ಆ್ಯಪ್ನಗರ

ನಾಳೆಯಿಂದ ನಾನಾ ಧಾರ್ಮಿಕ ಕಾರ್ಯಕ್ರಮ

ಧಾರವಾಡ : ನಗರದ ನುಗ್ಗಿಕೇರಿ ಶ್ರೀ ಸೀತಾರಾಮ ದೇವಸ್ಥಾನ ಟ್ರಸ್ಟ್‌ ವತಿಯಿಂದ ಗುರುಪೌರ್ಣಿಮೆ ಅಂಗವಾಗಿ ಸೀತಾರಾಮ ದೇವಸ್ಥಾನದಲ್ಲಿ ಜು. 14ರಿಂದ 16ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

Vijaya Karnataka 13 Jul 2019, 5:00 am
ಧಾರವಾಡ : ನಗರದ ನುಗ್ಗಿಕೇರಿ ಶ್ರೀ ಸೀತಾರಾಮ ದೇವಸ್ಥಾನ ಟ್ರಸ್ಟ್‌ ವತಿಯಿಂದ ಗುರುಪೌರ್ಣಿಮೆ ಅಂಗವಾಗಿ ಸೀತಾರಾಮ ದೇವಸ್ಥಾನದಲ್ಲಿ ಜು. 14ರಿಂದ 16ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
Vijaya Karnataka Web nana religious program from tomorrow
ನಾಳೆಯಿಂದ ನಾನಾ ಧಾರ್ಮಿಕ ಕಾರ್ಯಕ್ರಮ


ಜು.14ರಿಂದ 16ರವರೆಗೆ ಪ್ರತಿನಿತ್ಯ ಬೆಳಗ್ಗೆ 5ಕ್ಕೆ ಕಾಕಡಾರತಿ, ಪಂಚಪದಿ ಭಜನೆ, ಬೆಳಗ್ಗೆ 6ಕ್ಕೆ ಗುರು ಚರಿತ್ರೆ ಪಾರಾಯಣ ನಡೆಯಲಿದೆ. ಅಲ್ಲದೇ ಜು.14 ರಂದು ಬೆಳಗ್ಗೆ 10ಕ್ಕೆ 108 ದಂಪತಿಗಳಿಂದ ಸತ್ಯನಾರಾಯಣ ಪೂಜಾ ಕಾರ್ಯಕ್ರಮ.12.30ಕ್ಕೆ ಪಲ್ಲಕ್ಕಿ ಸೇವೆ, 4ರಿಂದ ವಿವಿಧ ಮಹಿಳಾ ಮಂಡಳಗಳಿಂದ ಭಜನೆ, 6ರಿಂದ 8ರವರೆಗೆ ಮಹಾಮಂಗಳಾರತಿ ಅಷ್ಟಾವಧಾನ ಸೇವಾ ನಂತರ ಶಯನೋತ್ಸವ ಕಾರ್ಯಕ್ರಮ ನಡೆಯಲಿದೆ.

ಜು.15 ರಂದು ದತ್ತಯಾಗ, ಮಧ್ಯಾಹ್ನ 12ಕ್ಕೆ ದತ್ತಯಾಗದ ಪೂರ್ಣಾಹುತಿ ನಡೆಯಲಿದೆ. ಜು.16 ರಂದು ಚಂಡಿಯಾಗ ಸೇವೆ ಜತೆಗೆ ವಿವಿಧ ಕಾಯಕ್ರಮಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ಮೊ.9686137489,9449356863ಗೆ ಸಂಪರ್ಕಿಸುವಂತೆ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ