ಆ್ಯಪ್ನಗರ

ನೆಲ ಜಲ ಸಂರಕ್ಷಣೆಗೆ ಸಾಂಘಿಕ ಯತ್ನ ಅಗತ್ಯ

ಧಾರವಾಡ :ನೆಲ ಜಲ ಸಂರಕ್ಷ ಣೆಯ ಪ್ರಯತ್ನಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳುವುದು ಅವಶ್ಯವಿದೆ ಎಂದು ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ತಿಳಿಸಿದರು.

Vijaya Karnataka 5 May 2018, 5:00 am
ಧಾರವಾಡ :ನೆಲ ಜಲ ಸಂರಕ್ಷ ಣೆಯ ಪ್ರಯತ್ನಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳುವುದು ಅವಶ್ಯವಿದೆ ಎಂದು ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ತಿಳಿಸಿದರು. ನಗರದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯು ಶುಕ್ರವಾರ ತುಂಗಭದ್ರಾ ಯೋಜನೆಯ ನೀರು ಬಳಕೆದಾರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಭೂ ಅಭಿವೃದ್ಧಿ ಸಂರಕ್ಷ ಣೆ ಮತ್ತು ನಿರ್ವಹಣೆ, ಉತ್ಪಾದಕತೆ ಹೆಚ್ಚಳ, ಸುಸ್ಥಿರ ಕೃಷಿ, ಸವಳು-ಜವಳು, ಭೂ ಸುಧಾರಣೆ ಹಾಗೂ ಕೃಷಿ ಉತ್ಪನ್ನ ನಿರ್ವಹಣೆ ಕುರಿತು ಮೂರು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Vijaya Karnataka Web organic effort is essential for ground water conservation
ನೆಲ ಜಲ ಸಂರಕ್ಷಣೆಗೆ ಸಾಂಘಿಕ ಯತ್ನ ಅಗತ್ಯ


ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ನೀರಿಗಾಗಿ ಕಲಹಗಳು ಉದ್ಭವಿಸುತ್ತವೆ ಎಂದು ಸಿರಿಯಾ ರಾಷ್ಟ್ರದ ದುಸ್ಥಿತಿಯನ್ನು ಉದಾಹರಿಸಿ, ಒಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ನಾಗರಿಕತೆಯ ಇಂದಿನ ದುಸ್ಥಿತಿಗೆ ಕಾರಣ ಅಲ್ಲಿಯ ನೆಲ ಜಲದ ದುರುಪಯೋಗ ಹಾಗೂ ದಿವಾಳಿತನ ಎಂದರು. ಇಂತಹ ಸಮಸ್ಯೆಗಳಿಗೆ ಗ್ರಾಮ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ವೈಯಕ್ತಿಕ ಹಾಗೂ ಸಾಂಘಿಕ ಪ್ರಯತ್ನಗಳು ನಡೆಯಬೇಕಿದೆ. ನೆಲ ಹಾಗೂ ಜಲ ಸಂರಕ್ಷ ಣೆ ಮತ್ತು ಸದ್ಭಳಕೆ ಮೂಲಕ ಸಮಗ್ರ ಕೃಷಿ ಮಾಡಲು ಸಾಧ್ಯವಾಗುವುದು ಮತ್ತು ಆ ಮೂಲಕ ಹೆಚ್ಚಿನ ಕೃಷಿ ಆದಾಯದಿಂದ ರೈತರ ಬದುಕನ್ನು ಸದೃಢಗೊಳಿಸಬಹುದಾಗಿದೆ ಎಂದರು.

ಜಲ-ನೆಲ ಸಂರಕ್ಷ ಣೆಗೆ ಕರ್ನಾಟಕ ರಾಜ್ಯ ಸರಕಾರವು ರೈತರ ಸಹಭಾಗಿತ್ವದಲ್ಲಿ ನೀರಾವರಿ ಪದ್ಧತಿ ಎಂಬ ಕಾಯ್ದೆ ರಚಿಸಿ ಅನುಷ್ಠಾನಗೊಳಿಸುತ್ತಿದೆ. ಈ ಕಾಯ್ದೆಯಡಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ರಚಿಸಿ ರೈತರೇ ನೀರಿನ ಸಂಪೂರ್ಣ ನಿರ್ವಹಣೆಯನ್ನು ವಹಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಮೂರು ದಿನಗಳವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ರೈತರಿಗೆ ನೆ,ಜಲ ನಿರ್ವಹಣೆ ಕುರಿತು ಸಂವಾದ ನಡೆಸಲಿದ್ದಾರೆ.

ಸಹಾಯಕ ನಿರ್ದೇಶಕ ರವೀಂದ್ರ ಎಂ ಭಟ್‌, ಎಸ್‌.ಬಿ. ಮಗದುಂ, ಪಾರ್ವತಿ ಗಿರಿಗೌಡರ್‌, ರೈತ ಮುಖಂಡ ಶಿವಾನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ