ಆ್ಯಪ್ನಗರ

15ರಂದು ಡಾ. ರಿತ್ತಿ ಸ್ಮರಣಾರ್ಥ ಉಪನ್ಯಾಸ

ಧಾರವಾಡ : ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸ್ಮಾರಕ ಟ್ರಸ್ಟಿನ ಅಧ್ಯಕ್ಷ ರಾಗಿದ್ದ ಹಿರಿಯ ಅಂತರಾಷ್ಟ್ರೀಯ ಇತಿಹಾಸ ಸಂಶೋದಕ ಡಾ. ಶ್ರೀನಿವಾಸ ರಿತ್ತಿ ಅವರ ಪ್ರಥಮ ಪುಣ್ಯಸ್ಮರಣೆ ಸ್ಮರಣಾರ್ಥ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಆ.15 ರಂದು ಬೆಳಗ್ಗೆ 11.30ಕ್ಕೆ ಒಂದು ದಿನದ ವಿಶೇಷ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ.

Vijaya Karnataka 13 Aug 2019, 5:00 am
ಧಾರವಾಡ : ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸ್ಮಾರಕ ಟ್ರಸ್ಟಿನ ಅಧ್ಯಕ್ಷ ರಾಗಿದ್ದ ಹಿರಿಯ ಅಂತರಾಷ್ಟ್ರೀಯ ಇತಿಹಾಸ ಸಂಶೋದಕ ಡಾ. ಶ್ರೀನಿವಾಸ ರಿತ್ತಿ ಅವರ ಪ್ರಥಮ ಪುಣ್ಯಸ್ಮರಣೆ ಸ್ಮರಣಾರ್ಥ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಆ.15 ರಂದು ಬೆಳಗ್ಗೆ 11.30ಕ್ಕೆ ಒಂದು ದಿನದ ವಿಶೇಷ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ.
Vijaya Karnataka Web on the 15th dr ritti commemorative lecture
15ರಂದು ಡಾ. ರಿತ್ತಿ ಸ್ಮರಣಾರ್ಥ ಉಪನ್ಯಾಸ


ಅಂದಿನ ವಿಶೇಷ ಉಪನ್ಯಾಸಗಳನ್ನು ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್‌. ನಾಗರಾಜು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಭಾರತೀಯ ಪುರಾತತ್ವ ಸರ್ವೆಕ್ಷ ಣದ ವಿಶ್ರಾಂತಿ ನಿರ್ದೇಶಕ ಡಾ. ವಿ. ಶಿವಾನಂದ ಆಗಮಿಸಲಿದ್ದು, ಕವಿವಿ ವಿಶ್ರಾಂತಿ ಕುಲಪತಿ ಡಾ.ಪ್ರಮೋದ ಗಾಯಿ ಅಧ್ಯಕ್ಷ ತೆ ವಹಿಸಲಿದ್ದಾರೆ.

ಡಾ.ಶ್ರೀನಂದ ಬಾಪಟ ಪುಣೆ ಅವರು ಮಹಾರಾಷ್ಟ್ರದ ಶಾಸನ ಅಧ್ಯಯನಕ್ಕೆ ದಿ. ಶ್ರೀನಿವಾಸ ರಿತ್ತಿ ಕೊಡುಗೆಗಳು ಹಾಗೂ ಡಾ. ಕೆ.ಎಸ್‌. ಭಟ್ಟಸೂರಿ ಅವರು ಶಾಸನ ಶಾಸ್ತ್ರಕ್ಕೆ ಶ್ರೀನಿವಾಸ ರಿತ್ತಿ ಕೊಡುಗೆಗಳು, ಹಂಪಿ ವಿ.ವಿ. ಡಾ ಸಿ.ಎಸ್‌. ವಾಸುದೇವನ್‌ ವಿಜಯನಗರ ಶಾಸನ ಸಂಪುಣಗಳ ಸಂಪಾದನೆಗೆ ಡಾ.ಶ್ರೀನಿವಾಸ ರಿತ್ತಿ ಕೂಡುಗೆ ಹಾಗೂ ಡಾ. ಐ. ಕೆ. ಪತ್ತಾರ ವಿಶೇಷ ಉಪನ್ಯಾಸ ನೀಡಿಲಿದ್ದಾರೆ.ನಂತರ ಡಾ. ಶ್ರೀನಿವಾಸ ಪಾಡಿಗಾರ ಅಭಿಪ್ರಾಯ ಮಂಡಿಸಲಿದ್ದಾರೆ ಎಂದು ಟ್ರಸ್ಟಿನ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ