗಿರುವುದು ಹೆಮ್ಮೆಯ ಸಂಗತಿ ಎಂದು ಡಾ.ಕೆ.ವಿ.ಸತ್ಯಮೂರ್ತಿ ಹೇಳಿದರು.
Vijaya Karnataka Web music is a great art classical instrument
ಸಂಗೀತ ದೊಡ್ಡ ಕಲೆ ಶಾಸ್ತ್ರೀಯ ವಾದ್ಯ


ನಗರದ ಬೇಂದ್ರೆ ಭವನದಲ್ಲಿಶ್ರೀ ಕುಮಾರೇಶ್ವರ ಕಲ್ಚರಲ್‌ ಸೊಸೈಟಿ ವತಿಯಿಂದ ಹಮ್ಮಿಕೊಂಡ ತಬಲಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಂಗೀತ ಕಾರ್ಯಕ್ರಮ ಆಲಿಸದೇ ಇದ್ದರೆ ಏನೋ ಕಳೆದುಕೊಂಡ ಅನುಭವವಾಗುತ್ತಿದೆ. ಸಂಗೀತ ಮನಸ್ಸಿಗೆ ನೆಮ್ಮದಿ ನೀಡಲಿದೆ ಎಂದರು.

ಅತಿಥಿ ಪುಣೆಯ ಪ್ರಭಾಕರ ಪಾಂಡುರಂಗ ಬೇಂದ್ರೆ ಮಾತನಾಡಿ, ಪಂ.ರಾಮದಾಸ ಪಲ್‌ಸುಳೆ ತಬಲಾ ಕಲೆಯಲ್ಲಿಪ್ರಖ್ಯಾತಿ ಪಡೆದು ದೇಶ ಕಂಡ ಅಪ್ರತಿಮ ತಬಲಾ ವಾದಕರಾಗಿದ್ದಾರೆ ಎಂದರು.

ಪಂ.ರಾಮದಾಸ ಪಲ್‌ಸುಳೆ ಮಾತನಾಡಿ, ತಬಲಾ ವಾದನ ಕಲೆಯ ಶೃಂಗಾರತೆ, ಬೋಲ್‌, ತುಕಡಾ, ಮುಕಡಾ, ಕಾಯದಾ ಮುಂತಾದ ವಿಶೇಷತೆ ಬಗ್ಗೆ ಮಾತನಾಡಿದರು.

ಉಸ್ತಾದ ನಿಸ್ಸಾರ್‌ಅಹಮ್ಮದ, ಪಂ.ಉದಯರಾಜ್‌ ಕರ್ಪೂರ, ಗಜಾನನ ಹೆಗಡೆ, ಶ್ರೀಹರಿ ದಿಗ್ಗಾವಿ, ಬಾನ್ಸುರಿ ವಾದಕ ಕೃಷ್ಣ ಜೋಶಿ, ಪಂ.ವಾದಿರಾಜ ನಿಂಬರಗಿ, ವೇಣಿಮಾಧವ ಚಳಗೇರಿ ಇದ್ದರು. ವೇಣುಗೋಪಾಲ ಜೋಶಿ ಸ್ವಾಗತಿಸಿದರು. ಪ್ರಕಾಶ ಬಾಳಿಕಾಯಿ ನಿರೂಪಿಸಿದರು. ಪಂಚಮ ಉಪಾಧ್ಯೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ