ಆ್ಯಪ್ನಗರ

ಧೂಳಿನಿಂದ ಮುಕ್ತಗೊಳ್ಳುತ್ತಿರುವ ಹೊಸ ಬಸ್‌ ನಿಲ್ದಾಣ

ಹುಬ್ಬಳ್ಳಿ : ಬಿಕೋ ಎನ್ನುತ್ತಿದ್ದ ಸ್ಥಳದಲ್ಲಿ ಜನ ದಟ್ಟಣೆ.. ಇಷ್ಟು ದಿನ ಕಟ್ಟಡಕ್ಕೆ ಅಂಟಿದ್ದ ಧೂಳು ತೆಗೆಯುತ್ತಿರುವ ಕಾರ್ಮಿಕರು.. ಸದಾ ಬಾಗಿಲು ಮುಚ್ಚಿಕೊಂಡಿದ್ದ ಅಂಗಡಿಗಳಿಗೆ ಹೊಸ ಕಳೆ.. ಮೇಲಿಂದ ಮೇಲೆ ಬಸ್‌, ಆಟೊಗಳ ಓಡಾಟ.. ಇದು 319 ಬಸ್‌ಗಳ ಕಾರಾರ‍ಯಚರಣೆ ಹೊಸ ಬಸ್‌ ನಿಲ್ದಾಣದಿಂದ ಆರಂಭಗೊಂಡಿದ್ದರ ಮೂರನೇ ದಿನದ ಎಫೆಕ್ಟ್...

Vijaya Karnataka 22 Nov 2018, 5:00 am
ಹುಬ್ಬಳ್ಳಿ : ಬಿಕೋ ಎನ್ನುತ್ತಿದ್ದ ಸ್ಥಳದಲ್ಲಿ ಜನ ದಟ್ಟಣೆ.. ಇಷ್ಟು ದಿನ ಕಟ್ಟಡಕ್ಕೆ ಅಂಟಿದ್ದ ಧೂಳು ತೆಗೆಯುತ್ತಿರುವ ಕಾರ್ಮಿಕರು.. ಸದಾ ಬಾಗಿಲು ಮುಚ್ಚಿಕೊಂಡಿದ್ದ ಅಂಗಡಿಗಳಿಗೆ ಹೊಸ ಕಳೆ.. ಮೇಲಿಂದ ಮೇಲೆ ಬಸ್‌, ಆಟೊಗಳ ಓಡಾಟ.. ಇದು 319 ಬಸ್‌ಗಳ ಕಾರಾರ‍ಯಚರಣೆ ಹೊಸ ಬಸ್‌ ನಿಲ್ದಾಣದಿಂದ ಆರಂಭಗೊಂಡಿದ್ದರ ಮೂರನೇ ದಿನದ ಎಫೆಕ್ಟ್...
Vijaya Karnataka Web new bus stand free from dust
ಧೂಳಿನಿಂದ ಮುಕ್ತಗೊಳ್ಳುತ್ತಿರುವ ಹೊಸ ಬಸ್‌ ನಿಲ್ದಾಣ


ಹೌದು, ಲಾಂಗರೂಟ್‌ ಬಸ್‌ಗಳ ಕಾರಾರ‍ಯಚರಣೆ ಸ್ಥಳಾಂತರದಿಂದ ಹೊಸ ಬಸ್‌ ನಿಲ್ದಾಣಕ್ಕೆ ಹೊಸ ಕಳೆ ಬಂದಂತಾಗಿದ್ದು, ಎಲ್ಲೆಡೆ ಶುಚಿಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಇದರೊಟ್ಟಿಗೆ ಅಂಗಡಿಕಾರರು ಹೊಸ ಬಸ್‌ ನಿಲ್ದಾಣಕ್ಕೆ ಬರುವ ಪ್ರಯಾಣಿಕರನ್ನು ಆಕರ್ಷಿಸಲು ಸುಣ್ಣ, ಬಣ್ಣ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳಾಂತರಗೊಂಡ ಮೂರೇ ದಿನಕ್ಕೆ ಏಳೆಂಟು ಬೇಕರಿ, ಪಾನ್‌ಶಾಪ್‌, ಗೃಹೋಪಯೋಗಿ ಸಾಮಗ್ರಿ ಅಂಗಡಿಗಳು ತೆರೆದುಕೊಂಡಿದ್ದು ವಿಶೇವಾಗಿತ್ತು.

ಸದಾ ಕಾಲ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದ ಹೊಸ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಧೂಳು ತಿನ್ನುತ್ತಿದ್ದ ಕಟ್ಟಡದ ಧೂಳು ಸ್ವಚ್ಛಗೊಳಿಸುವ ಕಾರ್ಯವೂ ಜೋರಾಗಿಯೇ ಸಾಗಿದೆ. ಶೌಚಾಲಯ ವ್ಯವಸ್ಥೆ ಇದ್ದರೂ, ಬಹುತೇಕ ಪ್ರಯಾಣಿಕರಿಗೆ ಸೂಕ್ತ ಮಾರ್ಗದರ್ಶನ ಸಿಗದ ಕಾರಣ ಬಸ್‌ ನಿಲ್ದಾಣದ ಬಯಲು ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪ್ರಯಾಣಿಕರ ಸಂಖ್ಯೆ ಹೆಚ್ಚು: ಹಳೇ ಬಸ್‌ ನಿಲ್ದಾಣದಿಂದ ಬಸ್‌, ಆಟೊ ಹಾಗೂ ವಿವಿಧ ಖಾಸಗಿ ವಾಹನಗಳ ಓಡಾಟ ಹೆಚ್ಚಾಗಿದೆ. ಅಲ್ಲದೆ, ಹೊಸ ಬಸ್‌ ನಿಲ್ದಾಣಕ್ಕೆ ಬರುವ ಪ್ರತಿಯೊಂದು ನಗರ ಸಾರಿಗೆ ಬಸ್‌ನಲ್ಲಿಯೂ 10 ರಿಂದ 15 ಜನ ಪ್ರಯಾಣಿಕರು ಬರುತ್ತಿದ್ದಾರೆ. ಇನ್ನು ಕೆಲ ಪ್ರಯಾಣಿಕರು ದುಬಾರಿಯಾಗಿದ್ದರೂ ಆಟೊಗಳಲ್ಲಿ ಬರುತ್ತಿದ್ದರು. ಈಗಾಗಲೇ ಹೊಸ ಬಸ್‌ ನಿಲ್ದಾಣದಲ್ಲಿ ಆಟೊ ಸ್ಟ್ಯಾಂಡ್‌ ಸಹ ನಿರ್ಮಾಣವಾಗಿದೆ. ಪ್ರಯಾಣಿಕರನ್ನು ಆಕರ್ಷಿಸಲು ಪೂರಕ ತಯಾರಿ ನಡೆಸುತ್ತಿದೆ.

ಚನ್ನಮ್ಮ ವೃತ್ತ ಹಾಗೂ ಹಳೇ ಬಸ್‌ ನಿಲ್ದಾಣದಲ್ಲಿ ವಾಹನಗಳ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೈಗೊಂಡ ನಿರ್ಧಾರ ಕ್ರಮೇಣ ಫಲಕಾರಿಯಾಗುತ್ತಿದೆ. ಬಸ್‌ಗಳ ಕಾರಾರ‍ಯಚರಣೆ ಸ್ಥಳಾಂತರದಿಂದ ಕೆಲ ಪ್ರಯಾಣಿಕರಿಗೆ ಗೊಂದಲ, ತೊಂದರೆ ಉಂಟಾಗುತ್ತಿದೆ. ಆದರೆ, ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಬರುವ ದಿನಗಳಲ್ಲಿ ಸಾರ್ವಜನಿಕರು ಈ ವ್ಯವಸ್ಥೆಗೆ ಒಗ್ಗಿಕೊಳ್ಳಲಿದ್ದಾರೆ ಎಂಬುವುದು ಸ್ಪಷ್ಟ.

ನಿತ್ಯ ಬಸ್‌ ತೆರಳುವ ನಿಗದಿತ ವೇಳೆಗೆ ಹೊಸ ಬಸ್‌ ನಿಲ್ದಾಣಕ್ಕೆ ತೆರಳದೆ, ಹಳೇ ಬಸ್‌ ನಿಲ್ದಾಣಕ್ಕೆ ಬರುವ ಅನೇಕ ಪ್ರಯಾಣಿಕರಿಗೆ ಕೊನೆಯ ಬಸ್‌ ತಪ್ಪುತ್ತಿದೆ. ಹೀಗಾಗಿ ಇದಕ್ಕೆ ಪರಿಹಾರ ಒದಗಿಸಲು ನಿಗದಿತ ವೇಳೆಯ ಅರ್ಧ ಗಂಟೆ ತಡವಾಗಿ ಹೊಸ ಬಸ್‌ ನಿಲ್ದಾಣದಿಂದ ಚಾಲಕ ಮತ್ತು ನಿರ್ವಾಹಕರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.

ಸ್ಥಳಾಂತರದಿಂದ ಹೊಸ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಮತ್ತು ಸಾರ್ವಜನಿಕರ ಓಡಾಟ ಹೆಚ್ಚಾಗಿದೆ. ಹೀಗಾಗಿ ಕಳೆದೆರಡೂ ದಿನಗಳಿಂದ ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯುತ್ತಿದೆ. ಹೀಗಾಗಿ ಹೊಸ ಹೊಸ ಅಂಗಡಿಗಳು ತೆರೆದುಕೊಳ್ಳುತ್ತಿವೆ. ಗ್ರಾಹಕರನ್ನು ಆಕರ್ಷಿಸಲು ಅಂಗಡಿಗಳನ್ನು ಶುಚಿಗೊಳಿಸಲಾಗುತ್ತಿದೆ ಎನ್ನುತ್ತಾರೆ ಬೇಕರಿ ವ್ಯಾಪಾರಸ್ಥರೊಬ್ಬರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ