ಆ್ಯಪ್ನಗರ

ಇಲ್ಲಿ ಯಾರೂ ಬೆಗ್ಗರ್ಸ್‌ ಅಲ್ಲ-ಸಿಎಂಗೆ ಎಂಬಿಪಿ ತಿರುಗೇಟು

ಹುಬ್ಬಳ್ಳಿ : ಕಾಂಗ್ರೆಸ್‌ನವರು ಜೆಡಿಎಸ್‌ ಪಕ್ಷದವರನ್ನು ಬೆಗ್ಗರ್ಸ್‌ (ಭಿಕ್ಷಕರು) ಎಂದುಕೊಂಡಿಲ್ಲ. ಇಲ್ಲಿ ಯಾರೂ ಬೆಗ್ಗರ್ಸ್‌ ಅಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ಅವರು ಸಿಎಂ ಕುಮಾರಸ್ವಾಮಿಗೆ ಟಾಂಗ್‌ ನೀಡಿದ್ದಾರೆ.

Vijaya Karnataka 20 Feb 2019, 5:00 am
ಹುಬ್ಬಳ್ಳಿ : ಕಾಂಗ್ರೆಸ್‌ನವರು ಜೆಡಿಎಸ್‌ ಪಕ್ಷದವರನ್ನು ಬೆಗ್ಗರ್ಸ್‌ (ಭಿಕ್ಷಕರು) ಎಂದುಕೊಂಡಿಲ್ಲ. ಇಲ್ಲಿ ಯಾರೂ ಬೆಗ್ಗರ್ಸ್‌ ಅಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ಅವರು ಸಿಎಂ ಕುಮಾರಸ್ವಾಮಿಗೆ ಟಾಂಗ್‌ ನೀಡಿದ್ದಾರೆ.
Vijaya Karnataka Web nobody here is belgars cm mbp
ಇಲ್ಲಿ ಯಾರೂ ಬೆಗ್ಗರ್ಸ್‌ ಅಲ್ಲ-ಸಿಎಂಗೆ ಎಂಬಿಪಿ ತಿರುಗೇಟು


ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ''ರಾಜ್ಯದಲ್ಲಿ ಸಮ್ಮಿಶ್ರ ಸರಕಾರವಿದೆ. ಕೊಡುವುದು, ತೆಗೆದುಕೊಳ್ಳುವುದಿದೆ. ಈ ಬಗ್ಗೆ ಪಕ್ಷ ದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಹೀಗಾಗಿ ಯಾರಿಗೂ ಯಾರು ಬೆಗ್ಗರ್ಸ್‌ ಅಲ್ಲ. ಸಿಎಂ ಕುಮಾರಸ್ವಾಮಿ ಭಾವೋದ್ವೇಗದಲ್ಲಿ ಈ ಮಾತು ಹೇಳಿರಬೇಕು'' ಎಂದರು.

ಶಾಸಕ ಸಿ.ಟಿ.ರವಿ ಕಾರು ಅಪಘಾತ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಪಾಟೀಲ, ''ರವಿ ಅವರು ಕಾರು ಚಲಾಯಿಸುತಿದ್ದರೋ ಇಲ್ಲ ಎಂಬುದು ತನಿಖೆ ಆಗಬೇಕಿದೆ. ಈಗಾಗಲೇ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು'' ಎಂದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ