ವಿಜಯ್ ಹೂಗಾರ
ಹುಬ್ಬಳ್ಳಿ :ರಾಜ್ಯದಲ್ಲಿ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಮುಂಗಾರಿನಲ್ಲಿ ಏರುಪೇರಾದರೆ ಜೂ.15 ರಿಂದ 20ರ ಅವಧಿಯಲ್ಲಿ ಮೋಡ ಬಿತ್ತನೆ ಮಾಡುವುದಾಗಿ ಹೇಳಿದ್ದರೂ ರಾಜ್ಯ ಸರಕಾರ ಈವರೆಗೂ ಆರಂಭಿಸಿಲ್ಲ.
ಮೇ 20 ರಿಂದ ಜು.15ರ ವರೆಗಿನ ಮುಂಗಾರು ಬಿತ್ತನೆ ಅವಧಿ ಆಗಲೇ ಅರ್ಧದಷ್ಟು ಮುಗಿದಿದೆ. ಈ ನಡುವೆ ಜುಲೈ ಮೊದಲ ವಾರದಲ್ಲಿ ಮೋಡಬಿತ್ತನೆ ಮಾಡುವುದಾಗಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಜೂ.19 ರಂದು ಹೇಳಿದ್ದಾರೆ. ಮುಂಗಾರು ಹಂಗಾಮು ಮುಕ್ತಾಯದ ಹಂತದಲ್ಲಿ ಮೋಡಬಿತ್ತನೆ ಮಾಡಿದರೆ ಏನು ಪ್ರಯೋಜನ ಎಂಬುದು ರೈತರ ಪ್ರಶ್ನೆಯಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ವಾಡಿಕೆಗಿಂತ ಬಹಳಷ್ಟು ಕಡಿಮೆ ಮುಂಗಾರು ಮಳೆಯಾಗಿದೆ. ಮೇ ನಲ್ಲಿ 69 ಮೀ.ಮೀ ಮಳೆ ಕೊರತೆಯಾಗಿದ್ದರೆ, ಜೂನ್ನಲ್ಲಿ 31 ಮೀ.ಮೀ ಮಳೆ ಕೊರತೆಯಾಗಿದೆ. ಹೀಗಾಗಿ ಮುಂಗಾರು ಹಂಗಾಮಿನಲ್ಲಿ ಬೆಳೆಯಲಾಗುತ್ತಿದ್ದ ಹೆಸರು, ಉದ್ದು ಬೆಳೆಗಳ ಬಿತ್ತನೆ ಅವಧಿ ಮುಗಿದಿದೆ. ಇನ್ನೂ ಅವುಗಳನ್ನು ಬಿತ್ತಿದರೂ ಪ್ರಯೋಜನವಾಗುವುದಿಲ್ಲ. ಶೇಂಗಾ, ಸೋಯಾಬಿನ್, ಮೆಕ್ಕೆಜೋಳ, ಆಲೂಗೆಡ್ಡೆ, ಈರುಳ್ಳಿ, ಹತ್ತಿಯಂತಹ ಬೆಳೆಗಳ ಬಿತ್ತನೆಗೆ ಮಾತ್ರ ಜು.15ರ ವರೆಗೆ ಕಾಲಾವಕಾಶವಿದೆ. ಅಷ್ಟರೊಳಗೆ ಮಳೆ ಬಾರದಿದ್ದರೆ ಮುಂಗಾರು ಹಂಗಾಮು ಮುಗಿದು ಹೋಗುತ್ತದೆ.
ಇಂತಹದರಲ್ಲಿ ಮುಂಗಾರು ಮಳೆ ರಾಜ್ಯದ ಒಳನಾಡು ಪ್ರದೇಶಗಳಿಗೆ ಪ್ರವೇಶಿಸಲು ಇನ್ನೂ ಎಂಟು ದಿನ ಬೇಕು ಎನ್ನುವ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ಮುಂಗಾರು ಮಳೆ ಅನಿಶ್ಚಿತತೆ ಮುಂದುವರೆದಿದ್ದರೂ, ರಾಜ್ಯ ಸರಕಾರ ಮೋಡಬಿತ್ತನೆ ಟೆಂಡರ್ ನೀಡಿದ್ದರೂ ಅದನ್ನು ಅನುಷ್ಠಾನಗೊಳಿಸಲು ವಿಳಂಬ ಅನುಸರಿಸುತ್ತಿರುವುದು ಏಕೆ ಎಂಬ ಪ್ರಶ್ನೆ ರೈತ ವಲಯವನ್ನು ಕಾಡುತ್ತಿದೆ.
ಮೋಡವಿದ್ದಾಗ ಹೆಚ್ಚು ಪ್ರಯೋಜನ:
ಮುಂಗಾರು ಕರಾವಳಿ ಪ್ರವೇಶ ಮಾಡಿದ್ದರಿಂದ ಉತ್ತರ ಒಳನಾಡಿನ ಭಾಗದಲ್ಲಿ ಆಗಾಗ ದಟ್ಟ ಮೋಡಗಳು ಕಾಣಿಸಿಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಮೋಡ ಬಿತ್ತನೆ ಮಾಡಿದರೆ, ಮಳೆಯಾದರೂ ಬಂದು ರೈತರಿಗೆ ಅನುಕೂಲವಾಗುತ್ತದೆ. ಆದರೆ, ಅದನ್ನು ಬಿಟ್ಟು ಪದೇ ಪದೆ ಮೋಡಬಿತ್ತನೆ ಕಾರ್ಯವನ್ನು ಮುಂದೆ ಹಾಕುತ್ತಿರುವ ರಾಜ್ಯ ಸರಕಾರದ ಉದ್ದೇಶ ಅರ್ಥವಾಗುತ್ತಿಲ್ಲ. ಈ ಮೋಡ ಬಿತ್ತನೆ ಯೋಜನೆಯನ್ನು ರೈತರ ಅನುಕೂಲಕ್ಕಾಗಿಯೋ ಅಥವಾ ಟೆಂಡರ್ದಾರರ ಅನುಕೂಲಕ್ಕಾಗಿ ಮಾಡುತ್ತಿದ್ದಾರೆಯೋ ಎನ್ನುವ ಸಂಶಯವೂ ಮೂಡುತ್ತಿದೆ ಎನ್ನುತ್ತಾರೆ ರೈತ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಜು ಕಲಕೋಟಿ.
ಜುಲೈನಲ್ಲಿ ಮೋಡ ಬಿತ್ತನೆ ಆರಂಭಿಸುವುದಕ್ಕಿಂತ ಮೊದಲು ನಿಗದಿ ಮಾಡಿದಂತೆ ಜೂ.20ಕ್ಕೆ ಆರಂಭಿಸಬೇಕು. ಇಲ್ಲವಾದರೆ, ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಮೋಡಬಿತ್ತನೆಯಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ. ಕೂಡಲೇ ರಾಜ್ಯ ಸರಕಾರ ತನ್ನ ನಿರ್ಧಾರವನ್ನು ಮರು ಪರಿಶೀಲನೆ ಮಾಡಬೇಕು ಎಂಬುದು ರೈತರ ಒತ್ತಾಯವಾಗಿದೆ.
ಕಳೆದ ಬಾರಿಯ ಪ್ರಯತ್ನದಿಂದ ಶೇ.28 ಹೆಚ್ಚು ಮಳೆಯಾಗಿದೆ ಎಂದು ತಜ್ಞರ ಸಮಿತಿ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಎರಡು ಹಂಗಾಮನ್ನು ಲಕ್ಷ ್ಯದಲ್ಲಿಟ್ಟುಕೊಂಡು 88 ಕೋಟಿ ರೂ. ವೆಚ್ಚದಲ್ಲಿ ಮೋಡಬಿತ್ತನೆಯನ್ನು ಸರಕಾರ ನಡೆಸಲು ನಿರ್ಧರಿಸಿದೆ. ಬೆಂಗಳೂರು ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ 3 ತಿಂಗಳು ಎರಡು ವಿಮಾನ ಹಾರಾಟ ನಡೆಸಿ ಮೋಡಬಿತ್ತನೆ ಕಾರ್ಯ ನಡೆಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ತಿಳಿಸಿದೆ.
ಜು.15 ರೊಳಗೆ ಮಳೆ ಬರದಿದ್ದರೆ ಮುಂಗಾರು ಕೈಕೊಟ್ಟಂತೆ
ಜನವರಿ- ಜೂನ್ ವರೆಗೆ ವಾಡಿಕೆ ಮಳೆ 203 ಮಿ.ಮೀ ಇದ್ದು, 139 ಮಿ.ಮೀ ಬಿದ್ದಿದೆ. 69 ಮಿ.ಮೀ ಕೊರತೆಯಾಗಿದೆ. ಇನ್ನು ಮೇ ತಿಂಗಳೊಂದರಲ್ಲಿಯೇ 84.06 ವಾಡಿಕೆ ಮಳೆ ಇದ್ದು, 33.07 ಮಿ.ಮೀ ಮಳೆಯಾಗಿದೆ. ಒಟ್ಟು 60 ಮಿ.ಮೀ ಕೊರತೆಯಾಗಿದೆ. ಮೇ ತಿಂಗಳಲ್ಲಿ ಸುರಿದ ಮಳೆಯೇ ಮುಂಗಾರು ಬಿತ್ತನೆಗೆ ಮುಖ್ಯ. ಈ ಅವಧಿಯಲ್ಲಿ ತುಂಬ ಕಡಿಮೆ ಮಳೆ ಸುರಿದಿದೆ. ಕೆಲ ಬೆಳೆಗಳನ್ನು ಜು.15ರ ವರೆಗೆ ಬಿತ್ತನೆ ಮಾಡಬಹುದಾಗಿದ್ದು, ಅಲ್ಲಿವರೆಗೆ ಮಳೆ ಆಗದಿದ್ದರೆ ಬಹುತೇಕ ಮುಂಗಾರು ಕೈಕೊಟ್ಟಂತಾಗುತ್ತದೆ. ಜು.15ರ ವರೆಗೆ ಶೇಂಗಾ, ಸೋಯಾಬಿನ್, ಮೆಕ್ಕೆಜೋಳ, ಆಲೂಗೆಡ್ಡೆ, ಈರುಳ್ಳಿ, ಹತ್ತಿಯಂತಹ ಬೆಳೆಗಳನ್ನು ಬಿತ್ತನೆ ಮಾಡಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ತಿಳಿಸಿದ್ದಾರೆ.
ಹುಬ್ಬಳ್ಳಿ :ರಾಜ್ಯದಲ್ಲಿ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಮುಂಗಾರಿನಲ್ಲಿ ಏರುಪೇರಾದರೆ ಜೂ.15 ರಿಂದ 20ರ ಅವಧಿಯಲ್ಲಿ ಮೋಡ ಬಿತ್ತನೆ ಮಾಡುವುದಾಗಿ ಹೇಳಿದ್ದರೂ ರಾಜ್ಯ ಸರಕಾರ ಈವರೆಗೂ ಆರಂಭಿಸಿಲ್ಲ.
ಮೇ 20 ರಿಂದ ಜು.15ರ ವರೆಗಿನ ಮುಂಗಾರು ಬಿತ್ತನೆ ಅವಧಿ ಆಗಲೇ ಅರ್ಧದಷ್ಟು ಮುಗಿದಿದೆ. ಈ ನಡುವೆ ಜುಲೈ ಮೊದಲ ವಾರದಲ್ಲಿ ಮೋಡಬಿತ್ತನೆ ಮಾಡುವುದಾಗಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಜೂ.19 ರಂದು ಹೇಳಿದ್ದಾರೆ. ಮುಂಗಾರು ಹಂಗಾಮು ಮುಕ್ತಾಯದ ಹಂತದಲ್ಲಿ ಮೋಡಬಿತ್ತನೆ ಮಾಡಿದರೆ ಏನು ಪ್ರಯೋಜನ ಎಂಬುದು ರೈತರ ಪ್ರಶ್ನೆಯಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ವಾಡಿಕೆಗಿಂತ ಬಹಳಷ್ಟು ಕಡಿಮೆ ಮುಂಗಾರು ಮಳೆಯಾಗಿದೆ. ಮೇ ನಲ್ಲಿ 69 ಮೀ.ಮೀ ಮಳೆ ಕೊರತೆಯಾಗಿದ್ದರೆ, ಜೂನ್ನಲ್ಲಿ 31 ಮೀ.ಮೀ ಮಳೆ ಕೊರತೆಯಾಗಿದೆ. ಹೀಗಾಗಿ ಮುಂಗಾರು ಹಂಗಾಮಿನಲ್ಲಿ ಬೆಳೆಯಲಾಗುತ್ತಿದ್ದ ಹೆಸರು, ಉದ್ದು ಬೆಳೆಗಳ ಬಿತ್ತನೆ ಅವಧಿ ಮುಗಿದಿದೆ. ಇನ್ನೂ ಅವುಗಳನ್ನು ಬಿತ್ತಿದರೂ ಪ್ರಯೋಜನವಾಗುವುದಿಲ್ಲ. ಶೇಂಗಾ, ಸೋಯಾಬಿನ್, ಮೆಕ್ಕೆಜೋಳ, ಆಲೂಗೆಡ್ಡೆ, ಈರುಳ್ಳಿ, ಹತ್ತಿಯಂತಹ ಬೆಳೆಗಳ ಬಿತ್ತನೆಗೆ ಮಾತ್ರ ಜು.15ರ ವರೆಗೆ ಕಾಲಾವಕಾಶವಿದೆ. ಅಷ್ಟರೊಳಗೆ ಮಳೆ ಬಾರದಿದ್ದರೆ ಮುಂಗಾರು ಹಂಗಾಮು ಮುಗಿದು ಹೋಗುತ್ತದೆ.
ಇಂತಹದರಲ್ಲಿ ಮುಂಗಾರು ಮಳೆ ರಾಜ್ಯದ ಒಳನಾಡು ಪ್ರದೇಶಗಳಿಗೆ ಪ್ರವೇಶಿಸಲು ಇನ್ನೂ ಎಂಟು ದಿನ ಬೇಕು ಎನ್ನುವ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ಮುಂಗಾರು ಮಳೆ ಅನಿಶ್ಚಿತತೆ ಮುಂದುವರೆದಿದ್ದರೂ, ರಾಜ್ಯ ಸರಕಾರ ಮೋಡಬಿತ್ತನೆ ಟೆಂಡರ್ ನೀಡಿದ್ದರೂ ಅದನ್ನು ಅನುಷ್ಠಾನಗೊಳಿಸಲು ವಿಳಂಬ ಅನುಸರಿಸುತ್ತಿರುವುದು ಏಕೆ ಎಂಬ ಪ್ರಶ್ನೆ ರೈತ ವಲಯವನ್ನು ಕಾಡುತ್ತಿದೆ.
ಮೋಡವಿದ್ದಾಗ ಹೆಚ್ಚು ಪ್ರಯೋಜನ:
ಮುಂಗಾರು ಕರಾವಳಿ ಪ್ರವೇಶ ಮಾಡಿದ್ದರಿಂದ ಉತ್ತರ ಒಳನಾಡಿನ ಭಾಗದಲ್ಲಿ ಆಗಾಗ ದಟ್ಟ ಮೋಡಗಳು ಕಾಣಿಸಿಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಮೋಡ ಬಿತ್ತನೆ ಮಾಡಿದರೆ, ಮಳೆಯಾದರೂ ಬಂದು ರೈತರಿಗೆ ಅನುಕೂಲವಾಗುತ್ತದೆ. ಆದರೆ, ಅದನ್ನು ಬಿಟ್ಟು ಪದೇ ಪದೆ ಮೋಡಬಿತ್ತನೆ ಕಾರ್ಯವನ್ನು ಮುಂದೆ ಹಾಕುತ್ತಿರುವ ರಾಜ್ಯ ಸರಕಾರದ ಉದ್ದೇಶ ಅರ್ಥವಾಗುತ್ತಿಲ್ಲ. ಈ ಮೋಡ ಬಿತ್ತನೆ ಯೋಜನೆಯನ್ನು ರೈತರ ಅನುಕೂಲಕ್ಕಾಗಿಯೋ ಅಥವಾ ಟೆಂಡರ್ದಾರರ ಅನುಕೂಲಕ್ಕಾಗಿ ಮಾಡುತ್ತಿದ್ದಾರೆಯೋ ಎನ್ನುವ ಸಂಶಯವೂ ಮೂಡುತ್ತಿದೆ ಎನ್ನುತ್ತಾರೆ ರೈತ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಜು ಕಲಕೋಟಿ.
ಜುಲೈನಲ್ಲಿ ಮೋಡ ಬಿತ್ತನೆ ಆರಂಭಿಸುವುದಕ್ಕಿಂತ ಮೊದಲು ನಿಗದಿ ಮಾಡಿದಂತೆ ಜೂ.20ಕ್ಕೆ ಆರಂಭಿಸಬೇಕು. ಇಲ್ಲವಾದರೆ, ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಮೋಡಬಿತ್ತನೆಯಿಂದ ಹೆಚ್ಚು ಪ್ರಯೋಜನವಾಗುವುದಿಲ್ಲ. ಕೂಡಲೇ ರಾಜ್ಯ ಸರಕಾರ ತನ್ನ ನಿರ್ಧಾರವನ್ನು ಮರು ಪರಿಶೀಲನೆ ಮಾಡಬೇಕು ಎಂಬುದು ರೈತರ ಒತ್ತಾಯವಾಗಿದೆ.
ಕಳೆದ ಬಾರಿಯ ಪ್ರಯತ್ನದಿಂದ ಶೇ.28 ಹೆಚ್ಚು ಮಳೆಯಾಗಿದೆ ಎಂದು ತಜ್ಞರ ಸಮಿತಿ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಎರಡು ಹಂಗಾಮನ್ನು ಲಕ್ಷ ್ಯದಲ್ಲಿಟ್ಟುಕೊಂಡು 88 ಕೋಟಿ ರೂ. ವೆಚ್ಚದಲ್ಲಿ ಮೋಡಬಿತ್ತನೆಯನ್ನು ಸರಕಾರ ನಡೆಸಲು ನಿರ್ಧರಿಸಿದೆ. ಬೆಂಗಳೂರು ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ 3 ತಿಂಗಳು ಎರಡು ವಿಮಾನ ಹಾರಾಟ ನಡೆಸಿ ಮೋಡಬಿತ್ತನೆ ಕಾರ್ಯ ನಡೆಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ತಿಳಿಸಿದೆ.
ಜು.15 ರೊಳಗೆ ಮಳೆ ಬರದಿದ್ದರೆ ಮುಂಗಾರು ಕೈಕೊಟ್ಟಂತೆ
ಜನವರಿ- ಜೂನ್ ವರೆಗೆ ವಾಡಿಕೆ ಮಳೆ 203 ಮಿ.ಮೀ ಇದ್ದು, 139 ಮಿ.ಮೀ ಬಿದ್ದಿದೆ. 69 ಮಿ.ಮೀ ಕೊರತೆಯಾಗಿದೆ. ಇನ್ನು ಮೇ ತಿಂಗಳೊಂದರಲ್ಲಿಯೇ 84.06 ವಾಡಿಕೆ ಮಳೆ ಇದ್ದು, 33.07 ಮಿ.ಮೀ ಮಳೆಯಾಗಿದೆ. ಒಟ್ಟು 60 ಮಿ.ಮೀ ಕೊರತೆಯಾಗಿದೆ. ಮೇ ತಿಂಗಳಲ್ಲಿ ಸುರಿದ ಮಳೆಯೇ ಮುಂಗಾರು ಬಿತ್ತನೆಗೆ ಮುಖ್ಯ. ಈ ಅವಧಿಯಲ್ಲಿ ತುಂಬ ಕಡಿಮೆ ಮಳೆ ಸುರಿದಿದೆ. ಕೆಲ ಬೆಳೆಗಳನ್ನು ಜು.15ರ ವರೆಗೆ ಬಿತ್ತನೆ ಮಾಡಬಹುದಾಗಿದ್ದು, ಅಲ್ಲಿವರೆಗೆ ಮಳೆ ಆಗದಿದ್ದರೆ ಬಹುತೇಕ ಮುಂಗಾರು ಕೈಕೊಟ್ಟಂತಾಗುತ್ತದೆ. ಜು.15ರ ವರೆಗೆ ಶೇಂಗಾ, ಸೋಯಾಬಿನ್, ಮೆಕ್ಕೆಜೋಳ, ಆಲೂಗೆಡ್ಡೆ, ಈರುಳ್ಳಿ, ಹತ್ತಿಯಂತಹ ಬೆಳೆಗಳನ್ನು ಬಿತ್ತನೆ ಮಾಡಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ತಿಳಿಸಿದ್ದಾರೆ.