ಆ್ಯಪ್ನಗರ

ಅನುಮಾನಾಸ್ಪದ ಖಾತೆ ಮೇಲೆ ನಿಗಾವಹಿಸಲು ಸೂಚನೆ

ಧಾರವಾಡ : ಹೆಚ್ಚುವರಿ ಮದ್ಯ ದಾಸ್ತಾನು, ಮಾರಾಟ ಹಾಗೂ 1 ಲಕ್ಷ ದಿಂದ 10 ಲಕ್ಷ ದವರೆಗೆ ವ್ಯವಹಾರ ಆಗುವ ಸಂಶಯಾಸ್ಪದವಿರುವ ಬ್ಯಾಂಕ್‌ ಖಾತೆಗಳ ಮೇಲೆ ವಿಶೇಷ ನಿಗಾವಹಿಸಿ ಎಂದು ಧಾರವಾಡ ಲೋಕಸಭಾ ಚುನಾವಣೆ ಕ್ಷೇತ್ರದ ವೆಚ್ಚ ವಿಶೇಷ ವೀಕ್ಷ ಕರಾದ ಮಧು ಮಹಾಜನ ಹೇಳಿದರು.

Vijaya Karnataka 23 Apr 2019, 5:00 am
ಧಾರವಾಡ : ಹೆಚ್ಚುವರಿ ಮದ್ಯ ದಾಸ್ತಾನು, ಮಾರಾಟ ಹಾಗೂ 1 ಲಕ್ಷ ದಿಂದ 10 ಲಕ್ಷ ದವರೆಗೆ ವ್ಯವಹಾರ ಆಗುವ ಸಂಶಯಾಸ್ಪದವಿರುವ ಬ್ಯಾಂಕ್‌ ಖಾತೆಗಳ ಮೇಲೆ ವಿಶೇಷ ನಿಗಾವಹಿಸಿ ಎಂದು ಧಾರವಾಡ ಲೋಕಸಭಾ ಚುನಾವಣೆ ಕ್ಷೇತ್ರದ ವೆಚ್ಚ ವಿಶೇಷ ವೀಕ್ಷ ಕರಾದ ಮಧು ಮಹಾಜನ ಹೇಳಿದರು.
Vijaya Karnataka Web notice to monitor on suspicious account
ಅನುಮಾನಾಸ್ಪದ ಖಾತೆ ಮೇಲೆ ನಿಗಾವಹಿಸಲು ಸೂಚನೆ


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಸಹಕಾರಿ ಬ್ಯಾಂಕ್‌ ಹಾಗೂ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‌ಗಳ ಮೇಲೆ ವಿಶೇಷ ಗಮನವಿಡಬೇಕು. 1 ಲಕ್ಷ ದಿಂದ 10 ಲಕ್ಷ ದ ವರಗೆ ಆಗುವ ಬ್ಯಾಂಕ್‌ ವ್ಯವಹಾರಗಳನ್ನು ಪರಿಶೀಲಿಸಬೇಕು. ಅನುಮತಿಗಿಂತ ಹೆಚ್ಚು ಮದ್ಯ ದಾಸ್ತುನು, ಮಾರಾಟ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಉದ್ಯಮಿಗಳ ಬ್ಯಾಂಕ್‌ ವ್ಯವಹಾರಗಳನ್ನು ಸಹ ಪರಿಶೀಲಿಸಬೇಕು ಎಂದರು.

ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಎಂ. ದೀಪಾ ಮಾತನಾಡಿ, ಧಾರವಾಡ ಲೋಕಸಭಾ ಮತಕ್ಷೇತ್ರದ ಕುರಿತು, ಮತದಾರ ಸಂಖ್ಯೆ, ಮತಗಟ್ಟೆಗಳು, ಸಿಬ್ಬಂದಿ ನೇಮಕ, ಎಫ್‌ಎಸ್‌ಟಿ-ಎಸ್‌ಎಸ್‌ಟಿ ತಂಡಗಳು, ಭದ್ರತೆಗಾಗಿ ನೇಮಿಸಿದ ಪೊಲೀಸ್‌ ಸಿಬ್ಬಂದಿ, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಸೇರಿದಂತೆ ಕೈಗೊಂಡ ಕ್ರಮ ಹಾಗೂ ಚುನಾವಣಾ ಸಿದ್ಧತೆಗಳ ಕುರಿತು ವಿವರಿಸಿದರು .

ಮಹಾನಗರ ಪೊಲೀಸ್‌ ಆಯುಕ್ತ ಎಂ.ಎನ್‌.ನಾಗರಾಜ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂಗೀತಾ ಜಿ, ಜಿಲ್ಲಾ ಅಗ್ರಣೀಯ ಬ್ಯಾಂಕ್‌ ವ್ಯವಸ್ಥಾಪಕ ಕೆ.ಈಶ್ವರ ಹಾಗೂ ವೆಚ್ಚ ವೀಕ್ಷ ಕರಾದ ಪಿ.ವಿ.ವೆಂಕಟೇಶ್ವರನ್‌ ಮತ್ತು ಆನಂದಕುಮಾರ ಮಾತನಾಡಿ, ಸಭೆಗೆ ಪೂರಕ ಮಾಹಿತಿ ನೀಡಿದರು.

ಸಭೆಯ ಪೂರ್ವದಲ್ಲಿ ಮಧು ಮಹಾಜನ ಅವರು ಚುನಾವಣಾ ವಿಭಾಗ, ಮತದಾರರ ದೂರು ಸ್ವೀಕಾರ ಕೇಂದ್ರ, ಸಿವಿಜಲ್‌ ಕೇಂದ್ರ, ಮಾಧ್ಯಮ ವಿಕ್ಷ ಣಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಚುನಾವಣಾಧಿಕಾರಿ ಎಂ. ದೀಪಾ ಮಾಹಿತಿ ನೀಡಿದರು.

ಸಭೆಯಲ್ಲಿ ಜಿ.ಪಂ. ಸಿಇಓ ಡಾ.ಬಿ.ಸಿ.ಸತೀಶ, ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಸೇರಿದಂತೆ ಅಬಕಾರಿ ಇಲಾಖೆ, ಎಫ್‌ಎಸ್‌ಟಿ-ಎಸ್‌ಎಸ್‌ಟಿ, ವೆಚ್ಚ ತಂಡಗಳ ಸದಸ್ಯರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ