ಆ್ಯಪ್ನಗರ

ನೆಟ್‌ಬಾಲ್‌ ಪಂದ್ಯಾವಳಿ, ಆಯ್ಕೆ ಸಮಾರೋಪ

ಧಾರವಾಡ: ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಶ್ರೀ ಹುರಕಡ್ಲಿಅಜ್ಜ ಶಿಕ್ಷಣ ಸಮಿತಿ, ಶ್ರೀಮತಿ ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಕಲಾ ಹಾಗೂ ಡಾ.ಸುಶೀಲಾ ಮುರಿಗೆಪ್ಪ ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಆಶ್ರಯದಲ್ಲಿಅಂತರ್‌ ಮಹಾವಿದ್ಯಾಲಯಗಳ ನೆಟ್‌ಬಾಲ್‌ ಪಂದ್ಯಾವಳಿ ಹಾಗೂ

Vijaya Karnataka 13 Jan 2020, 5:00 am
ಧಾರವಾಡ: ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಶ್ರೀ ಹುರಕಡ್ಲಿಅಜ್ಜ ಶಿಕ್ಷಣ ಸಮಿತಿ, ಶ್ರೀಮತಿ ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಕಲಾ ಹಾಗೂ ಡಾ.ಸುಶೀಲಾ ಮುರಿಗೆಪ್ಪ ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಆಶ್ರಯದಲ್ಲಿಅಂತರ್‌ ಮಹಾವಿದ್ಯಾಲಯಗಳ ನೆಟ್‌ಬಾಲ್‌ ಪಂದ್ಯಾವಳಿ ಹಾಗೂ ಆಯ್ಕೆ ಸಮಾರೋಪ, ಬಹುಮಾನ ವಿತರಣೆ ಕಾರ್ಯಕ್ರಮ ಗುರುವಾರ ಜರುಗಿತು.
Vijaya Karnataka Web netball tournament opening ceremony
ನೆಟ್‌ಬಾಲ್‌ ಪಂದ್ಯಾವಳಿ, ಆಯ್ಕೆ ಸಮಾರೋಪ


ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಜಿಲ್ಲಾಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ, ಮಾಜಿ ಮೇಯರ್‌ ಶಿವು ಹಿರೇಮಠ ಮಾತನಾಡಿ, ವಿದ್ಯಾಭ್ಯಾಸಕ್ಕೆ ಬಡತನ ಅಡ್ಡಿಯಾಗಲಾರದು. ಶಿಸ್ತು, ಸಂಯಮದಿಂದ ಹಾಗೂ ಸತತ ಪ್ರಯತ್ನದಿಂದ ಗೆಲುವು ಸಾಧಿಸಲು ಪ್ರಯತ್ನಿಸಬೇಕು. ವಿಶ್ವ ದಾಖಲೆ ಮಾಡಿದ ಮಹಿಳಾ ಕ್ರೀಡಾಪಟುಗಳ ಆದರ್ಶಗಳನ್ನು ಪಾಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕ್ರೀಡೆಯಲ್ಲಿಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸರಕಾರಿ ಹುದ್ದೆಯಲ್ಲಿಮೀಸಲು, ಶಿಷ್ಯವೇತನ ದೊರೆಯಲಿದೆ. ಕ್ರೀಡೆಯಲ್ಲಿಸಾಕಷ್ಟು ಅವಕಾಶಗಳಿವೆ. ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜೆಎಸ್‌ಎಸ್‌ ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕ ಕೆ.ಎಸ್‌.ಭೀಮಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೋಲು ಗೆಲುವಿನ ಮೆಟ್ಟಿಲು. ಸತತ ಪ್ರಯತ್ನ ಯಶಸ್ವಿಗೆ ದಾರಿ ಮಾಡಿ ಕೊಡುತ್ತದೆ ಎಂದು ಹೇಳಿದರು.

ಪಂದ್ಯಾವಳಿಯಲ್ಲಿಶ್ರೀಮತಿ ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಕಲಾ ಹಾಗೂ ಡಾ.ಸುಶೀಲಾ ಮುರಿಗೆಪ್ಪ ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಪ್ರಥಮ ಸ್ಥಾನ ಹಾಗೂ ಎಸ್‌ಜೆಎಂವಿಎಸ್‌ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಹಾವಿದ್ಯಾಲಯದ ವಿದ್ಯಾರ್ಥಿನಿ ಗಂಗಮ್ಮ ಗಡ್ಡಿ ಬೆಸ್ಟ್‌ ಶೂಟರ್‌ ಆಗಿ ಹೊರಹೊಮ್ಮಿದಳು.

ನೆಟ್‌ಬಾಲ್‌ ಕ್ರೀಡಾಪಟುಗಳ ಆಯ್ಕೆ ಸಮಿತಿ ಸದಸ್ಯ ಡಾ.ವಿಶ್ವನಾಥ ನಡಕಟ್ಟಿ, ಆರ್‌.ಆರ್‌.ಸೋನೆಖಾನ್‌ ಸೇರಿದಂತೆ ಕ್ರೀಡಾಪಟುಗಳು ಇದ್ದರು. ಪ್ರಾಚಾರ್ಯ ಡಾ.ನಿರ್ಮಲಾ ಎಂ.ಹಿರೇಗೌಡರ ಸ್ವಾಗತಿಸಿದರು. ಪ್ರೊ.ಶೋಭಾ ಎಸ್‌.ಸಜ್ಜನ್‌ ಪರಿಚಯಿಸಿದರು. ಡಾ.ರಾಜೇಶ್ವರಿ ಎಂ.ಶೆಟ್ಟರ ಹಾಗೂ ಕಾವೇರಿ ನಾಗಣ್ಣವರ ನಿರೂಪಿಸಿದರು. ಪ್ರೊ.ಶಕುಂತಲಾ ಎಸ್‌.ಬಿರಾದಾರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ