ಹುಬ್ಬಳ್ಳಿ: ಕೊರೊನಾ ವೈರಸ್ ಹರಡುವಿಕೆಯನ್ನು ತೆಡೆಗಟ್ಟಲು ಹು-ಧಾ ಮಹಾನಗರ ಪಾಲಿಕೆಯ ಬಿ, ಸಿ ಮತ್ತು ಡಿ ವರ್ಗದ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಬೇಕೆಂದು ಸರಕಾರ ಸುತ್ತೋಲೆ ಹೊರಡಿಸಿದೆ.
ಯಾವುದೇ ಕಾರಣಕ್ಕೂ ಅನಗತ್ಯ ರಜೆಗೆ ಅವಕಾಶ ನೀಡಬಾರದು. ಒಂದು ವೇಳೆ ಸಿಬ್ಬಂದಿ ವೈದ್ಯಕೀಯ ಹಿನ್ನೆಲೆಯಲ್ಲಿಕೆಲಸಕ್ಕೆ ವಿನಾಯಿತಿ ಕೇಳಿದರೆ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಸಾಮಾನ್ಯ ಆಡಳಿತ ವಿಭಾಗಕ್ಕೆ ಅಧಿಕಾರಿಗಳು ನೀಡಬೇಕು. ಅಲ್ಲದೆ, ಕರ್ತವ್ಯಕ್ಕೆ ಹಾಜರಾಗುವ ಗುರುತಿನ ಚೀಟಿ ಅವಶ್ಯವಿದ್ದರೆ, ಹಿರಿಯ ಅಧಿಕಾರಿಗಳ ರುಜುವಿನೊಂದಿಗೆ ನೀಡಬೇಕೆಂದು ಉಲ್ಲೇಖಿಸಲಾಗಿದೆ.
ಕರ್ತವ್ಯಕ್ಕೆ ಅನಗತ್ಯವಾಗಿ ಗೈರು ಹಾಜರಾಗುವ ಸಿಬ್ಬಂದಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿ, ಶಿಸ್ತು ಕ್ರಮಕೈಗೊಂಡು ಆಡಳಿತ ವಿಭಾಗಕ್ಕೆ ವರದಿ ನೀಡಬೇಕು. ಇದರ ಸಮಗ್ರ ಜವಾಬ್ದಾರಿಯನ್ನು ಸಹಾಯಕ ಆಯಕ್ತರು ನಿಭಾಯಿಸಬೇಕೆಂದು ಸರಕಾರದ ಆದೇಶದ ಮೇರೆಗೆ ಹು- ಧಾ ಮಹಾನಗರ ಪಾಲಿಕೆ ಆಯಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಅನಗತ್ಯ ರಜೆಗೆ ಅವಕಾಶ ನೀಡಬಾರದು. ಒಂದು ವೇಳೆ ಸಿಬ್ಬಂದಿ ವೈದ್ಯಕೀಯ ಹಿನ್ನೆಲೆಯಲ್ಲಿಕೆಲಸಕ್ಕೆ ವಿನಾಯಿತಿ ಕೇಳಿದರೆ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಸಾಮಾನ್ಯ ಆಡಳಿತ ವಿಭಾಗಕ್ಕೆ ಅಧಿಕಾರಿಗಳು ನೀಡಬೇಕು. ಅಲ್ಲದೆ, ಕರ್ತವ್ಯಕ್ಕೆ ಹಾಜರಾಗುವ ಗುರುತಿನ ಚೀಟಿ ಅವಶ್ಯವಿದ್ದರೆ, ಹಿರಿಯ ಅಧಿಕಾರಿಗಳ ರುಜುವಿನೊಂದಿಗೆ ನೀಡಬೇಕೆಂದು ಉಲ್ಲೇಖಿಸಲಾಗಿದೆ.
ಕರ್ತವ್ಯಕ್ಕೆ ಅನಗತ್ಯವಾಗಿ ಗೈರು ಹಾಜರಾಗುವ ಸಿಬ್ಬಂದಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿ, ಶಿಸ್ತು ಕ್ರಮಕೈಗೊಂಡು ಆಡಳಿತ ವಿಭಾಗಕ್ಕೆ ವರದಿ ನೀಡಬೇಕು. ಇದರ ಸಮಗ್ರ ಜವಾಬ್ದಾರಿಯನ್ನು ಸಹಾಯಕ ಆಯಕ್ತರು ನಿಭಾಯಿಸಬೇಕೆಂದು ಸರಕಾರದ ಆದೇಶದ ಮೇರೆಗೆ ಹು- ಧಾ ಮಹಾನಗರ ಪಾಲಿಕೆ ಆಯಕ್ತರು ಸುತ್ತೋಲೆ ಹೊರಡಿಸಿದ್ದಾರೆ.