ಆ್ಯಪ್ನಗರ

ಮರದ ಬೊಡ್ಡೆ ಸುತ್ತ ಜಾಗ ಬಿಡಲು ಆದೇಶ

ಹುಬ್ಬಳ್ಳಿ : ರಸ್ತೆ ಬದಿ ಬೆಳೆದಿರುವ ಮರಗಳ ಸುತ್ತಲೂ ಕಾಂಕ್ರೀಟ್‌ ಇಲ್ಲವೇ ಪೆವರ್ಸ್‌ ಅಳವಡಿಸುವುದು ಅಪರಾಧ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು 2013ರಲ್ಲೇ ತೀರ್ಪು ನೀಡಿದೆ. ಆದರೆ, ಇದನ್ನು ಗಾಳಿಗೆ ತೂರಿರುವ ಮಹಾನಗರ ಪಾಲಿಕೆ ಎಂಜಿನಿಯರ್‌ಗಳು ಮತ್ತು

Vijaya Karnataka 6 Jul 2019, 5:00 am
ಹುಬ್ಬಳ್ಳಿ : ರಸ್ತೆ ಬದಿ ಬೆಳೆದಿರುವ ಮರಗಳ ಸುತ್ತಲೂ ಕಾಂಕ್ರೀಟ್‌ ಇಲ್ಲವೇ ಪೆವರ್ಸ್‌ ಅಳವಡಿಸುವುದು ಅಪರಾಧ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು 2013ರಲ್ಲೇ ತೀರ್ಪು ನೀಡಿದೆ. ಆದರೆ, ಇದನ್ನು ಗಾಳಿಗೆ ತೂರಿರುವ ಮಹಾನಗರ ಪಾಲಿಕೆ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರು ಮರಗಳಿಗೆ ಒಂದು ಹನಿ ನೀರು ಕೂಡ ಇಂಗದಂತೆ ಕಾಂಕ್ರೀಟ್‌,ಪೇವರ್ಸ್‌ ಹಾಕಿದ್ದಾರೆ. ಆದರೆ, ಇನ್ನು ಮುಂದೆಯಾದರೂ ತೀರ್ಪು ಪಾಲಿಸಬೇಕು. ಮತ್ತು ಕಾಂಡದ ಸುತ್ತ ಕನಿಷ್ಠ 1 ಮೀಟರ್‌ನಷ್ಟು ಸುತ್ತಳತೆ ಜಾಗ ಬಿಟ್ಟು ಕಾಮಗಾರಿ ನಡೆಸಬೇಕೆಂದು ಪಾಲಿಕೆ ಆಯುಕ್ತ ಪ್ರಶಾಂತ ಮಿಶ್ರಾ ಆದೇಶ ಹೊರಡಿಸಿದ್ದಾರೆ.
Vijaya Karnataka Web HBL-0507-2-3-TREE-6
ಮರದ ಬೊಡ್ಡೆ ಸುತ್ತ ಜಾಗ ಬಿಡಲು ಆದೇಶ


ಈಗಾಗಲೇ ಮರದ ಸುತ್ತಲೂ ಹಾಕಿರುವ ಕಾಂಕ್ರಿಟ್‌ ಮತ್ತು ಪೆವರ್ಸ್‌ಗಳನ್ನು ಕಡ್ಡಾಯವಾಗಿ ತೆರವುಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಬಗ್ಗೆ ದೂರುಗಳು ಮರುಕಳಿಸಿದಲ್ಲಿ ಅನುಷ್ಠಾನಗೊಳಿಸುವ ಇಲಾಖೆಗಳೇ ಹೊಣೆಗಾರರಾಗುತ್ತಾರೆ ಎಂದೂ ಆಯುಕ್ತ ಮಿಶ್ರಾ ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ