ಚಿತ್ರಕಲೆ ಸ್ಪರ್ಧೆ 17ಕ್ಕೆ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅರಿಲ್ ಅಸೋಸಿಯೇಶನ್ ಆಫ್ ರೂರಲ್ ಅರ್ಬನ್ ಡೆವಲಪಮೆಂಟ್, ಅಕ್ಷರ ಕಿಡ್ಸ್ ಸ್ಕೂಲ್, ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಗ್ರಾಮ ಪಂಚಾಯಿತಿ ಗ್ರಂಥಾಲಯ
Vijaya Karnataka 13 Nov 2019, 5:00 am
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅರಿಲ್ ಅಸೋಸಿಯೇಶನ್ ಆಫ್ ರೂರಲ್ ಅರ್ಬನ್ ಡೆವಲಪಮೆಂಟ್, ಅಕ್ಷರ ಕಿಡ್ಸ್ ಸ್ಕೂಲ್, ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಗ್ರಾಮ ಪಂಚಾಯಿತಿ ಗ್ರಂಥಾಲಯ ಕಾಲವಾಡ ಆಶ್ರಯದಲ್ಲಿಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ಕನ್ನಡ ನಾಡು-ನುಡಿಗಾಗಿ ಹೋರಾಡಿದ ಹಾಗೂ ಕನ್ನಡ ಸಾಹಿತ್ಯ ದಿಗ್ಗಜರ ಭಾವಚಿತ್ರ ಬಿಡಿಸುವ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿದೆ.
ನವಲಗುಂದ ತಾಲೂಕಿನ ಕಾಲವಾಡ ಶಾಲಾ ಆವರಣದಲ್ಲಿ ನ.17ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು, ತಾವು ರಚಿಸಿದ ಚಿತ್ರಕಲೆ ಸಂಬಂಧಿಸಿದ ಮುಖ್ಯೋಪಾಧ್ಯಾಯರು, ವರ್ಗ ಶಿಕ್ಷಕರ ಸಹಿ ಹಾಗೂ ಶಾಲೆಯ ಮುದ್ರೆ (ಸಿಲ್) ದೊಂದಿಗೆ ನ.15ರೊಳಗೆ ಕಾಲವಾಡ ಗ್ರಾಮ ಪಂಚಾಯಿತಿ ಗ್ರಂಥಾಲಯದ ಜಿ.ಸಿ. ಹಡಪದ ಪಿನ್ ಕೋಡ್ 582208 ವಿಳಾಸಕ್ಕೆ ತಲುಪುವಂತೆ ಕಳಿಸಬೇಕು.
ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನ.17ರಂದು ಕಾಲವಾಡದಲ್ಲಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ. 9739746222 ಸಂಪರ್ಕಿಸಬೇಕೆಂದು ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್. ಉಡಿಕೇರಿ ಮತ್ತು ಮಕ್ಕಳ ಮಂಟಪದ ಸಂಚಾಲಕ ಶಿವಾನಂದ ಭಾವಿಕಟ್ಟಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ನವಲಗುಂದ ತಾಲೂಕಿನ ಕಾಲವಾಡ ಶಾಲಾ ಆವರಣದಲ್ಲಿ ನ.17ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು, ತಾವು ರಚಿಸಿದ ಚಿತ್ರಕಲೆ ಸಂಬಂಧಿಸಿದ ಮುಖ್ಯೋಪಾಧ್ಯಾಯರು, ವರ್ಗ ಶಿಕ್ಷಕರ ಸಹಿ ಹಾಗೂ ಶಾಲೆಯ ಮುದ್ರೆ (ಸಿಲ್) ದೊಂದಿಗೆ ನ.15ರೊಳಗೆ ಕಾಲವಾಡ ಗ್ರಾಮ ಪಂಚಾಯಿತಿ ಗ್ರಂಥಾಲಯದ ಜಿ.ಸಿ. ಹಡಪದ ಪಿನ್ ಕೋಡ್ 582208 ವಿಳಾಸಕ್ಕೆ ತಲುಪುವಂತೆ ಕಳಿಸಬೇಕು.
ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನ.17ರಂದು ಕಾಲವಾಡದಲ್ಲಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ. 9739746222 ಸಂಪರ್ಕಿಸಬೇಕೆಂದು ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್. ಉಡಿಕೇರಿ ಮತ್ತು ಮಕ್ಕಳ ಮಂಟಪದ ಸಂಚಾಲಕ ಶಿವಾನಂದ ಭಾವಿಕಟ್ಟಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.