ಆ್ಯಪ್ನಗರ

ಧರ್ಮ ಮಾರ್ಗದಲ್ಲಿ ಬಾಳಿ

ಹುಬ್ಬಳ್ಳಿ: ಧರ್ಮ ಮನುಷ್ಯನಿಗೆ ಒಳಿತನ್ನು ಬಯಸುತ್ತದೆ. ಜೀವನದಲ್ಲಿಧರ್ಮಕ್ಕಿಂತ ಬೇರೆ ಯಾವುದು ಇಲ್ಲ. ಆದ್ದರಿಂದ ಮನುಷ್ಯ ಧರ್ಮದ ಚೌಕಟ್ಟಿನಲ್ಲಿನಡೆಯಬೇಕು ಎಂದು ಆಚಾರ್ಯ ಶ್ರೀ ಮಹಾಶ್ರವಣಜಿ ಆಶೀರ್ವಚನ ನೀಡಿದರು.

Vijaya Karnataka 24 Jan 2020, 7:58 pm
ಹುಬ್ಬಳ್ಳಿ: ಧರ್ಮ ಮನುಷ್ಯನಿಗೆ ಒಳಿತನ್ನು ಬಯಸುತ್ತದೆ. ಜೀವನದಲ್ಲಿಧರ್ಮಕ್ಕಿಂತ ಬೇರೆ ಯಾವುದು ಇಲ್ಲ. ಆದ್ದರಿಂದ ಮನುಷ್ಯ ಧರ್ಮದ ಚೌಕಟ್ಟಿನಲ್ಲಿನಡೆಯಬೇಕು ಎಂದು ಆಚಾರ್ಯ ಶ್ರೀ ಮಹಾಶ್ರವಣಜಿ ಆಶೀರ್ವಚನ ನೀಡಿದರು.
Vijaya Karnataka Web on the path of dharma
ಧರ್ಮ ಮಾರ್ಗದಲ್ಲಿ ಬಾಳಿ


ನಗರದ ಕುಸುಗಲ್ಲರಸ್ತೆಯ ಸಂಸ್ಕಾರ ಶಾಲೆ ಆವರಣದಲ್ಲಿಗುರುವಾರ ನಡೆದ ಮರ್ಯಾದಾ ಮಹೋತ್ಸವ ಕಾರ್ಯಕ್ರಮದ ಮಂಗಳ ಪ್ರವೇಶದ ನಂತರ ಅವರು ಮಾತನಾಡಿದರು.

ಮತ್ತೊಬ್ಬರಿಗೆ ನಮ್ಮ ಮಾತಿನಿಂದ ನೋವಾಗಬಾರದು. ಮನಸ್ಸು ಮತ್ತು ಮಾತು ನಮ್ಮ ನಿಯಂತ್ರಣದಲ್ಲಿರಬೇಕು. ಇಂದ್ರಿಯಗಳ ನಿಯಂತ್ರಣಕ್ಕೆ ತಪಸ್ಸು ಅಗತ್ಯ ಎಂದು ಹೇಳಿದರು.

ಆಚಾರ್ಯ ಶ್ರೀ ಮಹಾಶ್ರವಣ ಮರ್ಯಾದಾ ವ್ಯವಸ್ಥಾ ಸಮಿತಿ ಅಧ್ಯಕ್ಷ ಸೋಹನಲಾಲ ಕೊಠಾರಿ, ತೇರಾಪಂಥ ಸಭಾ ಅಧ್ಯಕ್ಷ ಮಹೇಂದ್ರ ಪಾಲಗೋತಾ, ಮರ್ಯಾದಾ ಮಹೋತ್ಸವ ಕಾರ್ಯಕಾರಿಣಿ ಸಮಿತಿ ಅಧ್ಯಕ್ಷ ಸೋಹನರಾಜ ಕೋಠಾರಿ, ಮರ್ಯಾದಾ ಮಹೋತ್ಸವ ಮುಖ್ಯ ಸಲಹಾಕಾರರಾದ ಮಹೇಂದ್ರ ಸಿಂಘಿಘಿ, ಮರ್ಯಾದಾ ಮಹೋತ್ಸವ ಸ್ವಾಗತ ಸಮಿತಿ ಚೇರಮನ್‌ ಪಾರಸಮಲ್‌ ಬನ್ಸಾಲಿ, ಮುಖ್ಯ ಕಾರ್ಯದರ್ಶಿ ಕೇಶ್ರಿಚಂದ ಗೊಲಾಚ್ಚಾ, ತೇರಾಪಂಥ ಮಹಿಳಾ ಮಂಡಳ ಅಧ್ಯಕ್ಷೆ ಪ್ರೇಮಬಾಯಿ ವೆದಮುಥ್‌, ತೇರಾಪಂಥ ಯುವಕ ಪರಿಷತ್‌ ಅಧ್ಯಕ್ಷ ವಿನೋದ ವೆದಮುಥ್‌, ಸಂಸ್ಕಾರ ಶಾಲೆ ಅಧ್ಯಕ್ಷ ಮಹಾವೀರ ಕುಂದೂರ, ದಿಗಂಬರ್‌ ಜೈನ್‌ ಸಮಾಜದ ಮುಖ್ಯಸ್ಥ ಬ್ರಹ್ಮಕುಮಾರ ಬೀಳಗಿ ಮತ್ತು ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ