ಆ್ಯಪ್ನಗರ

ಆಪರೇಷನ್‌ ಕಮಲ ನಾಚಿಕೆಗೇಡಿನ ಕೆಲಸ: ಹೊರಟ್ಟಿ

ಹುಬ್ಬಳ್ಳಿ : ಬಿಜೆಪಿಯವರು ಅಧಿಕಾರದಾಸೆಗೆ ಆಪರೇಷನ್‌ ಕಮಲಕ್ಕೆ ಮುಂದಾಗಿದ್ದಾರೆ. ಕೇವಲ ಅಧಿಕಾರಕ್ಕಾಗಿ ಇಂತಹ ಕೆಲಸಕ್ಕೆ ಮುಂದಾಗುವುದು ನಾಚಿಗೇಡಿನ ಕೆಲಸ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ್‌ ಹೊರಟ್ಟಿ ವಾಗ್ದಾಳಿ ನಡೆಸಿದರು.

Vijaya Karnataka 17 Jan 2019, 5:00 am
ಹುಬ್ಬಳ್ಳಿ : ಬಿಜೆಪಿಯವರು ಅಧಿಕಾರದಾಸೆಗೆ ಆಪರೇಷನ್‌ ಕಮಲಕ್ಕೆ ಮುಂದಾಗಿದ್ದಾರೆ. ಕೇವಲ ಅಧಿಕಾರಕ್ಕಾಗಿ ಇಂತಹ ಕೆಲಸಕ್ಕೆ ಮುಂದಾಗುವುದು ನಾಚಿಗೇಡಿನ ಕೆಲಸ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ್‌ ಹೊರಟ್ಟಿ ವಾಗ್ದಾಳಿ ನಡೆಸಿದರು.
Vijaya Karnataka Web operation lotus shame work horatti
ಆಪರೇಷನ್‌ ಕಮಲ ನಾಚಿಕೆಗೇಡಿನ ಕೆಲಸ: ಹೊರಟ್ಟಿ


ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬಿಜೆಪಿಯ ಈ ನಡೆಯಿಂದ ರಾಜ್ಯದ ಸಂಪೂರ್ಣ ಆಡಳಿತ ವ್ಯವಸ್ಥೆ ಕೆಟ್ಟು ಹೋಗುತ್ತಿದೆ. ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ ಇಂತಹ ಸಮಯದಲ್ಲಿ ಶಾಸಕರು ದಿಲ್ಲಿ, ಮುಂಬಯಿಗೆ ಹೋಗುವುದು ಎಷ್ಟು ಸರಿ?'' ಎಂದು ಪ್ರಶ್ನಿಸಿದರು.

''ಜನರಿಂದ ಆಯ್ಕೆಯಾದವರನ್ನು ಸರಕುಗಳಂತೆ ಖರೀದಿಸುವ ಬಿಜೆಪಿಯ ಕೆಲಸ ಅತ್ಯಂತ ಹೀನಕೃತ್ಯವಾಗಿದೆ. ಇಂತಹ ಕೆಲಸ ಆಗಬಾರದು. ಮುಂದೆಯೂ ಹೀಗಾಗದಂತೆ ನೋಡಿಕೊಳ್ಳಬೇಕು. ಪಕ್ಷ ಬಿಟ್ಟು ಬೇರೆ ಪಕ್ಷ ಕ್ಕೆ ಹೋಗುವವರನ್ನು ಜನ ಕ್ಷೇತ್ರಕ್ಕೆ ಬರದ ಹಾಗೇ ನೋಡಿಕೊಳ್ಳಬೇಕು. ಆಗ ಮಾತ್ರ ಇಂತವರಿಗೆ ಬುದ್ಧಿ ಬರುತ್ತೆ'' ಎಂದು ಕಿಡಿಕಾರಿದರು.

''ರಾಜಕೀಯದಲ್ಲಿ ಆಪರೇಷನ್‌ ಅನ್ನುವುದು ಕೆಟ್ಟ ಪದ್ಧತಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪದೇ ಪದೆ ಚುನಾವಣೆ ಬೇಡವೆಂದು ಮೈತ್ರಿ ಧರ್ಮ ಪಾಲನೆ ಮಾಡಲಾಗುತ್ತಿದೆ'' ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ