ಆ್ಯಪ್ನಗರ

ರಾಜ್ಯ ಸರಕಾರ ನಿಜಾಮರ ಉತ್ಸವ ಮಾಡಿದರೂ ಅಚ್ಚರಿ ಇಲ್ಲ: ಪ್ರಹ್ಲಾದ ಜೋಶಿ

ರಾಜ್ಯ ಸರಕಾರ ಮುಸ್ಲಿಮರ ಮತಗಳಿಗಾಗಿ ಟಿಪ್ಪು ಸುಲ್ತಾನ್, ಬಹಮನಿ ಉತ್ಸವ ಮಾಡುತ್ತಿದೆ. ಮುಂದೆ ಅವರು ಹೈದರಾಬಾದ್ ಕರ್ನಾಟಕ ಆಳಿದ ನಿಜಾಮನ ಉತ್ಸವ ಮಾಡಿದರೂ ಅಚ್ಚರಿ ಇಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ಕಿಡಿ ಕಾರಿದ್ದಾರೆ.

Vijaya Karnataka Web 19 Feb 2018, 4:01 pm
ಧಾರವಾಡ: ರಾಜ್ಯ ಸರಕಾರ ಮುಸ್ಲಿಮರ ಮತಗಳಿಗಾಗಿ ಟಿಪ್ಪು ಸುಲ್ತಾನ್, ಬಹಮನಿ ಉತ್ಸವ ಮಾಡುತ್ತಿದೆ. ಮುಂದೆ ಅವರು ಹೈದರಾಬಾದ್ ಕರ್ನಾಟಕ ಆಳಿದ ನಿಜಾಮನ ಉತ್ಸವ ಮಾಡಿದರೂ ಅಚ್ಚರಿ ಇಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ಕಿಡಿ ಕಾರಿದ್ದಾರೆ.
Vijaya Karnataka Web no wonder nizams festival is celebrated prahlad joshi
ರಾಜ್ಯ ಸರಕಾರ ನಿಜಾಮರ ಉತ್ಸವ ಮಾಡಿದರೂ ಅಚ್ಚರಿ ಇಲ್ಲ: ಪ್ರಹ್ಲಾದ ಜೋಶಿ


ಅವರು ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇವರಿಗೆ ಮತಾಂಧರ ಜಯಂತಿಯೇ ಮುಖ್ಯವಾಗಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಇಸ್ಪೀಟ್, ಮಟ್ಕಾ, ಓಸಿ, ಒಂದಂಕಿ ಲಾಟರಿ, ಗಾಂಜಾ ಹಾವಳಿ ಹೆಚ್ಚಾಗಿದೆ. ಬಿಜೆಪಿ ಆಡಳಿತದಲ್ಲಿ ರಾಜ್ಯ ಇಷ್ಟೊಂದು ಹದಗೆಟ್ಟಿರಲಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು ಧಾರವಾಡ ಜಿಲ್ಲೆಯಲ್ಲೂ ಕೂಡ ಅದು ಮೀತಿ ಮೀರಿದೆ. ಸಚಿವ ವಿನಯ ಕುಲಕರ್ಣಿ ಅವರು ಮನಬಂದಂತೆ ಹಗುರವಾಗಿ ಮಾತನಾಡುವುದನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಈ ಹಿಂದೆ ನಮ್ಮ ಬಿಜೆಪಿ ಸರ್ಕಾರ ಶಿವಾಜಿ ಜಯಂತಿಯನ್ನು ಅಧಿಕೃತವಾಗಿ ಘೋಷಿಸಿ ಆಚರಣೆ ಮಾಡಿದೆ. ಶಿವಾಜಿ ಆದರ್ಶ ಸಾರ್ವಕಾಲಿಕವಾಗಲಿದ್ದು, ಮತಾಂಧ ಇಸ್ಲಾಂ ಶಕ್ತಿಗಳ ಹಿಂಸಾಚಾರ, ಹಲ್ಲೆ ವಿರುದ್ಧ ಶಿವಾಜಿ ಹೋರಾಡಿದ್ದರು. ಸೈನ್ಯ ಕಟ್ಟಿ ಹಿಂದು ಸಮಾಜ ಕಟ್ಟಿದ್ದರು. ಅಂದು ಶಿವಾಜಿ ಇರಲಿಲ್ಲವೆಂದರೆ ಹಿಂದು ಸಾಮಾಜ್ಯ ಕಟ್ಟಲು ಸಾಧ್ಯವಿರಲಿಲ್ಲ ಎಂದು ಸಂಸದ ಜೋಶಿ ಅಭಿಪ್ರಾಯಪಟ್ಟರು.

ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನ ಪುಂಡಾಟಿಕೆ ಬಗ್ಗೆ ಮಾತನಾಡುತ್ತಾ, ರಾಜ್ಯ ಸರ್ಕಾರ ಯಾರಿಗೆ ರಕ್ಷಣೆ ಕೊಡುತ್ತಿದೆ ಎಂಬುದನ್ನು ನಾಡಿನ ಜನ ಅರಿತುಕೊಳ್ಳಬೇಕು. ಈ ಹಿಂದೆ ವಿಜಯಾನಂದ ಕಾಶಪ್ಪನವರ, ಜಾರ್ಜ್ ಮಗ ರಾಣಾ, ಹುಬ್ಬಳ್ಳಿಯ ಕಿಮ್ಸ್ ಮೇಲೆ ಹಲ್ಲೆ ಮಾಡಿದ ಸಚಿವ ವಿನಯ ಕುಲಕರ್ಣಿ ವಿರುದ್ಧ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗುಡುಗಿದರು.

ಕ್ರಿಮಿನಲ್‍ಗಳಿಗೆ ರಕ್ಷಣೆ ಮಾಡಲು ಅಣ್ಣಗಳಿದ್ದಾರೆ. ಅಣ್ಣಗಳ ರಕ್ಷಣೆ ಇರುವುದರಿಂದ ಗುಂಡಾಗಳಿಗೆ ಹಾಗೂ ರೌಡಿಗಳಿಗೆ ಪೊಲೀಸರ ಭಯವಿಲ್ಲದಂತಾಗಿದೆ ಎಂದು ಹೇಳಿದ ಜೋಶಿ, ರಾಜ್ಯದ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಅವರಿಗೆ ರಾಜಾಶ್ರಯ ಸಿಕ್ಕಿದೆ.

ಸಿದ್ದರಾಮಯ್ಯ ಕಂಪನಿ ಪಂಡಿತರಿಗೆ, ಕಲಾಕಾರರಿಗೆ ರಕ್ಷಣೆ ನೀಡಿದ ಮಾದರಿಯಲ್ಲಿಯೇ ಕ್ರಿಮಿನಲ್‍ಗಳ ರಕ್ಷಣೆ ಮಾಡುತ್ತಿದ್ದಾರೆ ಎಂದು ಆಪಾದಿಸಿದರು. ಇಲ್ಲದಿದ್ದರೆ ಅಪರಾಧ ಮಾಡಿ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆ ಸಿಕ್ಕರೂ ಈ ರೀತಿ ಬಚ್ಚಿಟ್ಟುಕೊಳ್ಳಲು ಸಾಧ್ಯವಿರಲಿಲ್ಲ. ಅಪರಾಧಿಗಳ ಹಿಡಿಯಲು ಪೊಲೀಸ್‍ರು ಕೂಡ ಅವರ ಒತ್ತಡದಿಂದಾಗಿ ಹಿಂದೇಟು ಹಾಕುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ