ಆ್ಯಪ್ನಗರ

ಸರಕು ವಾಹನದಲ್ಲಿ ಪ್ಯಾಸೆಂಜರ್‌ ಬೇಡ

ಅಳ್ನಾವರ : ಸರಕು ಸಾಗಣೆ ವಾಹನದಲ್ಲಿ ಜನರನ್ನು ಕರೆದುಕೊಂಡು ಹೋಗುವದು ಅಪರಾಧÜವಾಗಿದ್ದು ಅಂತಹ ವಾಹನಗಳ ಮಾಲಿಕರ ಮೇಲೆ ಕಾನೂನು ಕ್ರಮ ಕೈಕೊಳ್ಳಲಾಗುವುದೆಂದು ಅಳ್ನಾವರ ಪಿಎಸ್‌ಐ ಅನಿಲಕುಮಾರ ಹೇಳಿದರು.

Vijaya Karnataka 18 Jul 2019, 5:00 am
ಅಳ್ನಾವರ : ಸರಕು ಸಾಗಣೆ ವಾಹನದಲ್ಲಿ ಜನರನ್ನು ಕರೆದುಕೊಂಡು ಹೋಗುವದು ಅಪರಾಧÜವಾಗಿದ್ದು ಅಂತಹ ವಾಹನಗಳ ಮಾಲಿಕರ ಮೇಲೆ ಕಾನೂನು ಕ್ರಮ ಕೈಕೊಳ್ಳಲಾಗುವುದೆಂದು ಅಳ್ನಾವರ ಪಿಎಸ್‌ಐ ಅನಿಲಕುಮಾರ ಹೇಳಿದರು.
Vijaya Karnataka Web DRW-17 ALN 1

ಅಳ್ನಾವರ ಪೋಲಿಸ ಠಾಣೆಯ ವತಿಯಿಂದ ಆಯೋಜಿಸಿದ್ದ ವಾಹನ ಚಾಲಕರಿಗೆ ಜಾಗೃತಿ ಕಾರ್ಯಕ್ರಮ ನಡೆಯಿತು.


ಅಳ್ನಾವರ ಠಾಣೆ ವತಿಯಿಂದ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಸುವುದು ಸುರಕ್ಷಿತವಲ್ಲ ಅಪಘಾತ ನಡೆದ ಸಂದರ್ಭದಲ್ಲಿ ಯಾವುದೆ ಪರಿಹಾರ ದೊರೆಯುವುದಿಲ್ಲ .ಇದರ ಬಗ್ಗೆ ಜನರು ಅರಿತುಕೊಳ್ಳಬೇಕೆಂದರು.

ನಿಗದಿತ ಸಂಖ್ಯೆಗಿಂತ ಅಧಿಕ ಜನರು ಪ್ರಯಾಣಿಸುವುದು ಕಂಡು ಬರುತ್ತಿದ್ದು ಪರವಾನಗಿ ಪಡೆದ ಸಂಖ್ಯೆಯಷ್ಟೆ ಜನರನ್ನು ವಾಹನಗಳಲ್ಲಿ ಹತ್ತಿಸಿಕೊಳ್ಳಬೇಕು. ಇದರ ಬಗ್ಗೆ ವಾಹನ ಮಾಲಕರು ಚಾಲಕರು ನಿಗಾ ವಹಿಸಿಕೊಳ್ಳಬೇಕೆಂದರು. ಸರಕು ವಾಹನದಲ್ಲಿ ಜನರನ್ನು ಕರೆದುಕೊಂಡು ಹೋಗುವ ವಾಹನಗಳ ಪರವಾನಗಿ ರದ್ದು ಮಾಡಲು ಅವಕಾಶವಿದ್ದು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವ ಚಾಲಕರ ಚಾಲನಾ ಪರವಾನಗಿಯನ್ನು ಸಹ ರದ್ದು ಪಡಿಸಲಾಗುವುದೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಖಾಸಗಿ ವಾಹನಗಳ ಚಾಲಕರು ಮಾಲಕರು ಪಾಲ್ಗೊಂಡಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ