ಆ್ಯಪ್ನಗರ

ನೃಪತುಂಗ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ

ಧಾರವಾಡ : ಕನ್ನಡ ಸಾಹಿತ್ಯ ಪರಿಷತ್‌, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೊಂದಿಗೆ ಕೊಡಮಾಡುವ ಪ್ರತಿಷ್ಠಿತ ನೃಪತುಂಗ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಆಲೂರು ವೆಂಕಟರಾವ ಭವನದಲ್ಲಿಸೆ.16 ರಂದು ಜರುಗಲಿದೆ ಎಂದು ಜಿಲ್ಲಾಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ತಿಳಿಸಿದರು.

Vijaya Karnataka 15 Sep 2019, 5:00 am
ಧಾರವಾಡ : ಕನ್ನಡ ಸಾಹಿತ್ಯ ಪರಿಷತ್‌, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೊಂದಿಗೆ ಕೊಡಮಾಡುವ ಪ್ರತಿಷ್ಠಿತ ನೃಪತುಂಗ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಆಲೂರು ವೆಂಕಟರಾವ ಭವನದಲ್ಲಿಸೆ.16 ರಂದು ಜರುಗಲಿದೆ ಎಂದು ಜಿಲ್ಲಾಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ತಿಳಿಸಿದರು.
Vijaya Karnataka Web nrupatunga literature award ceremony
ನೃಪತುಂಗ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ


ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, 2019 ನೇ ಸಾಲಿನ ಪ್ರಶಸ್ತಿಗೆ ಕವಿ ಡಾ.ಚೆನ್ನವೀರ ಕಣವಿ ಆಯ್ಕೆಯಾಗಿದ್ದಾರೆ. ನೃಪತುಂಗ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್‌ ಇತಿಹಾಸದಲ್ಲಿಅತ್ಯಂತ ಶ್ರೇಷ್ಠ ಮತ್ತು ಮೌಲಿಕ ಸಾಹಿತ್ಯ ಪ್ರಶಸ್ತಿಯಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ವ್ಯವಸ್ಥಾಪಕ ನಿರ್ದೇಶಕ ಐಎಎಸ್‌ ಅಧಿಕಾರಿ ಉಪೇಂದ್ರ ತ್ರಿಪಾಠಿ ಹಾಗೂ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ಆಸಕ್ತಿಯಿಂದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿಸ್ಥಾಪಿಸಿದ ಒಂದೂವರೆ ಕೋಟಿ ರೂಪಾಯಿ ಸ್ಥಾಯಿ ನಿಧಿಯು ಈ ಪ್ರಶಸ್ತಿಗೆ ಮೂಲ ಪ್ರೇರಣೆಯಾಗಿದೆ.

ಪ್ರತಿವರ್ಷ ಕನ್ನಡದಲ್ಲಿನ ಮೌಲಿಕ ಸಾಹಿತ್ಯ ರಚನೆಯ ಲೇಖಕರಿಗೆ ನೃಪತುಂಗ ಪ್ರಶಸ್ತಿ ನೀಡುತ್ತ ಬರಲಾಗುತ್ತಿದೆ. ಇದುವರೆಗೆ ನಾಡಿನ 12 ಜನ ಅಗ್ರ ಸಾಹಿತಿಗಳಿಗೆ ನೀಡಲಾಗಿದ್ದು, ಈ ಬಾರಿ ಕವಿ ಡಾ.ಚೆನ್ನವೀರ ಕಣವಿ ಅವರಿಗೆ ನಿಡಲಾಗುತ್ತಿದೆ. ಪ್ರಶಸ್ತಿ 7 ಲಕ್ಷ 1 ಸಾವಿರ ರೂ.ನಗದು, ಪಶ್ರಸ್ತಿ ಪತ್ರ, ನೆನಪಿನ ಕಾಣಿಕೆ ಒಳಗೊಂಡಿರುತ್ತದೆ ಎಂದರು.

ಇದೇ ಸಂದರ್ಭದಲ್ಲಿಕನ್ನಡ ಸಾಹಿತ್ಯದಲ್ಲಿಕೃಷಿ ಮಾಡುತ್ತಿರುವ 45 ವರ್ಷದೊಳಗಿನ ಬರಹಗಾರರಿಗೆ ನೀಡುವ ಮಯೂರವರ್ಮ ಪ್ರಶಸ್ತಿಗೆ ಆಯ್ಕೆಯಾಗಿರುವ ಕೆ.ಆರ್‌.ಸೌಮ್ಯ ಮತ್ತು ಶರಣು ಹುಲ್ಲೂರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿ 25 ಸಾವಿರ ರೂ. ನಗದು, ಪಶ್ರಸ್ತಿ ಪತ್ರ, ನೆನಪಿನ ಕಾಣಿಕೆ ಒಳಗೊಂಡಿದೆ ಎಂದರು.

ಸೆ.16 ರಂದು ಸಂಜೆ 5 ಗಂಟೆಗೆ ನಡೆಯುವ ಸಮಾರಂಭವನ್ನು ಸಚಿವ ಜಗದೀಶ ಶೆಟ್ಟರ್‌ ಉದ್ಘಾಟಿಸಲಿದ್ದು, ಉಪ ಮುಖ್ಯಮಂತ್ರಿ ಲಕ್ಷತ್ರ್ಮಣ ಸವದಿ ಪ್ರಶಸ್ತಿ ಪ್ರದಾನ ಮಾಡುವರು. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ ಅಧ್ಯಕ್ಷತೆ ವಹಿಸಲಿದ್ದು, ಬೆಂ.ಮ.ಸಾ.ಸಂ. ವ್ಯವಸ್ಥಾಪಕ ನಿರ್ದೇಶಕ ಡಾ.ಎನ್‌.ವಿ.ಪ್ರಸಾದ ಮತ್ತು ನಿರ್ದೇಶಕ ಅನುಪಮ ಅಗ್ರವಾಲ ಅತಿಥಿಗಳಾಗಿ ಆಗಮಿಸುವರು. ಕ.ರಾ.ರ.ಸಾ.ಸಂ. ಕೇಂದ್ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ.ಚನ್ನೇಗೌಡ ಉಪಸ್ಥಿತರಿರುವರು ಎಂದು ಅಂಗಡಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಬೈಲಾದಲ್ಲಿಇತ್ತೀಚೆಗೆ ಆದ ತಿದ್ದುಪಡಿ ಅನ್ವಯ ಜಿಲ್ಲಾಘಟಕಕ್ಕೆ ಪ್ರೊ.ಮಾಲತಿ ಪಟ್ಟಣಶೆಟ್ಟಿ, ಡಾ.ವೈ.ಎಂ.ಭಜಂತ್ರಿ ಮತ್ತು ಶರಣಮ್ಮ ಗೋರಬಾಳ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಅಂಗಡಿ ಇದೇ ಸಂದರ್ಭದಲ್ಲಿತಿಳಿಸಿದರು.

ಪ್ರಕಾಶ ಉಡಿಕೇರಿ, ಶಾಂತೇಶ ಗಾಮನಗಟ್ಟಿ, ಪ್ರೊ. ಎನ್‌.ಅರ್‌.ಬಾಳಿಕಾಯಿ, ವಿಶ್ವೇಶ್ವರಿ ಹಿರೇಮಠ, ಎಫ್‌.ಬಿ.ಕಣವಿ, ಕೆ.ಎಲ್‌.ದೊಡ್ಡಮನಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ