ಆ್ಯಪ್ನಗರ

ನಿರ್ಲಕ್ಷ್ಯ ಆರೋಪ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹ

ನವಲಗುಂದ: ಸ್ವಾತಂತ್ರ್ಯಾನಂತರ ನಮ್ಮನ್ನಾಳುತ್ತಿರುವ ಸರಕಾರಗಳು ಹಾಗೂ ಸರಕಾರದ ಮುಖ್ಯಸ್ಥರು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿಸುತ್ತಾ ಬಂದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರತ್ಯೇಕ ರಾಜ್ಯ ನಿರ್ಮಾಣದ ಕೂಗು ಅವಶ್ಯವಾಗಿದೆ ಎಂದು ಉತ್ತರ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.

Vijaya Karnataka 15 Jul 2018, 5:00 am
ನವಲಗುಂದ: ಸ್ವಾತಂತ್ರ್ಯಾನಂತರ ನಮ್ಮನ್ನಾಳುತ್ತಿರುವ ಸರಕಾರಗಳು ಹಾಗೂ ಸರಕಾರದ ಮುಖ್ಯಸ್ಥರು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿಸುತ್ತಾ ಬಂದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರತ್ಯೇಕ ರಾಜ್ಯ ನಿರ್ಮಾಣದ ಕೂಗು ಅವಶ್ಯವಾಗಿದೆ ಎಂದು ಉತ್ತರ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
Vijaya Karnataka Web neglected allegations north karnataka demands separate state
ನಿರ್ಲಕ್ಷ್ಯ ಆರೋಪ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹ


ಶನಿವಾರ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ದಕ್ಷಿಣ ಕರ್ನಾಟಕದಲ್ಲಿ ಕೇವಲ ಒಂದು ನದಿ ಹರಿಯುತ್ತದೆ ಆದರೆ ಉತ್ತರ ಕರ್ನಾಟಕದಲ್ಲಿ ನಾಲ್ಕು ನದಿಗಳು ಹರಿಯುತ್ತವೆ ಆ ನದಿಗಳ ಜೋಡಣೆ ಮಾಡಿ ಕೆರೆ ತುಂಬಿಸಿಕೊಟ್ಟಿದ್ದರೆ ಸಾಕಿತ್ತು. ರೈತರು ಬರ ಸಂಕಷ್ಟ ಎದುರಿಸುತ್ತಿರಲಿಲ್ಲ ಆತ್ಮಹತ್ಯೆ ಶರಣಾಗುತ್ತಿಲ್ಲ ಹಾಗೂ ಸಾಲ ಮನ್ನಾ ಮಾಡಿ ಎಂದು ಕೇಳಿಕೊಳ್ಳುತ್ತಿರಲ್ಲ ಎಂದು ದೂರಿದರು.

ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ರೈತ ಹೋರಾಟಗಾರು ಲಾಠಿ ಏಟು ತಿಂದು ಹೋರಾಟ ನಡೆಸಿದರು ಈ ಭಾಗದ ಜನಪತ್ರಿನಿಧಿಗಳಿಗೆ ದಕ್ಷ ಣ ಕರ್ನಾಟಕದ ಶಾಸರಕರು ಅಧಿಕಾರಿಗಳು ಕವಡೆ ಕಾಸಿನ ಕಿಮತ್ತು ಕೊಡುತ್ತಿಲ್ಲ ಎಂದು ಉತ್ತರ ಕರ್ನಾಟಕ ಏಕೆ ಈ ರಾಜ್ಯದಲ್ಲಿ ಉಳಿಯಬೇಕೆಂದು ಪ್ರಶ್ನಿಸಿದರು. ಅಲ್ಲದೇ ರಾಜ್ಯದ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಚುನಾವಣೆ ಪೂರ್ವದಲ್ಲಿ ರೈತರ, ವಿವಿಧ ಗುಂಪುಗಳ ಸಂಪೂರ್ಣ ಸಾಲ ಮನ್ನಾಮಾಡುವುದಾಗಿ ಘೋಷಣೆ ಮಾಡಿದ್ದರೂ ಆದರೆ ಬಜಟನಲ್ಲಿ ತಮಗೆ ಬೇಕಾದ ಕ್ಷೇತ್ರಗಳಿಗೆ ಅನುದಾನ ಮಿಸಲಿಟ್ಟು ನಮ್ಮ ಭಾಗವನ್ನು ಸಂಪೂರ್ಣವಾಗಿ ನಿಲಕ್ಷ ್ಯಸಿ ಮಲತಾಯಿ ದೊರಣೆಯನ್ನು ಅನುಸರಿಸಿದ್ದಾರೆಂದು ಆರೋಪಿಸಿದರು. ಉತ್ತರ ಕರ್ನಾಟಕ ಪತ್ಯೇಕ ರಾಜ್ಯ ಕೂಗಿಗಾಗಿ ಅ.2 ರಂದು ಬೆಳಗಾವಿಯಲ್ಲಿ ಬಹೃತ ಹೋರಾಟ ಆರಂಭಿಸಲಾಗುವುದು ಎಂದು ವಿವರಿಸಿದರು.

ಹುಬ್ಬಳಿಯ ರಾಜ ವಿದ್ಯಾಶ್ರಮದ ಷಡಕ್ಷ ರಿ ಸ್ವಾಮೀಜಿ ಮಾತನಾಡಿ ಉತ್ತರ ಕರ್ನಾಟಕದ ಮಠಾಧೀಶರು ರೈತರಿಗೆ ಬೆಂಬಲ ಸೂಚಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ವಿರುಪಾಕ್ಷಿ ಕಳ್ಳಿಮನಿ, ತಾಲೂಕು ಅಧ್ಯಕ್ಷ ಅಲ್ಲಾಬಕ್ಷ ನದಾಫ ಮಾತನಾಡಿ ತಾಲೂಕಾ ಆಡಿಳಿತ ವರ್ಗದಲ್ಲಿ ಸಂರ್ಪೂಣ ವಿಫಲವಾಗಿದ್ದು ಭ್ರಷ್ಟಾಚಾರ ತಾಂಡಾವ ಹೆಚ್ಚಾಗಿದೆ ಎಂದು ಆರೋಪಿಸಿದರು. ಅನ್ನಪ್ಪಗೌಡ ದೇಸಾಯಿ, ಶರಣಪ್ಪ ಸಾತಮನವರ, ಬಸಪ್ಪ ಸೆಡಬಾಳ,ಸಿದ್ದಪ್ಪ ಜನ್ನರ, ಕಲ್ಲಯ್ಯ ಹೊಸಮನಿ, ಜೈರಾಬಿ ನದಾಫ, ಮಲ್ಲಮ್ಮ ಹೆಬಸೂರ, ರುದ್ರಪ್ಪ ಮಳಪನವರ, ಮತ್ತಿತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ