ಆ್ಯಪ್ನಗರ

ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳೇ ಸಿಗುತ್ತಿಲ್ಲ:ಜೋಶಿ ಲೇವಡಿ

ಕಲಘಟಗಿ : ಕಾಂಗ್ರೆಸ್‌ ಪಕ್ಷ ಕ್ಕೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೇ ಸಿಗುತ್ತಿಲ್ಲ .125 ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್‌ ಪಕ್ಷ ಕ್ಕೆ ಅಂತಹ ಪರಿಸ್ಥಿತಿ ಬಂದೊದಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.

Vijaya Karnataka 2 Apr 2019, 5:00 am
ಕಲಘಟಗಿ : ಕಾಂಗ್ರೆಸ್‌ ಪಕ್ಷ ಕ್ಕೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೇ ಸಿಗುತ್ತಿಲ್ಲ .125 ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್‌ ಪಕ್ಷ ಕ್ಕೆ ಅಂತಹ ಪರಿಸ್ಥಿತಿ ಬಂದೊದಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.
Vijaya Karnataka Web no contestants in congress joshi ridiculed
ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳೇ ಸಿಗುತ್ತಿಲ್ಲ:ಜೋಶಿ ಲೇವಡಿ


ಅವರು ಪಟ್ಟಣದಲ್ಲಿ ಬಿಜೆಪಿ ಲೋಕಸಭಾ ಚುನಾವಣಾ ಕಾರ್ಯಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ಧಾರವಾಡ ಕ್ಷೇತ್ರದಲ್ಲೂ ಕಾಂಗ್ರೆಸ್‌ ಪಕ್ಷ ದ ಅಭ್ಯರ್ಥಿ ಕುರಿತು ತೀರ್ಮಾನ ಇವತ್ತು ಮಾಡುತ್ತಾರೆ ನಾಳೆ ಮಾಡುತ್ತಾರೆ ಎಂಬ ಸ್ಥಿತಿ ನಡೆದಿದೆ .ಇದರಿಂದ ಆ ಪಾರ್ಟಿ ಯಾವ ಸ್ಥಿತಿಗೆ ಬಂದಿದೆ ಎಂಬುದನ್ನು ತಿಳಿದಿಕೊಳ್ಳಬಹುದು ಎಂದರು.

ಇಡೀ ರಾಜ್ಯದಲ್ಲಿ ಅಸಮಾಧಾನ ಇಲ್ಲದೇ ರೀತಿಯಲ್ಲಿ ಟಿಕೆಟ್‌ ಹಂಚಿಕೆ ಮಾಡಿರುವ ಪಕ್ಷ ಬಿಜೆಪಿ ಪಕ್ಷ ವಾಗಿದೆ.ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ .ಆನಂತರ ರಾಜ್ಯದಲ್ಲಿನ ಮೈತ್ರಿ ಸರಕಾರ ಪತನವಾಗಲಿದ್ದು,ನಂತರ ಬಿಜೆಪಿ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬರಲಿದೆ ಎಂದರು. ಕಾಂಗ್ರೆಸ್‌ ಎಂದರೆ ಒಡೆದ ಮನೆಯಾಗಿದೆ. ಇವರಿಗೆ ಕೊಡ ಬೇಕು ಅವರಿಗೆ ಕೊಡ ಬೇಕು ಎಂಬ ಬಡೆದಾಟ ಮತ್ತು ಅಭ್ಯರ್ಥಿಗಳು ಇಲ್ಲದ ಸ್ಥಿತಿಯಲ್ಲಿ ಕಾಂಗ್ರೆಸ್‌ ಪಕ್ಷ ಇದೆ ಎಂದು ಜೋಶಿ ಛೇಡಿಸಿದರು.

ಶಾಸಕ ಸಿ.ಎಂ.ನಿಂಬಣ್ಣವರ ಮಾತನಾಡಿ ಬಿಜೆಪಿ ಈ ಬಾರಿ ದೇಶದಲ್ಲಿ 300ಕ್ಕೂ ಹೆಚ್ಚು ಸ್ಥಾನ ಗೆದ್ದು ಸ್ವತಂತ್ರ ಸರಕಾರ ರಚಿಸಲಿದೆ.ಸಂಸದ ಪ್ರಹ್ಲಾದ ಜೋಶಿ ಈ ಬಾರಿ ಮತ್ತೆ ಅಧಿಕ ಮತಗಳ ಅಂತರದಿಂದ ವಿಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಅಧ್ಯಕ್ಷ ಈರಣ್ಣ ಜಡಿ,ತಾಲೂಕಾ ಅಧ್ಯಕ್ಷ ನಿಂಗಪ್ಪ ಸುತಟ್ಟಿ, ಜಿ ಪಂ ಮಾಜಿ ಸದಸ್ಯ ಸಿ.ಎಫ್‌.ಪಾಟೀಲ,ವಿ.ಎಸ್‌.ಪಾಟೀಲ,ತಾ ಪಂ ಅಧ್ಯಕ್ಷೆ ಸುನಿತಾ ಮ್ಯಾಗಿನಮನಿ,ಐ.ಸಿ .ಗೋಕುಲ,ಎಸ್‌.ಎಂ.ಚಿಕ್ಕಣ್ಣವರ,ಅಜ್ಜಪ್ಪ ಹೊರಕೆರಿ,ಗೀತಾ ಮರಲಿಂಗಣ್ಣವರ,ಬಸವರಾಜ ಶೆರೆವಾಡ,ಮಂಜುಳಾ ನಾಯಕ,ವಿಜಯಲಕ್ಷ್ಮಿ ಆಡಿನವರ,ಸುರೇಶ ಶೀಲವಂತರ,ಬಸವರಾಜ ಶೆರೆವಾಡ,ಸುನಿಲ ಕಮಮ್ಮಾರ,ಸಿ ಬಿ ಹೊನ್ನಿಹಳ್ಳಿ ಇದ್ದರು.ಸದಾನಂದ ಚಿಂತಾಂಣಿ ನಿರೂಪಸಿದರು.ನಿಂಗಪ್ಪ ಸುತಗಟ್ಟಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ