ಆ್ಯಪ್ನಗರ

ಸ್ಕ್ಯಾ‌ನ್‌ ಸೌಲಭ್ಯವೇ ಇಲ್ಲ !

ಧಾರವಾಡ : ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಿನನಿತ್ಯ ಸಾವಿರಾರು ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಇಲ್ಲಿ ಗಂಭೀರ ರೋಗಗಳನ್ನು ಪತ್ತೆ ಹಚ್ಚಲು ಅನುಕೂಲವಾಗುವ ಸ್ಕ್ಯಾ‌ನಿಂಗ್‌ ಸೌಲಭ್ಯವೇ ಇಲ್ಲದಿರುವುದು ಜನರಲ್ಲಿ ಬೇಸರ ಮೂಡಿಸಿದೆ.

Vijaya Karnataka 27 Feb 2019, 5:00 am
ಧಾರವಾಡ : ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಿನನಿತ್ಯ ಸಾವಿರಾರು ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಇಲ್ಲಿ ಗಂಭೀರ ರೋಗಗಳನ್ನು ಪತ್ತೆ ಹಚ್ಚಲು ಅನುಕೂಲವಾಗುವ ಸ್ಕ್ಯಾ‌ನಿಂಗ್‌ ಸೌಲಭ್ಯವೇ ಇಲ್ಲದಿರುವುದು ಜನರಲ್ಲಿ ಬೇಸರ ಮೂಡಿಸಿದೆ.
Vijaya Karnataka Web DRW-26RANGA02
ಧಾರವಾಡ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಮರೀಚಿಕೆ ಆಗಿರುವುದು.


ಜಿಲ್ಲೆಯ ವಿವಿಧ ತಾಲೂಕುಗಳಿಂದ ದಿನಕ್ಕೆ 1500-1700ರ ರೋಗಿಗಳು ಜಿಲ್ಲಾ ಆಸ್ಪತ್ರೆಗೆ ಬರುತ್ತಾರೆ. ಆದರೆ ಎಂಆರ್‌ಐ ಸ್ಕ್ಯಾ‌ನರ್‌ ಇಲ್ಲಿಲ್ಲದಾಗಿದ್ದು, ಸಿಟಿ ಸ್ಕ್ಯಾ‌ನ್‌ ಇದ್ದೂ ಇಲ್ಲದಂತಾಗಿದೆ. ಹೀಗಾಗಿ ಆಸ್ಪತ್ರೆಗೆ ಬರುವ ಜನರು ಖಾಸಗಿ ಸ್ಕ್ಯಾ‌ನ್‌ ಸೆಂಟರ್‌ ಮೊರೆ ಹೋಗುವ ಜತೆಗೆ ಉಚಿತ ಚಿಕಿತ್ಸಾ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.

ದಟ್ಟಣೆಯಿಂದ ಒತ್ತಡ

ಕೆಲ ಮೂಲಸೌಕರ್ಯಗಳ ಕೊರತೆಯಿಂದಾಗಿ ದಿನನಿತ್ಯ ಬರುವ ಸಾವಿರಾರು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನಿಡಲು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆ ಹಂತ ಹಂತವಾಗಿ ಮೇಲ್ದರ್ಜೆಗೇರುತ್ತಿದ್ದರೂ ತುರ್ತು ಚಿಕಿತ್ಸೆಗೆ ಬೇಕಾದ ಸೌಲತ್ತು ಇಲ್ಲದೇ ರೋಗಿಗಳನ್ನು ಕಿಮ್ಸ್‌ ಆಸ್ಪತ್ರೆಗೆ ರವಾನಿಸುತ್ತಿರುವುದು ಇಲ್ಲಿ ಇನ್ನೂ ಹಲವು ಸೌಲಭ್ಯಗಳು ಬೇಕು ಎಂಬುದಕ್ಕೆ ಪುಷ್ಟಿ ನೀಡುತ್ತದೆ.

ಜನಸಂಖ್ಯೆಗೆ ಅನುಗುಣವಾಗಿ ಜಿಲ್ಲೆಯಲ್ಲಿ ಆರೋಗ್ಯ ಕೇಂದ್ರಗಳಿವೆ. ಆದರೆ ರೋಗಿಗಳು ಮಾತ್ರ ಜಿಲ್ಲಾ ಕೇಂದ್ರದತ್ತ ಮುಖಮಾಡುತ್ತಿದ್ದಾರೆ. (ಉದಾ:ಹೆರಿಗೆ ಸೇರಿದಂತೆ ಇತರ ಹೆಚ್ಚಿನ ಚಿಕಿತ್ಸೆಗಳಿಗೆ). ಹೀಗಾಗಿ ಕೆಲ ಸಂದರ್ಭ ಬೆಡ್‌ಗಳಿಲ್ಲದೇ ಬಾಣಂತಿಯರು ಹಾಗೂ ಸಾಮಾನ್ಯ ರೋಗಿಗಳು ನೆಲದ ಮೇಲೆ ಮಲಗಿದ ಉದಾಹರಣೆಗಳಿವೆ.

ಸದ್ಯ 100 ಬೆಡ್‌ಗಳ ನೂತನ ಕಟ್ಟಡದ ಕಾಮಗಾರಿ ಆರಂಭವಾಗಿದ್ದು, ಅದು ಪೂರ್ಣಗೊಂಡ ನಂತರ ಬೆಡ್‌ ಸಮಸ್ಯೆ ಮುಕ್ತಿ ಕಾಣಲಿದೆ ಎಂಬ ನಿರೀಕ್ಷೆ ರೋಗಿಗಳದ್ದಾಗಿದೆ. ಸಂಬಂಧಪಟ್ಟ ವೈದ್ಯಾಧಿಕಾರಿಗಳು, ಜನಪ್ರತಿನಿಧಿಗಳು ಜಿಲ್ಲಾ ಆಸ್ಪತ್ರೆಯ ಅಭಿವೃದ್ಧಿಗೆ ಹೆಚ್ಚಿನ ಮುತುವರ್ಜಿ ವಹಿಸಿ, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಸರಕಾರದಿಂದ ಪಡೆದು ಈ ಭಾಗದ ರೋಗಿಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕಿದೆ.

ಸ್ವಚ್ಛತೆಯದ್ದೂ ಕಿರಿಕಿರಿ

ಆಸ್ಪತ್ರೆ ಆವರಣದಲ್ಲಿ ಮುರಿದು ಬಿದ್ದ ಹಳೆಯ ಕಬ್ಬಿಣದ ಕಾಟ್‌ಗಳು, ರೋಗಿಗಳನ್ನು ಸಾಗಿಸುವ ಸೈಕಲ್‌ಗಳು, ಬಂದ್‌ ಆಗಿರುವ ನೀರಿನ ಘಟಕ , ಚರಂಡಿ ತ್ಯಾಜ್ಯ ಆಸ್ಪತ್ರೆಯ ಅವ್ಯವಸ್ಥೆ ತೋರಿಸುತ್ತಿವೆ.

ಔಷಧ ಹೊರಗೆ ಬರಿತಾರೆ !

ಜಿಲ್ಲಾ ಆಸ್ಪತ್ರೆಯಲ್ಲಿ ಸರಕಾರದಿಂದ ಸಾಕಷ್ಟು ಪ್ರಮಾಣದ ಔಷಧ ಬಂದರೂ ಕೆಲವೊಮ್ಮೆ ಔಷಧಗಳನ್ನು ಹೊರಗೆ ತರುವಂತೆ ಬರೆದುಕೊಡಲಾಗುತ್ತದೆ ಎಂಬ ಆರೋಪಗಳು ಇವೆ. ಅಲ್ಲದೇ ಆಸ್ಪತ್ರೆಯ ಆವರಣದಲ್ಲಿಯೇ ಜನಔಷಧ ಕೇಂದ್ರ ಇದ್ದು ಅಲ್ಲಿ ಕೂಡಾ ವೈದ್ಯರು ಬರೆದುಕೊಟ್ಟು ಔಷಧ ದೊರೆಯುವುದಿಲ್ಲ ಎಂದು ಹೆಸರು ಹೆಳಲಿಚ್ಛಿಸದ ರೋಗಿಯೊಬ್ಬರು ಪತ್ರಿಕೆಗೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ