ಆ್ಯಪ್ನಗರ

ಚಿಕ್ಕನಗೌಡ್ರ ಸೋಲಿಗೆ ಪ್ರಹ್ಲಾದ ಜೋಶಿ ಕಾರಣ: ಪುತ್ರಿ ಆಕ್ರೋಶ

ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ವಿರುದ್ದ ಫೇಸ್‌ಬುಕ್ ಪೋಸ್ಟ್ ಮಾಡಿರುವ ನಂದಾ, ಸಂಸದ ಹಠಾವೋ ಬಿಜೆಪಿ ಬಚಾವೋ ಎಂದಿದ್ದಾರೆ.

Vijaya Karnataka Web 22 Nov 2018, 4:39 pm
ಹುಬ್ಬಳ್ಳಿ : ನಮ್ಮ ತಂದೆಯವರ ಸೋಲಿಗೆ ಸಂಸದ ಪ್ರಹ್ಲಾದ ಜೋಶಿಯವರೇ ಕಾರಣ ಎಂದು ಕುಂದಗೋಳ ಮಾಜಿ ಶಾಸಕ ಎಸ್.ಐ.‌ ಚಿಕ್ಕನಗೌಡ್ರ ಪುತ್ರಿ ನಂದಾ ಚಿಕ್ಕನಗೌಡ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web Pralhad Joshi


ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ವಿರುದ್ದ ಫೇಸ್‌ಬುಕ್ ಪೋಸ್ಟ್ ಮಾಡಿರುವ ನಂದಾ, ಸಂಸದ ಹಠಾವೋ ಬಿಜೆಪಿ ಬಚಾವೋ ಎಂದಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ತಂದೆಯ ಸೋಲಿಗೆ ಕಾರಣರಾದ ಮಹೇಶ್ ಗೌಡ ಜತೆಗೆ ಜೋಶಿಯವರು ಹೊಂದಾಣಿಕೆ ಮಾಡಿಕೊಂಡಿದ್ದೀರಿ ಎಂದು ಆರೋಪಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯ ವೇಳೆ ಮಹೇಶ್ ಗೌಡ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ್ರು, ಆದರೆ ಕಾಂಗ್ರೆಸ್ ಅಭ್ಯರ್ಥಿ ಸಿ. ಎಸ್. ಶಿವಳ್ಳಿ ಪರ ಕೆಲಸ ಮಾಡಿದ್ದರು. ಹೀಗಾಗಿ ನಮ್ಮ ತಂದೆ ಚಿಕ್ಕನಗೌಡ್ರ ಸೋಲಿಗೆ ಮಹೇಶ್ ಗೌಡ ಕಾರಣ. ಆದರೆ ನೀವು ಅವರಿಗೆ ಮಣೆ ಹಾಕುತ್ತಿದ್ದೀರಿ, ನಮ್ಮ‌ ತಂದೆ ಸೋಲಿಗೆ ಕಾರಣದವರಿಗೆ ಬುದ್ದಿ ಕಲಿಸುತ್ತೇವೆ. ಮುಂದೆ ಲೋಕಸಭೆ ಚುನಾವಣೆ ಇದೆ ವಿಚಾರ‌ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ಫ್ರೂಫ್ ಸಮೇತ ಹೇಳಿದ್ದೇವೆ. ಆದರೂ ನೀವು ಕ್ರಮ ತೆಗದುಕೊಂಡಿಲ್ಲ ಎಂದಿರುವ ಚಿಕ್ಕನಗೌಡ್ರ ಪುತ್ರಿ ನಂದಾ ಚಿಕ್ಕನ ಗೌಡ್ರ ಪೋಸ್ಟ್ ಗೆ ಬೆಂಬಲವಾಗಿ ಚಿಕ್ಕನ ಗೌಡ್ರ ಅಭಿಮಾನಿಗಳು ಕೂಡ ಜೋಶಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ