ಮೌಲಾ ನದಾಫ್
ಹುಬ್ಬಳ್ಳಿ: ನೈಸರ್ಗಿಕವಾಗಿ ತಯಾರಿಸ್ಪಡುವ ತಾಟಿ ಬೆಲ್ಲ (palm jaggery) ದಲ್ಲಿಅತ್ಯುತ್ತಮ ಔಷಧಿ ಗುಣಗಳಿವೆ! ಅಸ್ತಮಾ, ಅಲರ್ಜಿ ಮತ್ತು ಉಸಿರಾಟದ ತೊಂದರೆ ತಡೆಗಟ್ಟುವ ಗುಣವಿರುವ ತಾಟಿ ಬೆಲ್ಲಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಈಗ ಹುಬ್ಬಳ್ಳಿ-ಧಾರವಾಡಕ್ಕೆ ತಾಟಿಬೆಲ್ಲಲಗ್ಗೆ ಇಟ್ಟಿದೆ.
ಹೆಚ್ಚಾಗಿ ತಮಿಳುನಾಡಿನಲ್ಲಿತಯಾರಿಸುವ ಮತ್ತು ರಾಸಾಯನಿಕಗಳಿಂದ ಮುಕ್ತವಾಗಿರುವ ತಾಟಿಬೆಲ್ಲಅವಳಿನಗರದ ಪ್ರಮುಖ ರಸ್ತೆಯಲ್ಲಿಮಾರಾಟ ಮಾಡಲಾಗುತ್ತಿದೆ. ಪ್ಲೇನ್ ಬೆಲ್ಲ(ಮಸಾಲೆ ಇಲ್ಲದ್ದು) ಕೆಜಿಗೆ 140 ರೂ. ಮತ್ತು ಮಸಾಲೆ ಮಿಶ್ರಿತ ಬೆಲ್ಲ(ಶುಂಠಿ, ಲಾವಂಗ, ಜಿರಿಗೆ, ಮೆಣಸು ಇತರೆ ಔಷಧ ಗುಣವಿರುವ ಮಸಾಲೆ) ಕೆಜಿಗೆ 240 ರೂ.ಗೆ ಮಾರಾಟವಾಗುತ್ತಿದೆ.
ಪ್ರತಿ ವರ್ಷ ತಮಿಳುನಾಡು, ಕೇರಳ ರಾಜ್ಯದ ತಾಟಿಬೆಲ್ಲದ ವ್ಯಾಪಾರಿಗಳು ಚಳಿಗಾಲ ಆರಂಭವಾಯಿತು ಎಂದರೆ ರಾಜ್ಯಕ್ಕೆ ಬಂದು ಬೆಲ್ಲಮಾರಾಟ ಮಾಡುತ್ತಾರೆ. ಪ್ರತಿ ನಗರಗಳಲ್ಲಿ1-3 ದಿನ ಮಾತ್ರ ಬೆಲ್ಲಮಾರಾಟ ಮಾಡುವ ಇವರು ಎಲ್ಲಕಡೆಯಲ್ಲಿಒಂದೇ ದರದಲ್ಲಿಮಾರಾಟ ಮಾಡುತ್ತಿರುವುದು ವಿಶೇಷ.
ಹುಬ್ಬಳ್ಳಿಯ ಗಬ್ಬೂರು ಕ್ರಾಸ್ನಿಂದ ಬಂಕಾಪೂರ ಚೌಕ್ವರೆಗೆ ರಸ್ತೆಯ ಎರಡು ಬಂದಿಯಲ್ಲಿತಮಿಳುನಾಡಿನ 8 ಜನ ವ್ಯಾಪಾರಿಗಳು ಮತ್ತು ಧಾರವಾಡದ ಉದಯ ಹಾಸ್ಟೆಲ್ ಸರ್ಕಲ್, ದಾಸನಕೊಪ್ಪ ಕ್ರಾಸ್ನಲ್ಲಿ ಕಳೆದ ಎರಡು ದಿನಗಳಿಂದ ತಾಟಿಬೆಲ್ಲಮಾರಾಟ ಮಾಡುತ್ತಿರುವುದು ಕಂಡು ಬಂತು.
ತಾಟಿಬೆಲ್ಲದಿಂದ ಚಹಾ, ಕಾಫಿ ಮಾಡಿಕೊಂಡು ನಿತ್ಯ ಎರಡು ಹೊತ್ತು ಕುಡಿದರೆ ಕೆಮ್ಮು, ಅಸ್ತಮಾ, ಕಂಟಲು ಕಿರಿಕಿರಿ, ತಲೆನೋವು ಕಡಿಮೆಯಾಗುತ್ತದೆ ಅಲ್ಲದೇ ರಕ್ತ ಹೀನತೆ ಸಮಸ್ಯೆ ಇರುವವರಿಗೆ, ಬಾಣಂತಿಯರು, ಗರ್ಭಿಣಿಯರು ಮಿತವಾಗಿ ಬಳಕೆ ಮಾಡಿದರೆ ಉತ್ತಮ ಎನ್ನುತ್ತಾರೆ ಡಾ.ಶರಣಪ್ಪ ಬಿ.
ಬೆಲ್ಲತಯಾರಿಸುವ ವಿಧಾನ
ತಾಳೆಮರ ಹಾಲು ಸಂಗ್ರಹಿಸಿ, ಅದರಲ್ಲಿಯಾವುದೇ ರಾಸಾಯನಿಕ ಬಳಕೆ ಮಾಡದೇ ನೈಸರ್ಗಿಕವಾಗಿ ತಾಟಿಬೆಲ್ಲತಯಾರು ಮಾಡಲಾಗುತ್ತದೆ. ಔಷಧ ಗುಣವಿರುವ ಶುಂಠಿ, ಲಾವಂಗ, ಜೀರಿಗೆ, ಮೆಣಸು ಇತರೆ ಮಸಾಲೆ ಪದಾರ್ಥಗಳನ್ನು ಬಳಕೆ ಮಾಡಿ ತಾಟಿಬೆಲ್ಲತಯಾರಿಸಲಾಗುತ್ತದೆ. ಇದರ ಬಣ್ಣ ಕಪ್ಪಾಗಿರುತ್ತದೆ.
ಹುಬ್ಬಳ್ಳಿ: ನೈಸರ್ಗಿಕವಾಗಿ ತಯಾರಿಸ್ಪಡುವ ತಾಟಿ ಬೆಲ್ಲ (palm jaggery) ದಲ್ಲಿಅತ್ಯುತ್ತಮ ಔಷಧಿ ಗುಣಗಳಿವೆ! ಅಸ್ತಮಾ, ಅಲರ್ಜಿ ಮತ್ತು ಉಸಿರಾಟದ ತೊಂದರೆ ತಡೆಗಟ್ಟುವ ಗುಣವಿರುವ ತಾಟಿ ಬೆಲ್ಲಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಈಗ ಹುಬ್ಬಳ್ಳಿ-ಧಾರವಾಡಕ್ಕೆ ತಾಟಿಬೆಲ್ಲಲಗ್ಗೆ ಇಟ್ಟಿದೆ.
ಹೆಚ್ಚಾಗಿ ತಮಿಳುನಾಡಿನಲ್ಲಿತಯಾರಿಸುವ ಮತ್ತು ರಾಸಾಯನಿಕಗಳಿಂದ ಮುಕ್ತವಾಗಿರುವ ತಾಟಿಬೆಲ್ಲಅವಳಿನಗರದ ಪ್ರಮುಖ ರಸ್ತೆಯಲ್ಲಿಮಾರಾಟ ಮಾಡಲಾಗುತ್ತಿದೆ. ಪ್ಲೇನ್ ಬೆಲ್ಲ(ಮಸಾಲೆ ಇಲ್ಲದ್ದು) ಕೆಜಿಗೆ 140 ರೂ. ಮತ್ತು ಮಸಾಲೆ ಮಿಶ್ರಿತ ಬೆಲ್ಲ(ಶುಂಠಿ, ಲಾವಂಗ, ಜಿರಿಗೆ, ಮೆಣಸು ಇತರೆ ಔಷಧ ಗುಣವಿರುವ ಮಸಾಲೆ) ಕೆಜಿಗೆ 240 ರೂ.ಗೆ ಮಾರಾಟವಾಗುತ್ತಿದೆ.
ಪ್ರತಿ ವರ್ಷ ತಮಿಳುನಾಡು, ಕೇರಳ ರಾಜ್ಯದ ತಾಟಿಬೆಲ್ಲದ ವ್ಯಾಪಾರಿಗಳು ಚಳಿಗಾಲ ಆರಂಭವಾಯಿತು ಎಂದರೆ ರಾಜ್ಯಕ್ಕೆ ಬಂದು ಬೆಲ್ಲಮಾರಾಟ ಮಾಡುತ್ತಾರೆ. ಪ್ರತಿ ನಗರಗಳಲ್ಲಿ1-3 ದಿನ ಮಾತ್ರ ಬೆಲ್ಲಮಾರಾಟ ಮಾಡುವ ಇವರು ಎಲ್ಲಕಡೆಯಲ್ಲಿಒಂದೇ ದರದಲ್ಲಿಮಾರಾಟ ಮಾಡುತ್ತಿರುವುದು ವಿಶೇಷ.
ಹುಬ್ಬಳ್ಳಿಯ ಗಬ್ಬೂರು ಕ್ರಾಸ್ನಿಂದ ಬಂಕಾಪೂರ ಚೌಕ್ವರೆಗೆ ರಸ್ತೆಯ ಎರಡು ಬಂದಿಯಲ್ಲಿತಮಿಳುನಾಡಿನ 8 ಜನ ವ್ಯಾಪಾರಿಗಳು ಮತ್ತು ಧಾರವಾಡದ ಉದಯ ಹಾಸ್ಟೆಲ್ ಸರ್ಕಲ್, ದಾಸನಕೊಪ್ಪ ಕ್ರಾಸ್ನಲ್ಲಿ ಕಳೆದ ಎರಡು ದಿನಗಳಿಂದ ತಾಟಿಬೆಲ್ಲಮಾರಾಟ ಮಾಡುತ್ತಿರುವುದು ಕಂಡು ಬಂತು.
ತಾಟಿಬೆಲ್ಲದಿಂದ ಚಹಾ, ಕಾಫಿ ಮಾಡಿಕೊಂಡು ನಿತ್ಯ ಎರಡು ಹೊತ್ತು ಕುಡಿದರೆ ಕೆಮ್ಮು, ಅಸ್ತಮಾ, ಕಂಟಲು ಕಿರಿಕಿರಿ, ತಲೆನೋವು ಕಡಿಮೆಯಾಗುತ್ತದೆ ಅಲ್ಲದೇ ರಕ್ತ ಹೀನತೆ ಸಮಸ್ಯೆ ಇರುವವರಿಗೆ, ಬಾಣಂತಿಯರು, ಗರ್ಭಿಣಿಯರು ಮಿತವಾಗಿ ಬಳಕೆ ಮಾಡಿದರೆ ಉತ್ತಮ ಎನ್ನುತ್ತಾರೆ ಡಾ.ಶರಣಪ್ಪ ಬಿ.
ಬೆಲ್ಲತಯಾರಿಸುವ ವಿಧಾನ
ತಾಳೆಮರ ಹಾಲು ಸಂಗ್ರಹಿಸಿ, ಅದರಲ್ಲಿಯಾವುದೇ ರಾಸಾಯನಿಕ ಬಳಕೆ ಮಾಡದೇ ನೈಸರ್ಗಿಕವಾಗಿ ತಾಟಿಬೆಲ್ಲತಯಾರು ಮಾಡಲಾಗುತ್ತದೆ. ಔಷಧ ಗುಣವಿರುವ ಶುಂಠಿ, ಲಾವಂಗ, ಜೀರಿಗೆ, ಮೆಣಸು ಇತರೆ ಮಸಾಲೆ ಪದಾರ್ಥಗಳನ್ನು ಬಳಕೆ ಮಾಡಿ ತಾಟಿಬೆಲ್ಲತಯಾರಿಸಲಾಗುತ್ತದೆ. ಇದರ ಬಣ್ಣ ಕಪ್ಪಾಗಿರುತ್ತದೆ.