ಆ್ಯಪ್ನಗರ

ಮೇಜರ್‌ ಕುಲಸಚಿವರ ಪ್ರಭಾರಕ್ಕೆ ವಿರೋಧ

ಹುಬ್ಬಳ್ಳಿ: ಹಾಲಿ ಕಾನೂನು ವಿದ್ಯಾರ್ಥಿಯಾಗಿರುವ ಸಿದ್ಧಲಿಂಗಯ್ಯ ಹಿರೇಮಠ ಅವರನ್ನು ಕಾನೂನು ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ನೇಮಿಸಿರುವ ಸರಕಾರದ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.

Vijaya Karnataka 6 Dec 2019, 5:00 am
ಹುಬ್ಬಳ್ಳಿ: ಹಾಲಿ ಕಾನೂನು ವಿದ್ಯಾರ್ಥಿಯಾಗಿರುವ ಸಿದ್ಧಲಿಂಗಯ್ಯ ಹಿರೇಮಠ ಅವರನ್ನು ಕಾನೂನು ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ನೇಮಿಸಿರುವ ಸರಕಾರದ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.
Vijaya Karnataka Web opposition to majors counsel
ಮೇಜರ್‌ ಕುಲಸಚಿವರ ಪ್ರಭಾರಕ್ಕೆ ವಿರೋಧ


ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ರಾಜ್ಯ ಯುವ ವಕೀಲರ ಸಂಘ, ವಿಶ್ವವಿದ್ಯಾಲಯದಲ್ಲಿಮೌಲ್ಯಮಾಪನ ಸೇರಿದಂತೆ ಆಡಳಿತಾತ್ಮಕ ತೀರ್ಮಾನಗಳನ್ನು ವಿಶ್ವವಿದ್ಯಾಲಯದ ಕುಲಸಚಿವರ ಪಾತ್ರ ಪ್ರಮುಖವಾಗಿರುತ್ತದೆ. ವಿದ್ಯಾರ್ಥಿಯೇ ಕುಲಸಚಿವರಾದರೆ, ಶಿಕ್ಷಕರ ಪಾಡು ಹೇಳತೀರದು ಎಂದು ತಿಳಿಸಿದೆ.

ಸಿದ್ಧಲಿಂಗಯ್ಯ ಹಿರೇಮಠ ಅವರನ್ನು ಕಾನೂನು ವಿವಿ ಕುಲಸಚಿವರಾಗಿ ನೇಮಕ ಮಾಡುವ ಸಂದರ್ಭದಲ್ಲಿಸರಕಾರ ವಿದ್ಯಾರ್ಥಿ ಎಂದು ತಿಳಿಯದೇ ಆದೇಶ ಹೊರಡಿಸಿರಬಹುದು. ವಿದ್ಯಾರ್ಥಿಯಾಗಿರುವಾಗಲೇ ಕುಲಸಚಿವರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಕಾನೂನು ಪಂಡಿತರನ್ನ ಅವರು ಸಂಪರ್ಕಿಸಿ ಸಲಹೆ ಪಡೆಯಬಹುದಿತ್ತು. ಆದ್ದರಿಂದ ಸರಕಾರ ತಕ್ಷಣವೇ ಆದೇಶವನ್ನು ಹಿಂಪಡೆದು ಅವರನ್ನು ಆ ಸ್ಥಾನದಿಂದ ಮುಕ್ತಪಡಿಸಬೇಕೆಂದು ಸಂಘದ ರಾಜ್ಯ ಗೌರವಾಧ್ಯಕ್ಷ ಅಶೋಕ ಅಣವೇಕರ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ