ಆ್ಯಪ್ನಗರ

ದಾಳಿ ಬಳಿಕ ಅಪರಾಧ ತಡೆ ಏಕಿಲ್ಲ?

ಹುಬ್ಬಳ್ಳಿ : ಹು-ಧಾ ಅವಳಿನಗರದಲ್ಲಿಹೆಚ್ಚುತ್ತಿರುವ ಚೂರಿ ಇರಿತ, ಶೂಟೌಟ್‌ ಪ್ರಕರಣಗಳಿಂದ ಎಚ್ಚರಿತ್ತಿರುವ ಪೊಲೀಸರು 3 ದಿನಗಳಲ್ಲಿ400ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಅಲ್ಲದೆ 181 ರೌಡಿಗಳ ವಿರುದ್ಧ ಪ್ರಕರಣ ದಾಖಲಿಸಿ ಮಾರಕಾಸ್ತ್ರ ವಶಪಡಿಸಿಕೊಂಡಿದ್ದಾರೆ. ಆದರೆ ಅಪರಾಧ

Vijaya Karnataka 28 Sep 2019, 5:00 am
ಕಲ್ಮೇಶ ಪಟ್ಟಣದವರ
Vijaya Karnataka Web no crime barrier after attack
ದಾಳಿ ಬಳಿಕ ಅಪರಾಧ ತಡೆ ಏಕಿಲ್ಲ?

ಹುಬ್ಬಳ್ಳಿ : ಹು-ಧಾ ಅವಳಿನಗರದಲ್ಲಿಹೆಚ್ಚುತ್ತಿರುವ ಚೂರಿ ಇರಿತ, ಶೂಟೌಟ್‌ ಪ್ರಕರಣಗಳಿಂದ ಎಚ್ಚರಿತ್ತಿರುವ ಪೊಲೀಸರು 3 ದಿನಗಳಲ್ಲಿ400ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಅಲ್ಲದೆ 181 ರೌಡಿಗಳ ವಿರುದ್ಧ ಪ್ರಕರಣ ದಾಖಲಿಸಿ ಮಾರಕಾಸ್ತ್ರ ವಶಪಡಿಸಿಕೊಂಡಿದ್ದಾರೆ. ಆದರೆ ಅಪರಾಧ ಕೃತ್ಯಗಳು ನಿತ್ಯ ಘಟಿಸುತ್ತಿವೆ. ಇದರಿಂದ ಬೆಚ್ಚಿಬಿದ್ದಿರುವ ಸಾರ್ವಜನಿಕರು ಪೊಲೀಸರ ದಾಳಿ ಕಾಟಾಚಾರವೇ ಎಂದು ಪ್ರಶ್ನಿಸುತ್ತಿದ್ದಾರೆ.

ಅಪರಾಧ ಕೃತ್ಯಕ್ಕೆ ಬ್ರೇಕ್‌ ಹಾಕಲು ರೌಡಿಶೀಟರ್‌ ನಿವಾಸಗಳ ಮೇಲೆ ದಾಳಿ ನಡೆಸುತ್ತಿದ್ದೇವೆ. ರೌಡಿಶೀಟರ್‌ಗಳನ್ನು ಠಾಣೆಗೆ ಕರೆ ತಂದು ಬಾಂಡ್‌ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತಿದ್ದೇವೆ. ಈ ಮೂಲಕ ರೌಡಿಗಳ ಹೆಡೆಮುರಿ ಕಟ್ಟುತ್ತಿದ್ದೇವೆ ಎಂದೆಲ್ಲಾಪೊಲೀಸ್‌ ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಆದರೂ ಅವಳಿನಗರ ಮತ್ತು ಜಿಲ್ಲೆಯಲ್ಲಿಅಪರಾಧ ಕೃತ್ಯಗಳ ಸಂಖ್ಯೆ ಏಕೆ ಕಡಿಮೆಯಾಗುತ್ತಿಲ್ಲಎನ್ನುವ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಈ ಹಿಂದಿನ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ್‌ ಅಧಿಕಾರವಧಿಯಲ್ಲಿಡಿಸಿಪಿ ರೇಣುಕಾ ಸುಕುಮಾರ್‌ ಮತ್ತು ನೇಮಗೌಡ ನೇತೃತ್ವದಲ್ಲಿಮೂರು ಬಾರಿ ರೌಡಿಶೀಟರ್‌ ನಿವಾಸಗಳ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿತ್ತು. 3 ಬಾರಿ ರೌಡಿ ಪರೇಡ್‌ ನಡೆಸಿ ರೌಡಿಶೀಟರ್‌ಗಳಿಗೆ ಖಡಕ್‌ ಎಚ್ಚರಿಕೆ ನೀಡಲಾಗಿತ್ತು. ಸಕ್ರಿಯವಾಗಿದ್ದ ರೌಡಿಶೀಟರ್‌ ವಿರುದ್ಧ ಗೂಂಡಾ ಕಾಯಿದೆಯಡಿ ಗಡಿಪಾರು ಹಾಗೂ ರೌಡಿಶೀಟರ್‌ಗಳ ಮೇಲೆ 2 ಲಕ್ಷ ರೂ. ವರೆಗೂ ಬಾಂಡ್‌ ಬ್ರಹ್ಮಾಸ್ತ್ರ ಪ್ರಯೋಗ ಮಾಡಲಾಗಿತ್ತು.

ಇದೀಗ ಅದರ ಮುಂದುವರಿದ ಭಾಗವಾಗಿ ನೂತನ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿಕಳೆದ ಮೂರ್ನಾಲ್ಕು ದಿನದಿಂದ ಅವಳಿನಗರದಲ್ಲಿನಿರಂತರವಾಗಿ ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗುತ್ತಿದೆ. ರೌಡಿಗಳ ವಿರುದ್ಧ ಪ್ರಕರಣ ದಾಖಲಿಸಿ ಅಪಾರ ಪ್ರಮಾಣದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದರೂ ಅಪರಾಧ ಕೃತ್ಯಗಳು ನಿಂತಿಲ್ಲ.

ಗಣೇಶ ವಿಸರ್ಜನೆಯಿಂದ ಹಿಡಿದು ಈವರೆಗೆ ಚಾಕು ಇರಿತಕ್ಕೆ ಇಬ್ಬರು ಯುವಕರು ಬಲಿಯಾಗಿದ್ದಾರೆ. ಅದೇ ದಿನ ಒಟ್ಟು 8 ಕಡೆಗಳಲ್ಲಿಚಾಕು ಇರಿತ ಆಗಿದ್ದವು. ನಂತರ 2 ದಿನದಲ್ಲಿನಡೆದ ಮಾರಾಮಾರಿ ಪ್ರಕರಣದಲ್ಲಿಮೂವರಿಗೆ ಚಾಕು ಇರಿತವಾಗಿತ್ತು. ಇದಾದ ಬಳಿಕ ಇಬ್ಬರು ಸ್ನೇಹಿತರಿಂದಲೇ ಚಾಕು ಇರಿತಕ್ಕೊಳಗಾಗಿ ಯುವಕ ಬಲಿಯಾಗಿದ್ದ.

ಈ ಪ್ರಕರಣಗಳು ಹಸಿಯಾಗಿರುವಾಗಲೇ ಎರಡು ಪ್ರತ್ಯೇಕ ಶೂಟೌಟ್‌ ಪ್ರಕರಣ ನಡೆದಿವೆ. ಇದರಲ್ಲಿಇಬ್ಬರು ಬಲಿಯಾಗಿದ್ದಾರೆ. ಈ ಕೃತ್ಯಗಳು ಜಿಲ್ಲೆಯ ಜನರನ್ನು ಬೆಚ್ಚಿ ಬೀಳುವಂತೆ ಮಾಡಿವೆ. ಹೀಗಾಗಿ ಪೊಲೀಸರು ರೌಡಿಶೀಟರ್‌ಗಳ ನಿವಾಸಗಳ ಮೇಲೆ ನಿರಂತರ ದಾಳಿ ನಡೆಸಿ ರೌಡಿಗಳಲ್ಲಿಭಯದ ವಾತಾವರಣ ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಪೊಲೀಸರ ಈ ಪ್ರಯತ್ನಗಳಿಗೆ ರೌಡಿಶೀಟರ್‌ ಮತ್ತು ಪುಡಿರೌಡಿಗಳು ಸೊಪ್ಪು ಹಾಕದೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಇದಕ್ಕೆ ಕೊನೆ ಬಿದ್ದು ಮತ್ತೆ ಮಹಾನಗರದಲ್ಲಿಶಾಂತಿ ನೆಲೆಸುವುದೇ ಎನ್ನುವುದನ್ನು ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ