ಆ್ಯಪ್ನಗರ

ಆಡಿಟ್‌ ವರದಿ ಅನುಷ್ಠಾನಕ್ಕೆ ಸೂಚನೆ

ಧಾರವಾಡ: 2014-15 ರಿಂದ 2018-19ರ ಅವಧಿಯಲ್ಲಿರಸ್ತೆ ಸುರಕ್ಷತೆ ಕುರಿತು ಜಿಲ್ಲಾರಸ್ತೆ ಸುರಕ್ಷತಾ ಸಮಿತಿ ಪಾಲುದಾರ ಇಲಾಖೆಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಮಹಾಲೇಖಪಾಲರು ಲೆಕ್ಕಪರಿಶೋಧನೆ ನಡೆಸಿ ನೀಡಿರುವ ಸಲಹೆಗಳನ್ನು ಸಂಬಂಧಿಸಿದ ಇಲಾಖೆಗಳು ಆದ್ಯತೆಯಡಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಎಂ. ಸೂಚಿಸಿದರು.

Vijaya Karnataka 29 Dec 2019, 5:00 am
ಧಾರವಾಡ: 2014-15 ರಿಂದ 2018-19ರ ಅವಧಿಯಲ್ಲಿರಸ್ತೆ ಸುರಕ್ಷತೆ ಕುರಿತು ಜಿಲ್ಲಾರಸ್ತೆ ಸುರಕ್ಷತಾ ಸಮಿತಿ ಪಾಲುದಾರ ಇಲಾಖೆಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಮಹಾಲೇಖಪಾಲರು ಲೆಕ್ಕಪರಿಶೋಧನೆ ನಡೆಸಿ ನೀಡಿರುವ ಸಲಹೆಗಳನ್ನು ಸಂಬಂಧಿಸಿದ ಇಲಾಖೆಗಳು ಆದ್ಯತೆಯಡಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಎಂ. ಸೂಚಿಸಿದರು.
Vijaya Karnataka Web notice for implementation of audit report
ಆಡಿಟ್‌ ವರದಿ ಅನುಷ್ಠಾನಕ್ಕೆ ಸೂಚನೆ


ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಶುಕ್ರವಾರ ನಡೆದ ಲೆಕ್ಕಪರಿಶೋಧನಾ ವಿಚಾರಣಾ ಕಾರ್ಯ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಸ್ತೆ ಸುರಕ್ಷತಾ ಸಮಿತಿಯ ಪ್ರಮುಖ ಪಾಲುದಾರ ಇಲಾಖೆಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್‌, ಲೋಕೋಪಯೋಗಿ, ಸಾರಿಗೆ, ಕಂದಾಯ ಇಲಾಖೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗಗಳು ಕೈಗೊಳ್ಳಬೇಕಾದ ಕ್ರಮಗಳನ್ನು ನಿಯಮಾನುಸಾರ ತಕ್ಷಣ ಅನುಷ್ಠಾನಗೊಳಿಸಬೇಕು. ಮಹಾಲೇಖಪಾಲರ ಕಚೇರಿಯ ಹಿರಿಯ ಲೆಕ್ಕ ಪರಿಶೋಧನಾಧಿಕಾರಿಗಳಿಗೆ ತ್ವರಿತವಾಗಿ ಮಾಹಿತಿ ನೀಡಬೇಕೆಂದು ಸೂಚಿಸಿದರು.

ಹಿರಿಯ ಲೆಕ್ಕ ಪರಿಶೋಧನಾಧಿಕಾರಿ ಶಂಕರನಾರಾಯಣ ಮಾತನಾಡಿ, ಎಲ್ಲರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಬಳಿ ಟ್ರೌಮಾ ಕೇರ್‌ ಸೆಂಟರ್‌ ಲಭ್ಯತೆ ಕುರಿತ ಮಾಹಿತಿ ಪ್ರಯಾಣಿಕರಿಗೆ ಸಿಗಬೇಕು. ಪೊಲೀಸ್‌ ಇಲಾಖೆಯು ಗಸ್ತು ಕಾರ್ಯಕ್ಕಾಗಿ ಖರೀದಿಸಿರುವ ನಿಗದಿತ ವಾಹನಗಳಲ್ಲಿಯೇ ಗಸ್ತು ಕಾರ್ಯಕೈಗೊಂಡು ವಾಹನದ ಲಾಗ್‌ ಪುಸ್ತಕ ನಿರ್ವಹಿಸಿ, ಸಲ್ಲಿಸಬೇಕು. ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಂಟಿಯಾಗಿ ಸಮೀಕ್ಷೆ ನಡೆಸಿ ಬ್ಲ್ಯಾಕ್‌ ಸ್ಪಾಟ್‌ ಗಳಲ್ಲಿಅಪಘಾತ ತಡೆಯ ಕ್ರಮ ಕೈಗೊಳ್ಳಬೇಕು. ಜಿಲ್ಲಾರಸ್ತೆ ಸುರಕ್ಷತಾ ಸಮಿತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಕಡ್ಡಾಯವಾಗಿ ಕಾರ್ಯ ಪರಿಶೀಲನೆ ಮಾಡಬೇಕು ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಸಿ.ಡಿ.ನಾಯಕ್‌, ಅಪ್ಪಯ್ಯ ನಾಲತ್ವಾಡಮಠ, ಡಿವೈಎಸ್‌ಪಿ ಗುರು ಮತ್ತೂರ, ಸಂಚಾರ ವಿಭಾಗದ ಎಸಿಪಿ ಎಸ್‌.ಎಂ. ಸಂದಿಗವಾಡ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ್‌, ಡಾ. ಎಸ್‌.ಕೆ. ಮಾನಕರ್‌, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ವಿರೂಪಾಕ್ಷ ಯಮಕನಮರಡಿ, ಆರ್‌.ಕೆ. ಮಠದ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜಗದೀಶ ಯಲಿಗಾರ, ವಾಕರಸಾಸಂ ಡಿಟಿಓ ಅಶೋಕ ಪಾಟೀಲ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ