ಆ್ಯಪ್ನಗರ

ಪಾಕ್‌ ಬೇಕಿದ್ದರೆ ನೇರವಾಗಿ ಯುದ್ಧ ಮಾಡಲಿ, ಕುತಂತ್ರ ಬುದ್ಧಿ ಬಿಡಲಿ: ವೀರೇಂದ್ರ ಹೆಗ್ಗಡೆ

ಪಾಕಿಸ್ತಾನಕ್ಕೆ ಶಾಂತಿ ಬೇಕಾದರೆ ರಾಜತಾಂತ್ರಿಕತೆ ಬಳಸಿ ಮಾತಾಡಲಿ. ಯುದ್ದ ಬೇಕಾದರೆ ಘೋಷಣೆ ಮಾಡಿ ನೇರವಾಗಿ ಗಡಿಯಲ್ಲಿ ಯುದ್ದ ಮಾಡಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು

Vijaya Karnataka Web 28 Feb 2019, 6:19 pm
ಧಾರವಾಡ: ಜಮ್ಮು ಹಾಗೂ ಕಾಶ್ಮೀರದ ಪುಲ್ವಾಮಾ ಘಟನೆಯಿಂದ ಭಾರತೀಯ ನಾಗರಿಕರಲ್ಲಿ ಏಕತೆ ಮೂಡಿದೆ. ಪಾಕಿಸ್ತಾನ ತನ್ನ ಸಮಸ್ಯೆಯನ್ನು ರಾಜತಾಂತ್ರಿಕವಾಗಿ ಬಗೆಹರಿಸಿಕೊಳ್ಳಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
Vijaya Karnataka Web ವೀರೇಂದ್ರ ಹೆಗ್ಗಡೆ
ವೀರೇಂದ್ರ ಹೆಗ್ಗಡೆ


ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಶಾಂತಿ ಬೇಕಾದರೆ ರಾಜತಾಂತ್ರಿಕತೆ ಬಳಸಿ ಮಾತಾಡಲಿ. ಯುದ್ದ ಬೇಕಾದರೆ ಘೋಷಣೆ ಮಾಡಿ ನೇರವಾಗಿ ಗಡಿಯಲ್ಲಿ ಯುದ್ದ ಮಾಡಲಿ ಎಂದರು.

ಆದರೆ ಅತಂತ್ರ, ಆತಂಕ ಹಾಗೂ ಅಶಾಂತಿ ಸ್ಥಿತಿ ತಂದೊಡ್ಡುವ ಪ್ರಯತ್ನವನ್ನು ಪಾಕಿಸ್ತಾನ ಕೈ ಬಿಡಬೇಕು. ಇನ್ನಾದರೂ ಪಾಕಿಸ್ತಾನ ಎಚ್ಚೆತ್ತುಕೊಳ್ಳಲಿ ಎಂದು ಹೇಳಿದರು.

ಯುದ್ಧವನ್ನೂ ಮಾಡದೇ, ಶಾಂತಿಯನ್ನೂ ಬಯಸದೇ ಹಿಂಬದಿಯಲ್ಲಿ ಶಾಂತಿ ಕದಲುವ ಕೆಲಸ ಮಾಡುತ್ತಿರುವ ಪಾಕಿಸ್ತಾನದ ಇಂತಹ ಹೇಯ ಕತ್ಯಗಳು ನಿಜಕ್ಕೂ ಖಂಡನೀಯ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.

ಸದ್ಯ ಗಡಿಯಲ್ಲಿ ಸೆ‘ನಿಕರೊಂದಿಗೆ ಯುದ್ದಕ್ಕಿಂತ ಆಂತರಿಕ ಯುದ್ದ ಬಹಳ ಕಷ್ಟ. ಜಮ್ಮು ಮತ್ತು ಕಾಶ್ಮೆರದಲ್ಲಿ ಇಂತಹ ಸ್ಥಿತಿ ಇದ್ದು, ಕಾಶ್ಮೀರದ ಪ್ರಜೆಗಳೊಂದಿಗೆ ಹೋರಾಡುವ ಸ್ಥಿತಿ ನಮ್ಮ ಸೈನಿಕರಿಗೆ ಇದೆ. ಬೂದಿ ಮುಚ್ಚಿದ ಕೆಂಡದಂತೆ ಇರುವ ಆ ಪ್ರದೇಶದಲ್ಲಿ ಮಿತ್ರರು ಯಾರು? ಶತ್ರುಗಳು ಯಾರು ಎಂಬುದನ್ನೇ ಗುರುತಿಸುವುದು ಕಷ್ಟಕರವಾಗಿದೆ ಎಂದರು.

ಮಕ್ಕಳು, ಮಹಿಳೆಯರೂ ಸೈನಿಕರಿಗೆ ಕಲ್ಲೇಟು ನೀಡುತ್ತಾರೆ. ಇಂತಹ ಗಂಭೀರ ಪರಿಸ್ಥಿತಿಯನ್ನು ನಮ್ಮ ಸೈನಿಕರು ಎದುರಿಸುತ್ತಿದ್ದು, ರಕ್ಷಣಾ ಇಲಾಖೆ ಅಸಹಾಯಕ ಸ್ಥಿತಿಯಲ್ಲಿದೆ ಎಂಬುದನ್ನು ತಾವು ಕಾಶ್ಮೀರಕ್ಕೆ ಹೋದಾಗ ಅನುಭವಕ್ಕೆ ಬಂದಿದೆ ಎಂದು ಧರ್ಮಾಧಿಕಾರಿಗಳು ಹೇಳಿದರು.

ದೇಶದ ಜನರ ರಕ್ತ ಕುದಿಯುವಂತೆ ಮಾಡಿದ ಪಾಕಿಸ್ತಾನ

ಪುಲ್ವಾಮಾದದಲ್ಲಿ ಸೈನಿಕರ ಮೇಲೆ ದಾಳಿ ಮಾಡುವ ಮೂಲಕ ಪಾಕಿಸ್ತಾನ ದ್ರೋಹ ಎಸಗಿದೆ. ಈ ಈ ಘಟನೆಯಿಂದ ದೇಶದ ಜನರ ರಕ್ತ ಕುದಿಯುವಂತೆ ಆಗಿದ್ದು, ಇದೀಗ ದೇಶವೇ ಒಗ್ಗಟ್ಟಾಗಿ ಏಕಸೂತ್ರ ಪಡೆದಿದೆ. ಸೈನಿಕರ ಪರ ದೇಶವೇ ಒಂದಾಗಿ ನಿಲ್ಲುವಂತೆ ಆಗಿದ್ದು, ಈ ಒಗ್ಗಟ್ಟು ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಪಾಕಿಸ್ತಾನಕ್ಕೆ ಧನ್ಯವಾದಗಳು ಎಂದು ಡಾ. ವಿರೇಂದ್ರ ಹೆಗ್ಗಡೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ