ಆ್ಯಪ್ನಗರ

ಎನ್‌ಆರ್‌ಸಿಗೆ ಜನಾಂದೋಲನ ಮಹಾಮೈತ್ರಿ ವಿರೋಧ

ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿ ಕಾರ್ಯವಾಗಿದ್ದು, ಈ ಕಾಯ್ದೆಯನ್ನು ದೇಶದಾದ್ಯಂತ ವಿಸ್ತರಿಸಲು ಸಂಸತ್ತಿನಲ್ಲಿಬಿಲ್‌ ಪಾಸ್‌ ಮಾಡಿರುವುದನ್ನು ಸಿಟಿಜನ್‌ ಫಾರ್‌ ಡೆಮಾಕ್ರಸಿ, ಜನಾಂದೋಲನಗಳ ಮಹಾಮೈತ್ರಿ ತೀವ್ರ ವಿರೋಧಿಸುತ್ತದೆ ಎಂದು ಸಿಟಿಜನ್‌ ಫಾರ್‌ ಡೆಮಾಕ್ರಸಿಯ ಮುಖ್ಯಸ್ಥ ಎಸ್‌.ಆರ್‌. ಹೀರೆಮಠ ಹೇಳಿದರು.

Vijaya Karnataka 15 Dec 2019, 5:00 am
ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿ ಕಾರ್ಯವಾಗಿದ್ದು, ಈ ಕಾಯ್ದೆಯನ್ನು ದೇಶದಾದ್ಯಂತ ವಿಸ್ತರಿಸಲು ಸಂಸತ್ತಿನಲ್ಲಿಬಿಲ್‌ ಪಾಸ್‌ ಮಾಡಿರುವುದನ್ನು ಸಿಟಿಜನ್‌ ಫಾರ್‌ ಡೆಮಾಕ್ರಸಿ, ಜನಾಂದೋಲನಗಳ ಮಹಾಮೈತ್ರಿ ತೀವ್ರ ವಿರೋಧಿಸುತ್ತದೆ ಎಂದು ಸಿಟಿಜನ್‌ ಫಾರ್‌ ಡೆಮಾಕ್ರಸಿಯ ಮುಖ್ಯಸ್ಥ ಎಸ್‌.ಆರ್‌. ಹೀರೆಮಠ ಹೇಳಿದರು.
Vijaya Karnataka Web opposition to the nrc
ಎನ್‌ಆರ್‌ಸಿಗೆ ಜನಾಂದೋಲನ ಮಹಾಮೈತ್ರಿ ವಿರೋಧ


ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಈ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌.ಆರ್‌.ಸಿ) ಯು ಮಹಾತ್ಮಾ ಗಾಂಧಿ, ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಆಶಯಕ್ಕೆ ವಿರೋಧಿಯಾಗಿದೆ. ಆದರೂ ಬಿಜೆಪಿ ಹಾಗೂ ಸಂಘ ಪರಿಹಾರ ಪೌರತ್ವ ತಿದ್ದುಪಡಿ ಮಾಡಿ ಕಾಯ್ದೆ ಜಾರಿಗೆ ತರುವ ಮೂಲಕ ಸಂವಿಧಾನ ಆಶಯಕ್ಕೆ ಕೊಡಲಿ ಪೆಟ್ಟು ನೀಡಿದ್ದಾರೆ ಎಂದು ಆರೋಪಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯು ಜನರ ಮಾನವೀಯ ಮೌಲ್ಯ, ಸರ್ವ ಜನರು ಭ್ರಾತೃತ್ವದಲ್ಲಿಇರಬೇಕು ಎಂಬ ಅಶಯಗಳಿಗೆ ತಿಲಾಂಜಲಿ ಹಾಡುವ ಜತೆಗೆ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಹೊಸಕಿ ಹಾಕುವ ದುರುಳ ಪ್ರಯತ್ನ ಇದಾಗಿದೆ. ಕೂಡಲೇ ರಾಷ್ಟ್ರ್ರದ ಎಲ್ಲಜನರು ಈ ಹಿಂದೆ ಕ್ವಿಟ್‌ ಇಂಡಿಯಾ ಚಳವಳಿ ಹೋರಾಟದಂತೆ ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಬೇಕಿದೆ ಎಂದು ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ