ಆ್ಯಪ್ನಗರ

ಹುಬ್ಬಳ್ಳಿಯಲ್ಲಿ ಊಟ ಆರ್ಡರ್ ಮಾಡಿದ್ರೆ ಮಾತ್ರ ನೀರು

ರಾಜ್ಯದಲ್ಲಿ ನೀರಿನ ಹಾಹಾಕಾರ ತಲೆದೊರಿರುವ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಊಟ ಆರ್ಡರ್ ಮಾಡಿದರೇ ಮಾತ್ರ ಕುಡಿಯಲು ನೀರು ಕೊಡುವ ಸ್ಥಿತಿ ನಿರ್ಮಾಣವಾಗಿದೆ.

ಟೈಮ್ಸ್ ಆಫ್ ಇಂಡಿಯಾ 16 Apr 2017, 3:13 pm
ಹುಬ್ಬಳ್ಳಿ: ಗ್ರಾಹಕರು ರೆಸ್ಟೋರೆಂಟ್‌ಗಳಿಗೆ ಹೋದಾಗ ಕುಡಿಯಲು ನೀರು ತಂದು ಕೊಡುವುದು ಸಾಮಾನ್ಯ. ಆದರೆ, ರಾಜ್ಯದಲ್ಲಿ ನೀರಿನ ಹಾಹಾಕಾರ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಊಟ ಆರ್ಡರ್ ಮಾಡಿದರೇ ಮಾತ್ರ ಕುಡಿಯಲು ನೀರು ಕೊಡುವ ಸ್ಥಿತಿ ನಿರ್ಮಾಣವಾಗಿದೆ.
Vijaya Karnataka Web order food if you want free water in hubballi
ಹುಬ್ಬಳ್ಳಿಯಲ್ಲಿ ಊಟ ಆರ್ಡರ್ ಮಾಡಿದ್ರೆ ಮಾತ್ರ ನೀರು


ರಾಜ್ಯದಲ್ಲಿ ತೀವ್ರ ಬರಸ್ಥಿತಿ ಎದುರಾಗಿದ್ದು, ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ದಣಿದು ಬಂದವರಿಗೆ ಕುಡಿಯಲು ನೀರು ಕೊಡುವುದು ಸಂಸ್ಕೃತಿ. ಆದರೆ, ಹುಬ್ಬಳ್ಳಿ-ಧಾರವಾಡದ ಅನೇಕ ಚಿಕ್ಕ ಉಪಹಾರ ಕೇಂದ್ರಗಳಲ್ಲಿ ಗ್ರಾಹಕರು ಊಟ ಆರ್ಡರ್ ಮಾಡಿದರೇ ಮಾತ್ರ ಕುಡಿಯಲು ನೀರು ನೀಡುವ ಸ್ಥಿತಿ ಇದೆ.

'ನಾನು ಟೀ ಕುಡಿಯಲು ಹುಬ್ಬಳ್ಳಿಯ ಕೇಂದ್ರ ಬಸ್ ನಿಲ್ದಾಣದ ಬಳಿ ಇರುವ ಚಿಕ್ಕ ಹೋಟೆಲ್‌ವೊಂದಕ್ಕೆ ತೆರಳಿದ್ದೆ. ಈ ವೇಳೆ ಕುಡಿಯಲು ನೀರು ಕೇಳಿದರೇ, ಊಟ , ತಿಂಡಿ ಆರ್ಡರ್ ಮಾಡಿದರೆ ಮಾತ್ರ ಕುಡಿಯಲು ನೀರು ಕೊಡುವುದಾಗಿ ವೇಟರ್‌ಗಳು ಹೇಳುತ್ತಾರೆ' ಎಂದು ಚಬ್ಬಿ ಗ್ರಾಮದ ತಿಪ್ಪಣ್ಣ ಕುರೆಕುಪ್ಪಿ ಹೇಳಿಕೊಂಡಿದ್ದಾರೆ.

'ನೀರಿನ ಕೊರತೆಯಿಂದ ನಾವು ಪ್ರತಿದಿನ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದೇವೆ. ಇದ್ದಕ್ಕೆ ದಿನವೊಂದಕ್ಕೆ 700-800 ರೂ. ಖರ್ಚು ಮಾಡಬೇಕಾಗುತ್ತಿದೆ. ಹೀಗಾಗಿ ನಾವು ಈ ನಿಯಮವನ್ನು ಪಾಲಿಸಬೇಕಾಗುತ್ತಿದೆ' ಎಂದು ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ