ಆ್ಯಪ್ನಗರ

ಭಿತ್ತಿ ಪತ್ರ ಹಂಚಿಕೆಗೆ ಆಕ್ಷೇಪ

ಧಾರವಾಡ : ಮುರುಘಾಮಠದ ಟ್ರಸ್ಟ್‌ ಕಮಿಟಿ ಪದಾಧಿಕಾರಿಗಳ ಬಗ್ಗೆ ಅವಹೇಳನಕಾರಿ ಆರೋಪಗಳಿರುವ ಭಿತ್ತಿಪತ್ರಗಳನ್ನು ಹಂಚುತ್ತಿದ್ದ ಶ್ರೀಮಠದ ಮಾಜಿ ಪೀಠಾಧಿಪತಿ ಶಿವಯೋಗಿ ಸ್ವಾಮೀಜಿ ಅವರನ್ನು ಶನಿವಾರ ಪೊಲೀಸರು ಶಹರಠಾಣೆಗೆ ಕರೆತಂದು ಕಾನೂನು ಸುವ್ಯವಸ್ಥೆ ಧಕ್ಕೆ ತರುವ ಯಾವ ಕೆಲಸವನ್ನೂ

Vijaya Karnataka 27 Oct 2019, 5:00 am
ಧಾರವಾಡ : ಮುರುಘಾಮಠದ ಟ್ರಸ್ಟ್‌ ಕಮಿಟಿ ಪದಾಧಿಕಾರಿಗಳ ಬಗ್ಗೆ ಅವಹೇಳನಕಾರಿ ಆರೋಪಗಳಿರುವ ಭಿತ್ತಿಪತ್ರಗಳನ್ನು ಹಂಚುತ್ತಿದ್ದ ಶ್ರೀಮಠದ ಮಾಜಿ ಪೀಠಾಧಿಪತಿ ಶಿವಯೋಗಿ ಸ್ವಾಮೀಜಿ ಅವರನ್ನು ಶನಿವಾರ ಪೊಲೀಸರು ಶಹರಠಾಣೆಗೆ ಕರೆತಂದು ಕಾನೂನು ಸುವ್ಯವಸ್ಥೆ ಧಕ್ಕೆ ತರುವ ಯಾವ ಕೆಲಸವನ್ನೂ ಮಾಡದಂತೆ ತಾಕೀತು ಮಾಡಿ ಕಳುಹಿಸಿದ್ದಾರೆ.
Vijaya Karnataka Web objection to poster letter sharing
ಭಿತ್ತಿ ಪತ್ರ ಹಂಚಿಕೆಗೆ ಆಕ್ಷೇಪ


ಶ್ರೀ ಶಿವಯೋಗಿ ಸ್ವಾಮೀಜಿ ಶನಿವಾರ ನಗರದ ಶಿವಾಜಿವೃತ್ತ, ರೀಗಲ್‌ ಸರ್ಕಲ್‌, ಮಾರ್ಕೆಟ್‌ ಪ್ರದೇಶಗಳಲ್ಲಿಭಿತ್ತಿ ಪತ್ರಗಳನ್ನು ಹಂಚುತ್ತಿದ್ದರು. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸ್ವಲ್ಪ ಹೊತ್ತು ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು. ಮಾತ್ರವಲ್ಲದೇ ಕೆಲವರು ಈ ಬಗ್ಗೆ ಶಹರ ಠಾಣೆಗೆ ದೂರು ನೀಡುತ್ತಿದ್ದಂತೆಯೇ ಸ್ವಾಮೀಜಿಗಳನ್ನು ಠಾಣೆಗೆ ಕರೆತಂದ ಪೊಲೀಸರು ನಿಮ್ಮಲ್ಲಿನ ವೈಮನಸ್ಸು ಏನೇ ಇದ್ದರು ಅದನ್ನು ಕಾನೂನಾತ್ಮಕವಾಗಿ ವ್ಯಕ್ತಪಡಿಸಿ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಶಿವಯೋಗಿ ಶ್ರೀಗಳಿಗೆ ತಿಳಿಸಿ ಕಳಿಸಲಾಯಿತು ಎಂದು ಪೊಲೀಸರು ವಿಕ ಕ್ಕೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ